ಬಂಟ್ವಾಳ: ಮೂಡುಪಡುಕೋಡಿ ಬುರೂಜ್ ಇಂ. ಮೀ. ಸ್ಕೂಲ್ ರಝಾನಗರ ಇಲ್ಲಿ ಗಣರಾಜ್ಯೋತ್ಸವ ಸಮಾರಂಭವನ್ನು ಸಂವಿಧಾನದ ಪಿತಾಮಹ ಭಾರತರತ್ನಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿಟ್ಟು ಆಚರಿಸಲಾಯಿತು. ಧರ್ಮಗುರು ಮೊಹಮ್ಮದ್ ಇಲಿಯಾಸ್ ಖಾನ್ ರಝ್ವಿ ಅವರು ಧ್ವಜಾರೋಹಣ ನೆರವೇರಿಸಿದರು. ಶಾಲಾ ಸಂಚಾಲಕ ಜನಾಬ್ ಶೇಕ್ ರಹ್ಮತ್ತುಲ್ಲಾ ಅವರು ಮಾತನಾಡಿದರು. ವಿದ್ಯಾರ್ಥಿಗಳಾದ ಲಿಶಾ ಎನ್. ಶೆಟ್ಟಿ, ಸಾಕ್ಷಾ ಶೆಟ್ಟಿ ಹಾಗೂ ರಕ್ಷಣ್ ಆರ್. ಅಡಪ ಗಣರಾಜ್ಯೋತ್ಸವದ ಬಗ್ಗೆ ಭಾಷಣ ಮಾಡಿದರು. ಇವರಿಗೆ ಶಾಲಾ ಸಂಚಾಲಕ ನಗದು ಪುರಸ್ಕಾರವನ್ನು ನೀಡಿ ಗೌರವಿಸಿದರು.ಶಾಲಾ ಶಿಕ್ಷಕಿಯರಾದ ಶಾಲಿನಿ, ಎಲ್ಸಿ ವಿ.ಕೆ. ಮತ್ತು ಶೋಭಾ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ಶಾಲಾ ನಾಯಕಿ ಶೇಕ್ ಸಾದಿಯಾ ಕಾರ್ಯಕ್ರಮ ನಿರೂಪಿಸಿದರು.

