ನಿಟ್ಟಡೆ: ನಿಟ್ಟಡೆ ಕುಂಭಶ್ರೀ ಆಂಗ್ಲಮಾದ್ಯಮ ಶಾಲಾ/ಕಾಲೇಜ್ ನಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಇದರ ಅಂಗವಾಗಿ ಶಾಲಾ/ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ರಾಷ್ಟ್ರ ಧ್ವಜವನ್ನು ಹಿಡಿದು ಶಿಸ್ತು ಬದ್ದ ಪಥ ಸಂಚಲನವನ್ನು ವೇಣೂರು ಮುಖ್ಯ ಪೇಟೆಯ ರಾಜ್ಯ ಹೆದ್ದಾರಿಯಾಗಿ ಮಹಾಲಿಂಗೇಶ್ವರ ದೇವಾಲಯದವರೆಗೆ ಸಾಗಿದರು. ಶಾಲಾ ಸಂಚಾಲಕರು ಪಾಲ್ಗೊಂಡಿದ್ದರು.

ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹಾಗೂ ಪೊಲೀಸ್ ವೃಂದದವರು ಶಿಸ್ತು ಬದ್ದ ಪಥ ಸಂಚಲನಕ್ಕೆ ಸಹಕರಿಸಿದರು. ಕಾಲೇಜಿನ ಪ್ರಾಂಶುಪಾಲ ರಕ್ಷಿತ್ ಕುಲಾಲ್ ಬಿ.ಇ. ಅವರು ಗಣರಾಜ್ಯ ದಿನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.