ಬಂಟ್ವಾಳ: ಸೋಮವಾರವೂ ಮುಂದುವರಿದ ಪುಂಜಾಲಕಟ್ಟೆ ಪೋಲೀಸರ ಕಾರ್ಯಚರಣೆ ವಾಹನಗಳ ವಶಕ್ಕೆ ಪಡೆದುಕೊಂಡ ಎಸ್.ಐ.ಸೌಮ್ಯ.


ಪೋಲೀಸರ ಕಾರ್ಯಚರಣೆ ನಡೆಯುತ್ತಲೇ ಇದೆ, ವಾಹನಗಳ ವಶಕ್ಕೆ ಪಡೆಯುತ್ತಲೇ ಇದ್ದಾರೆ ಅದರೂ ಅನಗತ್ಯ ಸಂಚಾರಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ.ಇದು ವಾಸ್ತವಿಕ ವಿಚಾರ. ಜಿಲ್ಲೆಯಾದ್ಯಂತ ಲಾಕ್ ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳ ಹೊರತಾಗಿ ಸಂಚಾರ ಮಾಡುವಂತೆ ಇಲ್ಲ ಎಂಬ ಜಿಲ್ಲಾಡಳಿತ ದ ಆದೇಶವಿದ್ದರೂ ಕೂಡಾ ಸಾಮಾಗ್ರಿಗಳ ಖರೀದಿ ನೆಪದಲ್ಲಿ ಸಂಚಾರ ಮಾಡುವ ಯುವಕರಿಗೇನು ಕಮ್ಮಿಯಿಲ್ಲ. ಇಂದು ಬೆಳ್ಳಂ ಬೆಳ್ಳಿಗೆಯೆ ರೋಡಿಗಿಳಿದ ಪುಂಜಾಲಕಟ್ಟೆ ಎಸ್.ಐ.ಸೌಮ್ಯ ನೇತ್ರತ್ವದ ಪೋಲೀಸರ ತಂಡ ದಾಖಲೆಗಳಿಲ್ಲದ ಹಾಗೂ ಅನಗತ್ಯವಾಗಿ ಸಂಚಾರ ಮಾಡುವ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

