Wednesday, February 12, 2025

ಐ.ಎಮ್.ಎ.ಪ್ರಕರಣದಲ್ಲಿ ಶಾಮೀಲಾಗಿದ್ದ ಸಚಿವರ ಕೈಬಿಡಲು ರಾಜ್ಯಪಾಲರಿಗೆ ಪ್ರಭು ಮನವಿ

ಬಂಟ್ವಾಳ: ಬಹುಕೋಟಿ ರೂಪಾಯಿ ಐ.ಎಮ್.ಎ.ವಂಚನೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಸಂಶಯಾಸ್ಪದ ಸಚಿವರನ್ನು ಕೈ ಬಿಡಲು ಮುಖ್ಯ ಮಂತ್ರಿಗೆ  ಸೂಚಿಸುವಂತೆ ಬಂಟ್ವಾಳತಾಪಂ ಸದಸ್ಯ ಪ್ರಭಾಕರ ಪ್ರಭು ಅವರು ಕರ್ನಾಟಕ ರಾಜ್ಯಪಾಲರಾದ ವಜುಭಾಯಿವಾಲಾ ಅವರನ್ನು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಸಾವಿರಾರು ಕೋಟಿ ವಂಚಿಸಿರುವ ಐ.ಎಮ್.ಎ.ಜುವ್ಯೆಲ್ ಸಂಸ್ಥೆಯ ಪ್ರಕರಣದಲ್ಲಿ ರಾಜ್ಯದ ಸಾವಿರಾರು ಮಂದಿ ಅಮಾಯಾಕರು‌ ತಮ್ಮ ಹತ್ತಾರು ಆಸೆ,ಆಕಾಂಕ್ಷೆ ಈಡೇರಿಸುವ ನಿಟ್ಟಿನಲ್ಲಿ ಲಕ್ಷಾಂತರ ರೂ.ಹಣವನ್ನು ಹೂಡಿಕೆ ಮಾಡಿದ್ದಾರೆ. ದೇಶ,  ವಿದೇಶ ಗಳಲ್ಲದೆ,ಕರಾವಳಿಯ ಭಾಗದಿಂದಲೂ ಹಲವು ಮಂದಿ ಹಣ ಹೂಡಿಕೆ ಮಾಡಿ ಈಗ ದಿಕ್ಕು ತೋಚದೆ  ಕಂಗಾಲಾಗಿದ್ದಾರೆ.ದಿನಂಪ್ರತಿ  ಸಾವಿರಾರು ಮಂದಿ ದೂರು ನೀಡಿ  ಹಣ ಮರುಪಾವತಿಗಾಗಿ ,ಕಚೇರಿಗೆ ಅಲೆದು ದ್ರಶ್ಯಮಾದ್ಯಮಗಳ ಮುಂದೆ ತಮ್ಮ‌ಕುಟುಂಬದ ನೋವು ತೊಡಿಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಮನವಿಯಲ್ಲಿ ಅವರು ಆಳಲನ್ನು ತೋಡಿಕೊಂಡಿದ್ದಾರೆ.                                          ಐಎಮ್ಎ ವಂಚನೆ ಪ್ರಕರಣ ಕರ್ನಾಟಕ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದ್ದು, ಗಂಭೀರ ಸ್ವರೂಪದ ಈ ಪ್ರಕರಣ  ರಾಜ್ಯದ ಇತಿಹಾಸದಲ್ಲಿಯೂ ದೊಡ್ಡ ಪ್ರಮಾಣದ ಹಗರಣ ಗಳಲ್ಲಿ  ಒಂದಾಗಿದೆ ಎಂದು ಪ್ರಭುಮನವಿಯಲ್ಲಿ ತಿಳಿಸಿದ್ದಾರೆ.
ವಂಚನೆ ಗೊಳಪಟ್ಟವರಲ್ಲಿ ಈಗಾಗಲೇ 10 ಮಂದಿ ಆತ್ಮಹತ್ಯೆ ಮಾಡಿದ್ದು  ಇನ್ನುಳಿದಂತೆ  ಸುಮಾರು 43,000 ಕುಟುಂಬ  ತೀವ್ರ ಸಂಕಟ  ಅನುಭವಿಸುತ್ತಿರುವುದನ್ನು ನೋಡಿ ದೇಶದ ಪ್ರಧಾನ ಮಂತ್ರಿ ಹಾಗೂ ಹಣಕಾಸು  ಸಚಿವರು ಕೂಡ ಈ ಪ್ರಕರಣವನ್ನು ಅತೀ ಸೂಕ್ಷ್ಮ ರೀತಿಯಲ್ಲಿ ಗಮನಿಸುತ್ತಿದ್ದು, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಂಡು ಕೇಂದ್ರಕ್ಕೆ ವರದಿ ನೀಡಲು ರಾಜ್ಯಕ್ಕೆ ನಿರ್ದೇಶನ  ನೀಡಿರುತ್ತಾರೆ ಎಂದು ರಾಜ್ಯಪಾಲರಿಗೆ ರವಾನಿಸಿರುವ ಮನವಿಯಲ್ಲಿ ವಿವರಿಸಿದ್ದಾರೆ.                               ಐ.ಎಮ್.ಎ.ಜುವ್ಯೆಲ್ ಸಂಸ್ಥೆಯ ಮಾಲಿಕ, ಬಹು ಕೋಟಿ ವಂಚಕ  ಮಹಮ್ಮದ್ ಮನ್ಸೂರ್ ಖಾನ್ ನೊಂದಿಗೆ  ರಾಜ್ಯದ ಪ್ರಭಾವಿ ಸಚಿವರೊಬ್ವರ ಮತ್ತು ಶಾಸಕರೋರ್ವರ ಹೆಸರು ಥಳಕು ಹಾಕಿರುವ ಬಗ್ಗೆ ರಾಜ್ಯದ ಹಲವು ದ್ರಶ್ಯಮಾದ್ಯಮಗಳಲ್ಲಿ ಭಿತ್ತರವಾಗಿರುವುದರಿಂದ  ಸಾರ್ವಜನಿಕ ವಲಯದಲ್ಲಿ ಕರ್ನಾಟಕ ಸರಕಾರದ ಮೇಲೆ ಸಂಶಯ ಮೂಡುವಂತಾಗಿದೆಯಲ್ಲದೆ ಪ್ರಭಾವಿಗಳ ಸಹಕಾರದಿಂದಾಗಿಯೇ ಇಂತಹ ದೊಡ್ದ ಮೊತ್ತ ವಂಚಿಸಲು  ಐ.ಎಮ್.ಎ. ಸಂಸ್ಥೆಗೆ ಸಾದ್ಯವಾಯಿತು ಎಂದು ರಾಜ್ಯದ ಜನ ಮಾತಾಡುತ್ತಿದ್ದಾರೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಇಂತಹದೇ ಹಲವು ಸಂಸ್ಥೆಗಳು  ಕಾರ್ಯಚರಿಸುತ್ತಿದ್ದು ಅದರ ಬಗ್ಗೆಯೂ ತೀವ್ರ ನಿಗಾ ಸರಕಾರ ವಹಿಸಬೇಕಾಗಿದ್ದು, ಕರ್ನಾಟಕದ ಸಮ್ಮಿಶ್ರ ಸರಕಾರ ಅಧಿಕಾರ ಉಳಿಸಿಕೊಳ್ಳಲು  ಕಾಲಹರಣ ಮಾಡುತ್ತಿದೆಯೇ  ಹೊರತು ನೊಂದವರಿಗೆ ನೆರವಾಗುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಪ್ರಭಾಕರ ಪ್ರಭು
ರಾಜ್ಯದ ಪರಿಸ್ಥಿತಿ ಯನ್ನು ಕೇಂದ್ರಕ್ಕೆ ರವಾನಿಸಿ
ಈ ಪ್ರಕರಣ ದಲ್ಲಿ ಶಾಮೀಲಾಗಿದ್ದಾರೆನ್ನಲಾದ  ಸಚಿವರನ್ನು ಸಂಪುಟ ದಿಂದ ಕೈಬಿಡಲು ಮುಖ್ಯಮಂತ್ರಿ ಯವರಿಗೆ ಸಲಹೆ ನೀಡಬೇಕು ಎಂದು  ಮನವಿಯಲ್ಲಿ ಆಗ್ರಹಿಸಿದ್ದಾರೆ.

More from the blog

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...