ಬಂಟ್ವಾಳ: ಕೆ.ಪಿ.ಸಿ.ಸಿ.ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜುಲೈ 31 ರಂದು ಶುಕ್ರವಾರ ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಅವರನ್ನು ಬೇಟಿ ಮಾಡಲಿದ್ದಾರೆ ಎಂಬ ಅಧಿಕೃತ ಮಾಹಿತಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಕಟನೆಯ ಲ್ಲಿ ತಿಳಿಸಿದೆ.
ಕೆ.ಪಿ.ಸಿ.ಸಿ.ಅಧ್ಯಕ್ಷ ರಾದ ಬಳಿಕ ಪ್ರಥಮವಾಗಿ ಜಿಲ್ಲೆಗೆ ಅಗಮಿಸುವ ಡಿ.ಕೆ.ಶಿವಕುಮಾರ್ ಮಂಗಳೂರು ಕಾಂಗ್ರೆಸ್ ಕಚೇರಿ ಹಾಗೂ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಕ್ಕೂ ಬೇಟಿ ನೀಡಲಿದ್ದಾರೆ.
*ಕಾಂಗ್ರೆಸ್ ಸಂಚಲನ*
ಹಿರಿಯ ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ ಸಾಲ ಮೇಳದ ರೂವಾರಿ ಬಿ.ಜನಾರ್ಧನ ಪೂಜಾರಿ ಅವರನ್ನು ಬೇಟಿ ಮಾಡಿ ಅವರ ಜೊತೆಗೆ ಮಾತುಕತೆ ನಡೆಸಲಿರುವ ಡಿ.ಕೆ.ಶಿ.
ಪೂಜಾರಿ ಜೊತೆಗಿನ ಮಾತುಕತೆ ರಾಜಕೀಯ ವಲಯದಲ್ಲಿ ಬಾರೀ ಬಿರುಗಾಳಿ ಎಬ್ಬಿಸಲಿದೆಯಾ ಎಂಬ ಮಾತುಗಳು ಕೇಳಿಬರುತ್ತಿವೆ.
ಅನೇಕ ವರ್ಷಗಳಿಂದ ಕಾಂಗ್ರೇಸ್ ಮತ್ತು ಪೂಜಾರಿ ಜೊತೆಗಿನ ಸಂಬಂಧ ಅಷ್ಟಕಷ್ಟೆ ಎಂಬಂತೆ ಇತ್ತು.
ಅದಕ್ಕೆ ಸಾಕ್ಷಿ ಹಿಂದಿನ ಮುಖ್ಯಮಂತ್ರಿ ಯಾಗಿದ್ದ ಸಿದ್ದ ರಾಮಯ್ಯ ಅವರು ಬಂಟ್ವಾಳ ಕ್ಕೆ ವಿವಿಧ ಕಾಮಗಾರಿ ಗಳ ಉದ್ಘಾಟನೆ ಗೆಂದು ಆಗಮಿಸಿದ ವೇಳೆ ಪೂಜಾರಿ ಮನೆಯ ಬಾಗಿಲಿನಲ್ಲಿ ಹೋದರೂ ಪೂಜಾರಿ ಮನೆಗೆ ಬೇಟಿ ನೀಡದೆ ಹೋಗಿರುವುದು.
ಅಬಳಿಕ ಪೂಜಾರಿ ಅವರ ಜೊತೆ ಜಿಲ್ಲಾ ಕಾಂಗ್ರೆಸ್ ನಡೆದು ಕೊಂಡ ಬಂದ ರೀತಿ ಎಲ್ಲವೂ ಪೂಜಾರಿ ಕಡೆಗಣನೆಗೆ ಸಾಕ್ಷಿಯಾಗಿತ್ತು.
ಇದೀಗ ಡಿ.ಕೆ.ಶಿ ಅಧ್ಯಕ್ಷ ರಾಗಿ ಜಿಲ್ಲೆಗೆ ಆಗಮಿಸುವ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ಬಂಟ್ವಾಳ ಕ್ಕೆ ಆಗಮಸುವ ವೇಳೆ ಪೂಜಾರಿ ಬೇಟಿ ಇಟ್ಟುಕೊಂಡಿರುವುದು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಡಿ.ಕೆ.ಶಿ ಪೂಜಾರಿ ಬೇಟಿ ರಾಜಕೀಯ ಚಿತ್ರಣವನ್ನು ಬದಲು ಮಾಡೀತೇ ? ಯಾವುದಕ್ಕೂ ಕಾದುನೋಡೋಣ….














