Thursday, July 3, 2025

ಮಾ.24 : ” ಪೊರ್ಲ ತೆಲಿಕೆ ” ಡ್ರೀಮ್ ಲವ್ ಆಲ್ಬಂ ಸಾಂಗ್ ಬಿಡುಗಡೆ

ಬಂಟ್ವಾಳ: ಮಂತ್ರದೇವತೆ ಕ್ರಿಯೇಷನ್ ಮತ್ತು ಟ್ರೈಪಾಡ್ ಕ್ರಿಯೇಷನ್ ಇವರು ನಿರ್ಮಾಣದ ” ಪೊರ್ಲ ತೆಲಿಕೆ ” ಡ್ರೀಮ್ ಲವ್ ಆಲ್ಬಂ ಸಾಂಗ್ ಬಿಡುಗಡೆ ಗೆ ಸಿದ್ದಗೊಂಡಿದೆ.


ಮಾ.24 ಆದಿತ್ಯವಾರ ಸಂಜೆ ಮಡಂತ್ಯಾರು ಶಿಕ್ಷಕ ರಮೇಶ್ ಮೂಲ್ಯ ಅವರ ಮನೆಯಲ್ಲಿ ಬಿಡುಗಡೆಗೊಳ್ಳಲಿದೆ.
ಪ್ಯಾಕು, ಪ್ಯಾಕು ಖ್ಯಾತಿಯ ಕಾಮಿಡಿ ಕಿಲಾಡಿ ಹಿತೇಶ್ ಕಾಪಿನಡ್ಕ ಅವರು ಈ ಆಲ್ಬಂ ಸಾಂಗ್ ಅನ್ನು ಬಿಡುಗಡೆಗೊಳಿಸಿದ್ದಾರೆ.
ರಕ್ಷಿತ್ ರೈ ಪುಂಜಾಲಕಟ್ಟೆ  , ನೀತು ಎನ್ ಶೆಟ್ಟಿ ನಾರಾವಿ ನಟನೆಯ, ಶಿವಶಂಕರ್ ಗೇರುಗಟ್ಟೆ ಅವರ ಗಾಯನದಲ್ಲಿ ಅತ್ಯುತ್ತಮ ಆಲ್ಬಂ ಸಾಂಗ್ ಮೂಡಿ ಬಂದಿದೆ.
ಮಣಿಕ್ ಮಾಲೆ ನಿರ್ದೇಶನ ದಲ್ಲಿ ಅನುಜ್ ಅವರು ಚಿತ್ರೀಕರಣ ನಡೆಸಿದ್ದಾರೆ.
ಜಯರಾಜ್ ಅತ್ತಾಜೆ ಅವರ ಸಹಕಾರದಲ್ಲಿ
ಪಲ್ಗುಣಿ ರೆಕಾರ್ಡಿಂಗ್ ವೇಣೂರು ಇದರ ಮಾಲಕ
ಶಿವು ನಾರಾವಿ ಅವರು ರೆಕಾರ್ಡಿಂಗ್ ಹಾಗೂ ಬಿಕೆ ಕ್ರಿಯೇಷನ್ ವರ್ಕಾಡಿ ಇದರ ಮಾಲಕ ಬಾತು ಕುಲಾಲ್ ಅವರು ಸಂಕಲನ ಮಾಡಿದ್ದಾರೆ.

More from the blog

ಅಕ್ರಮ ಗಣಿಗಾರಿಕೆ: ಲಾರಿಗಳನ್ನು ತಡೆದ ಗ್ರಾಮಸ್ಥರು..

ಬಂಟ್ವಾಳ: ಪಲ್ಲಮಜಲು ಕೋರೆಯಿಂದ ಲಾರಿಗಳು ಜಲ್ಲಿಕಲ್ಲು ಲೋಡ್ ಮಾಡಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರಿಂದ ಲಾರಿಗಳನ್ನು ತಡೆದು ಪ್ರತಿಭಟಿಸಿದ ಘಟನೆ ಇಂದು ನಡೆದಿದೆ. ಪಲ್ಲಮಜಲು ಗಣಿಗಾರಿಕೆಯಿಂದ ಸ್ಥಳೀಯ ಮನೆಗಳಿಗೆ ಹಾನಿಯಾಗಿದೆ ಎಂದು ಗ್ರಾಮಸ್ಥರು ಗಣಿಇಲಾಖೆ ಹಾಗೂ...

Bantwal : ನೇತ್ರಾವತಿ ‌ನದಿಯಲ್ಲಿ ಅಪರಿಚಿತ ಗಂಡಸಿನ‌ ಮೃತದೇಹ ಪತ್ತೆ : ಗುರುತು ಪತ್ತೆಗೆ ಮನವಿ..

ಬಂಟ್ವಾಳ: ಇಲ್ಲಿನ‌ ನೇತ್ರಾವತಿ ‌ನದಿಯಲ್ಲಿ ಜುಲೈ 2 ರಂದು ಅಪರಿಚಿತ ಗಂಡಸಿನ‌ ಶವ ಪತ್ತೆಯಾಗಿದೆ ಎಂದು ಬಂಟ್ವಾಳ ನಗರ ಠಾಣಾ ಪೋಲೀಸರು ಪ್ರಕರಟನೆಯಲ್ಲಿ ತಿಳಿಸಿದ್ದಾರೆ. ಸುಮಾರು 45 ರಿಂದ 50 ವರ್ಷ ವಯಸ್ಸಿನವರಾಗಿದ್ದು,ಇವರ ಗುರುತು...

Mangalore : ಹಬ್ಬಗಳ ಋತು ಆರಂಭ – ಆಚರಣೆಗೆ ಷರತ್ತು ವಿಧಿಸಿದ ಪೊಲೀಸ್ ಇಲಾಖೆ..

ಮಂಗಳೂರು : ಕೆಲವೇ ದಿನಗಳಲ್ಲಿ ಹಬ್ಬಗಳ ಋತು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹಲವು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳು ನಡೆಯಲಿದೆ. ಅವುಗಳಲ್ಲಿ ಮುಹರ್ರಂ, ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ,...

ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ಕ್ರಿಟಿಕಲ್ ಫಂಡ್ ಸಹಾಯಧನ ವಿತರಣೆ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸುಧೆಕಾರು ಲೀಲಾ ಕೃಷ್ಣಪ್ಪ ಇವರ ಮಗನಾಧ ಹರೀಶ್ ಇವರು ಅನಾರೋಗ್ಯದಿಂದ ಬಳಲುತ್ತಿದ್ದು. ಇವರ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ರಿಟಿಕಲ್ ಫಂಡ್...