Monday, February 10, 2025

ರೋಟರಿ ಕ್ಲಬ್ ಪರಂಗಿಪೇಟೆ ಯ ಪೂರ್ವ ತಯಾರಿ ಸಭೆ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಪ್ರಾಯೋಜಕತ್ವದಲ್ಲಿ ನೂತನ ಕ್ಲಬ್ ಪರಂಗಿಪೇಟೆ ಯನ್ನು ಆರಂಭಿಸುವ ಪೂರ್ವ ತಯಾರಿ ಪ್ರಥಮ  ಸಭೆ ಪರಂಗಿಪೇಟೆ ಯ ಕಾಂತಪ್ಪ ಪೂಂಜ ಸಭಾಂಗಣದಲ್ಲಿ ನಡೆಯಿತು.
ನೂತನ ಕ್ಲಬ್ ನ ಪ್ರಥಮ ಸಭೆಯನ್ನು ಕಾಂತಪ್ಪ ಪೂಂಜ ಸಂಕೀರ್ಣ ಪರಂಗಿಪೇಟೆಯ ಪಾಲುದಾರರಾದ ಅರ್ಜುನ್ ಪೂಂಜ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ರೋಟರಿ  ಮಾಜಿ ಜಿಲ್ಲಾ ಗವರ್ನರ್ ದೇವದಾಸ್ ರೈ ಯವರು ನೂತನ  ಸದಸ್ಯರಿಗೆ  ರೋಟರಿ ಹಿನ್ನೆಲೆ, ರಚನೆ ಮತ್ತು ಚಟುವಟಿಕೆ ಬಗ್ಗೆ ಪುನಶ್ಚೇತನ ಮಾಹಿತಿ ನೀಡಿದರು. ರೋಟರಿ ವಲಯ 4ರ ಕಾರ್ಯದರ್ಶಿ ನಾರಾಯಣ ಹೆಗ್ಡೆ ಪ್ರಾಸ್ತಾವಿಕ ಭಾಷಣ ಮಾಡಿದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್ ರೋಟರಿ ಸೇವಾ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಸಭೆಯಲ್ಲಿ ಸ್ಥಾಪಕಧ್ಯಕ್ಷರಾಗಿ ಜಯರಾಮ ಶೇಖ ,ಕಾರ್ಯದರ್ಶಿ ಯಾಗಿ ರಮೇಶ್ ಶೆಟ್ಟಿ ಮತ್ತು ಕೋಶಾಧಿಕಾರಿಯಾಗಿ ನೊರ್ಬರ್ಟ್ ಡಿಸೋಜ, ಸದಸ್ಯತನ ಅಭಿವೃದ್ಧಿ ಚೆಯರ್ ಮೇನ್ ಆಗಿ  ಸುರೇಂದ್ರ ಕಂಬ್ಳಿ , ರೋಟರಿ ಫೌಂಡೇಶನ್ ಚೆಯರ್ ಮೇನ್ ಆಗಿ ಅಬ್ದುಲ್  ಸಲಾಂ  ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ಉಮೇಶ್ ನಿರ್ಮಲ್ ಸಭೆ ಯ ಅಧ್ಯಕ್ಷತೆಯನ್ನು ವಹಿಸಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸವಿತಾ ನಿರ್ಮಲ್ ಪ್ರಾರ್ಥನೆ  ಮಾಡಿದರು.ಕಾರ್ಯದರ್ಶಿ ಜಯರಾಜ್ ಬಂಗೇರ ಧನ್ಯವಾದ ಸಲ್ಲಿಸಿದರು. ನೂತನ ಕ್ಲಬ್ ಆರಂಭಿಸಲು ಸಹಕರಿಸಿದ ಜಗನ್ನಾಥ ಚೌಟ ,ಗಣೇಶ್ ಶೆಟ್ಟಿ ಗೋಳ್ತಮಜಲ್ ,ಮಹಮ್ಮದ್ ಮುನೀರ್ ಉಪಸ್ತಿತರಿದ್ದರು.

More from the blog

ಯುವ ಸಂಗೀತೋತ್ಸವಕ್ಕೆ ಚಾಲನೆ

ಮಂಗಳೂರು: ಸಾಮಾಜಿಕ ಸ್ವಾಸ್ಥ್ಯ ಕ್ಕಾಗಿ ಮಾನಸಿಕ ನೆಮ್ಮದಿ ನೀಡುವಂತಹ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯವಿದೆ ಎಂದು ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಅವರು ಮಂಗಳೂರಿನ ಕಲಾ ಸಾಧನ ಸಂಸ್ಥೆ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್...

ದೆಹಲಿಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ…. ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ*

  ದೆಹಲಿ ವಿಧಾನ ಸಭೆಗೆ ನಡೆದ ಚುನಾವಣೆ ಯಲ್ಲಿ ಭಾರತೀಯ ಜನತಾ ಪಕ್ಷ 70 ಸ್ಥಾನ ಗಳಲ್ಲಿ ಬರೋಬ್ಬರಿ 48 ಸ್ಥಾನ ಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯಭೇರಿ ಗಳಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ...

ಜುಗಾರಿ ಅಡ್ಡೆಗೆ ದಾಳಿ: ಹತ್ತು ಜನರ ಬಂಧನ

ಬಂಟ್ವಾಳ: ಹಣ ಪಣಕ್ಕಿಟ್ಟು ಜುಗಾರಿ ಆಟ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತ್ರತ್ವದ ತಂಡ ಆಟದಲ್ಲಿ ನಿರತರಾಗಿದ್ದ 10 ಮಂದಿ ಆರೋಪಿಗಳನ್ನು ಹಾಗೂ ಸಾವಿರಾರು...

ಮಾರ್ಬಲ್ ಲಾರಿ ಪಲ್ಟಿ

ಬಂಟ್ವಾಳ: ಮಾರ್ಬಲ್ ಲೋಡ್ ಲಾರಿಯೊಂದು ತಾಂತ್ರಿಕ ದೋಷದಿಂದ ರಸ್ತೆಯ ವಿಭಾಜಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರಾಷ್ಟ್ರೀಯ ಮಂಗಳೂರು- ಬೆಂಗಳೂರು ರಸ್ತೆಯ ತುಂಬೆ ಸಮೀಪದ ರಾಮಲ್ ಕಟ್ಟೆ ಎಂಬಲ್ಲಿ ಪಲ್ಟಿಯಾಗಿದೆ. ಘಟನೆಯಿಂದ ಯಾವುದೇ ಅಪಾಯ...