ಬಂಟ್ವಾಳ: ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಯಲ್ಲಿ ಬಿದ್ದು ಪ್ರಾಣಾಪಾಯದಲ್ಲಿರುವವರನ್ನು ರಕ್ಷಿಸುತ್ತಿರುವ ಪಾಣೆಮಂಗಳೂರು ಪರಿಸರದ ನುರಿತ ಈಜುಗಾರರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಲೈಫ್ ಜಾಕೆಟ್ ನ್ನು ಒದಗಿಸಿದರು.


ತಾ.ಪಂ.ಸದಸ್ಯೆ ಗಾಯತ್ರಿ ರವೀಂದ್ರ, ಮಾಣಿ ಗ್ರಾ.ಪಂ.ಸದಸ್ಯ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಪ್ರಕಾಶ್ ಕಾರಂತ, ಉಮೇಶ್, ಅಲ್ಬರ್ಟ್, ಉಮೇಶ್ ನೆಲ್ಲಿಗುಡ್ಡೆ, ಮಾಧವ ಕರ್ಬೆಟ್ಟು, ಅಧಿಕಾರಿಗಳಾದ ಜಗದೀಶ್, ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.

