ಜಿಲ್ಲಾಡಳಿತ, ಪೋಲಿಸ್ ಇಲಾಖೆ ಕರ್ತವ್ಯ ಮೆರೆದು ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆಯನ್ನು ಗುರುತಿಸಿ ಗೋ ಹಂತಕರನ್ನು ಕಾನೂನಿನ ಕುಣಿಕೆಯ ಮೂಲಕ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು. ಜಿಲ್ಲೆಯಲ್ಲಿ ಗೋವು ಸಂತತಿ ಭಯಮುಕ್ತವಾಗಿ ಬದುಕಬೇಕು. ಕೃಷಿಕ ರಾತ್ರಿ ಸುಖ ನಿದ್ದೆ ಮಾಡಬೇಕು. ಹಾಗಾದಾಗ ನಮ್ಮ ಜಿಲ್ಲೆ ಶಾಂತಿಯ ನಾಡಾಗಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಕ್ರಮ ಕೃತ್ಯದಲ್ಲಿ ತೊಡಗಿದವರನ್ನು ಪತ್ತೆ ಹಚ್ಚದಿದ್ದಲ್ಲಿ ಪರಿವಾರ ಸಂಘಟನೆಯ ಕಾರ್ಯಕರ್ತರು ಈ ಕೆಲಸಕ್ಕೆ ಇಳಿಯಬೇಕಾಗಬಹುದು ಎಂದು ಎಚ್ಚರಿಸಿರುವ ಅವರು ಗೋವು ನಮ್ಮ ಸರ್ವಸ್ವವಾಗಿದ್ದು ,ಇದರ ಉಳಿವಿಗಾಗಿ ತಾಲೂಕಿನ ಸಮಾನ ಮನಸ್ಕರು ಈ ಬೃಹತ್ ಪ್ರತಿಭಟನೆಯಲ್ಲಿ ಕೈ ಜೋಡಿಸುವಂತೆ ಪ್ರಕಟಣೆಯ ಮನವಿ ಮಾಡಿದ್ದಾರೆ.
