Thursday, February 13, 2025

ಎ.3 ರಿಂದ ಎ.10 ರವರೆಗೆ ಮತದಾನ ಜಾಗೃತಿ ರಥ ಸಂಚಾರ

 

2019 ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನಾದ್ಯಂತ ಎ.3 ರಿಂದ ಎ.10 ರವರೆಗೆ ಮತದಾನ ಜಾಗೃತಿ ರಥ ಸಂಚಾರ ಹೋಗಲಿದ್ದು ಪಂಚಾಯತ್ ವ್ಯಾಪ್ತಿಯ ಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಬಂಟ್ವಾಳ
ತಾಲೂಕು ಪಂಚಾಯತ್
ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪ.ಜಾತಿ/ಪ.ಪಂಗಡ ಕಾಲನಿಗಳು, ಕೊರಗರ ಕಾಲನಿಗಳು ಹಾಗೂ ಜನವಸತಿ ಪ್ರದೇಶಗಳಿಗೆ ಮತದಾನ ಜಾಗೃತಿ ರಥವು ಸಂಚರಿಸಲಿದ್ದು ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಈ ಬಗ್ಗೆ ವೈಯಕ್ತಿಕ ಗಮನ ಹರಿಸಿ ರಥದ ಚಾಲಕರಿಗೆ ಮಾರ್ಗದ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡುತ್ತಾರೆ.

ರಥ ಸಂಚರಿಸುವ ಮಾರ್ಗ ಮತ್ತು ದಿನಾಂಕ ಈ ಕೆಳಗಿನಂತಿವೆ.

.ಎ: 3 ರಂದು ಅಮ್ಮುಂಜೆ ಕರಿಯಂಗಳ ಬಡಗಬೆಳ್ಳೂರು ಕಳ್ಳಿಗೆ ಮೇರಮಜಲು ತುಂಬೆ ಪುದು
ಎ: 4 ಕಾವಳಮೂಡೂರು ಕಾವಳಪಡೂರು ಪಿಲಾತಬೆಟ್ಟು ಇರ್ವತ್ತೂರು ಚೆನ್ನೈತ್ತೋಡಿ ಕುಕ್ಕಿಪಾಡಿ ಸಂಗಬೆಟ್ಟು ರಾಯಿ ಅರಳ ಪಂಜಿಕಲ್ಲು ಅಮ್ಟಾಡಿ
ಎ: 5 ನಾವೂರು ಸರಪಾಡಿ ಮಣಿನಾಲ್ಕೂರು ಉಳಿ ಬಡಗಕಜೆಕಾರು
ಎ: 6 ಸಜಿಪಮುನ್ನೂರು ಸಜಿಪಮೂಡ ಸಜಿಪನಡು ಸಜಿಪಪಡು ಕುರ್ನಾಡು ಬಾಳೆಪುಣಿ ನರಿಂಗಾನ ಪಜೀರು
ಎ: 7
ಇರಾ ಮಂಚಿ ಕೊಳ್ನಾಡು ಸಾಲೆತ್ತೂರು ವಿಟ್ಲಪಡ್ನೂರು ನರಿಕೊಂಬು ಗೋಳ್ತಮಜಲು

ಎ: 8 .ಬಾಳ್ತಿಲ ಬರಿಮಾರು ಮಾಣಿ ಪೆರಾಜೆ ಕಡೇಶ್ವಾಲ್ಯ ಕೆದಿಲ ಪೆರ್ನೆ

ಎ: 9 .
ಬೋಳಂತೂರು ವೀರಕಂಭ ಅಳಿಕೆ ಪೆರುವಾಯಿ ಮಾಣಿಲ ಕರೋಪಾಡಿ ಕನ್ಯಾನ

ಎ: 10
ಪುಣಚ ಕೇಪು ವಿಟ್ಲಮುಡ್ನೂರು ಇಡ್ಕಿದು ನೆಟ್ಲಮುಡ್ನೂರು ಅನಂತಾಡಿ . ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...