Monday, January 26, 2026

ನ.5 ರಂದು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಇದರ ವತಿಯಿಂದ ಪುಂಜಾಲಕಟ್ಟೆ ಉತ್ಸವ

ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಇದರ ವತಿಯಿಂದ ನ.5 ರಂದು ಸಂಜೆ 6.30ಗಂಟೆಗೆ ಪುಂಜಾಲಕಟ್ಟೆ ಉತ್ಸವ ಕಾರ್ಯಕ್ರಮ ಪಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ.

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷ ಯಂ.ತುಂಗಪ್ಪ ಬಂಗೇರವರ ನೇತೃತ್ವದಲ್ಲಿ, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಎಂ.ಪ್ರಶಾಂತ್‌ ಪುಂಜಾಲಕಟ್ಟೆ ರವರ ಅಧ್ಯಕ್ಷತೆಯಲ್ಲಿ ರಾಜೇಶ್‌ ಕಣ್ಣೂರ್‌ ಇವರ ಸಂಯೋಜನೆಯೊಂದಿಗೆ ರಾಜ್ಯಮಟ್ಟದ ಗ್ರೂಪ್‌ ಡ್ಯಾನ್ಸ್‌ ಸ್ಪರ್ಧಾ ಕಾಯಕ್ರಮ ಸ್ವಸ್ತಿಕ್ ಡ್ಯಾನ್ಸ್‌ ಬ್ಲಾಸ್ಟ್‌-2022 ಆಯೋಜಿಸಲಾಗಿದೆ.

ರಾಜ್ಯಮಟ್ಟದ ಗ್ರೂಪ್‌ ಡ್ಯಾನ್ಸ್‌ ವಿಜೇತರಿಗೆ ಪ್ರಥಮ 25,000 ಮತ್ತು ಸ್ವಸ್ತಿಕ್ ಡ್ಯಾನ್ಸ್ ಬ್ಲಾಸ್ಟ್ ಟ್ರೋಫಿ, ದ್ವಿತೀಯ 15,000 ಮತ್ತು ಸ್ವಸ್ತಿಕ್ ಡ್ಯಾನ್ ಬ್ಲಾಸ್ಟ್ ಟ್ರೋಫಿ, ತೃತಿಯ 10,000 ಮತ್ತು ಸ್ವಸ್ತಿಕ್ ಡ್ಯಾನ್ಸ್ ಬ್ಲಾಸ್ಟ್ ಟ್ರೋಫಿ ನೀಡಲಾಗುತ್ತದೆ.

ಸ್ಪರ್ಧಾ ಸೂಚನೆಗಳು:

1) ಸ್ವಸ್ತಿಕ್ ಡ್ಯಾನ್ಸ್ ಬ್ಲಾಸ್ಟ್ ಸ್ಪರ್ಧೆಗೆ ಕನಿಷ್ಠ 8 ಜನ

2) ಡ್ಯಾನ್ಸ್ ಸ್ಪರ್ದಿಗಳಿಗೆ ತಮ್ಮ ಸಂಗೀತ ಸಿಡಿ /ಪೆನ್ ಡ್ರೈವ್ ಗಳನ್ನು ತಮ್ಮ ಸ್ಪರ್ಧಾ ಕಾರ್ಯಕ್ರಮದ ಮೊದಲು ಧ್ವನಿವರ್ಧಕರಲ್ಲಿ ನೀಡಬೇಕು.

3) ಸ್ಪರ್ದಾಳುಗಳು ಯಾವುದೇ ತರಹದ ಬೆಂಕಿ ಸುಡುಮದ್ದು ಉಪಯೋಗಿಸುವಂತಿಲ್ಲ. ನೃತ್ಯದ ಸಾಹಸ ಮಾಡುವಾಗ ಜಾಗರೂಕರಾಗಿರಬೇಕು. ಯಾವುದೇ ಅನಾಹುತಗಳಿಗೆ ಸಂಘಟಕರು ಜವಾಬ್ದಾರರಲ್ಲ.

4) ಭಾಗವಹಿಸುವ ಸ್ಪರ್ದಾಳುಗಳು ಯಾವುದೇ ಜಾತಿ ಮತ ಧರ್ಮದ ನಿಂದನೆಗೆ ಆಸ್ಪದವಿರುವುದಿಲ್ಲ. ಎಲ್ಲಾ ಸ್ಪರ್ಧೆಗಳ ಅಂತಿಮ ತೀರ್ಮಾನ ಸಂಘಟಕರದ್ದಾಗಿರುತ್ತದೆ.

ಇನ್ನು ಸ್ಪರ್ದಾಳುಗಳು ತಮ್ಮ ಹೆಸರನ್ನು ನ.03 ರ ಒಳಗೆ  ನೊಂದಾಯಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕ್ಲಬಿನ ಸಂಚಾಲಕ ರಾಜೇಶ್‌.ಪಿ.ಪುಂಜಾಲಕಟ್ಟೆ 9901098038 ಸಂಪರ್ಕಿಸಿ

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...