Wednesday, January 28, 2026

ಪರಂಗಿಪೇಟೆ ನಂ.1 ರಿಕ್ಷಾ ಪಾರ್ಕ್ ನ ಉದ್ಘಾಟನೆ

ಬಂಟ್ವಾಳ: ಶಾಸಕರ ಅನುದಾನದಲ್ಲಿ ಪರಂಗಿಪೇಟೆ ಜಂಕ್ಸನ್ ನಲ್ಲಿ ನೂತನವಾಗಿ 5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಪರಂಗಿಪೇಟೆ ನಂ.1 ರಿಕ್ಷಾ ಪಾರ್ಕ್ ನ ಉದ್ಘಾಟನೆ ಗುರುವಾರ ನಡೆಯಿತು. ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ರಿಕ್ಷಾ ಪಾರ್ಕ್ ನ್ನು ಉದ್ಘಾಟಿಸಿದರು.


ಬಳಿಕ ಮಾತನಾಡಿದ ಅವರು  ಸರ್ವ ರೀತಿಯ ಪ್ರೀತಿಗೆ ಪಾತ್ರರಾದ ವರು ಅಪತ್ಬಾಂದವರು ರಿಕ್ಷಾ ಚಾಲಕರು , ಅವರ ಸರ್ವಾಂಗೀಣ ಅಭಿವೃದ್ಧಿ ಗೆ ಬೇಕಾದ ಸಕಲ ವ್ಯವಸ್ಥೆ ಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.
ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಉದ್ಯೋಗ ದಲ್ಲಿ ಮುಂದುವರಿಯಿರಿ ಎಂದು ಅವರು ಹೇಳಿದರು.ರಿಕ್ಷಾ ಚಾಲಕರ ಬಿಸಿಲು ಮಳೆಯ ಸಂಕಷ್ಟ ಕಡಿಮೆ ಮಾಡಲು ಅವಕಾಶ ಅಗಿದೆ ಎಂದರು.

ಬಂಟ್ವಾಳ ಎ.ಎಸ್.ಪಿ. ಸೈದುಲು ಅಡಾವತ್ ,ಮಾತನಾಡಿ ಎಲ್ಲಾ ಚಾಲಕರೂ ಟ್ರಾಫಿಕ್ ರೂಲ್ಸ್ ಪಾಲೋ ಮಾಡಿ, ಶಿಸ್ತು ಬದ್ಧ ವಾದ ರೀತಿಯಲ್ಲಿ ಕೆಲಸ ಮಾಡುವಂತೆ ಅವರು ತಿಳಿಸಿದರು.

ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ , ಮಾಜಿ ಜಿ.ಪಂ.ಸದಸ್ಯ ಡಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಉಮ್ಮರ್ ಫಾರೂಕ್ , ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಡೊಯಾ ಪಿಂಟೋ , ಸದಸ್ಯ ರಾದ ಹಾಶೀರ್ ಪೆರಿಮಾರ್ , ಇಕ್ಬಾಲ್ ಸುಜೀರ್, ಮಹಮ್ಮದ್ ಮೋನು, ಲಕ್ಷ್ಮೀ , ಸುಜಾತ, ರಝಿಯಾ, ರಿಯಾಜ್ ಕುಂಪಣಮಜಲು, ಕಿಶೋರ್ ಸುಜೀರ್, ಜೀನತ್, ಸಮಾಜ ಸೇವಕರಾದ ಇಸ್ಮಾಯಿಲ್ ವಳಚ್ಚಿಲ್, ಮಾಜಿ.ಅಧ್ಯಕ್ಷ ಪ್ರಕಾಶ್ ಚಂದ್ರ ರೈ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಜಾಫರ್ , ಸದಸ್ಯ ರಾದ ಇನ್ಸಾದ್ , ಆಶ್ರಪ್, ಮಾಜಿ ತಾ.ಪಂ.ಸದಸ್ಯ ಆಶಿಪ್ ಇಕ್ಬಾಲ್, ಮುಯ್ಯದ್ದೀನ್ ಜುಮಾ ಮಸೀದಿ ಅಧ್ಯಕ್ಷ ಎಸ್ ಮಹಮ್ಮದ್ ಬಾವ, ಅಮ್ಮೆಮಾರ್ ಮಸೀದಿ ಅಧ್ಯಕ್ಷ ಉಮರಬ್ಬ, ಮಸೀದಿ ಕಾರ್ಯದರ್ಶಿ ಮಜೀದ್ ಪರಂಗಿಪೇಟೆ, ಪ್ರಮುಖರಾದ ಮಜೀದ್ , ಸಲಾಂ ಮಲ್ಲಿ, ಗಪೂರ್ ದುಬೈ, ಎಂ.ಕೆ.ಮಹಮ್ಮದ್, ಅಬುಬಕ್ಕರ್, ಇಂಮ್ತಿಯಾಜ್ ತುಂಬೆ, ವಲಯ ಅಧ್ಯಕ್ಷ ರಫೀಕ್ ಪೆರಿಮಾರ್ ಮತ್ತಿತರರು ಉಪಸ್ಥಿತರಿದ್ದರು.

More from the blog

ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ – ಒಡಿಯೂರುಶ್ರೀ

ವಿಟ್ಲ: ಸದೃಢ ದೇಶ ನಿರ್ಮಾಣದಲ್ಲಿ ಸೈನಿಕರ ಪರಿಶ್ರಮ, ತ್ಯಾಗ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ನುಡಿದರು. ಅವರು ಒಡಿಯೂರು ರಾಜಾಂಗಣದಲ್ಲಿ...

ವಿಟ್ಲ ಪಡ್ನೂರು : ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ವಿಟ್ಲ: ವಿಟ್ಲ ಪಡ್ನೂರು ವಲಯ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಮತ್ತು ಮೂಲ ಸ್ವರೂಪವನ್ನು ಬದಲಾಯಿಸಿದ ಕೇಂದ್ರ ಸರಕಾರದ ಧೋರಣೆಯ ವಿರುದ್ಧ ವಿಟ್ಲ ಪಡ್ನೂರು ಗ್ರಾಮ...

ಪುತ್ತೂರು : ಅಕ್ರಮ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ – ನಾಲ್ವರ ಬಂಧನ

ಪುತ್ತೂರು : ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪೊಲೀಸರು ಪತ್ತೆ ಹಚ್ಚಿ ದ್ದಾರೆ ಮೊಹಮ್ಮದ್ ಹರ್ಷದ್...

ಕೊರಗ ಸಮುದಾಯದ ಆಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ತಹಶೀಲ್ದಾರ್ ಭೇಟಿ, ಪ್ರತಿಭಟನೆ ಹಿಂಪಡೆದ ಹೋರಾಟಗಾರರು

ಬಂಟ್ವಾಳ: ಬಂಟ್ವಾಳ ಆಡಳಿತ ಸೌಧದ ಕಚೇರಿ ಮುಂಭಾಗದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ ಕೇರಳ, ಕೊರಗ ಅಭಿವೃದ್ಧಿ ಸಂಘ ಬಂಟ್ವಾಳ ತಾಲೂಕು ಇವರ ಜಂಟಿ ಆಶ್ರಯದಲ್ಲಿ ಕೃಷಿ ಭೂಮಿ ಮಂಜೂರಾತಿ,...