ಬಂಟ್ವಾಳ: ನಗರ ಪ್ರದೇಶಗಳಲ್ಲಿ ಅಗತ್ಯ ಸಾಮಾಗ್ರಿಗಳನ್ನು ಪಡೆಯಲು ವಾಹನ ಬಳಸಿದರೆ ಪೋಲೀಸ್ ವಶಕ್ಕೆ ಪಡೆಯುತ್ತಾರೆ.
ನೀವು ಸಿಟಿಯಲ್ಲಿದ್ದೀರಾ ಅಗತ್ಯ ಸಾಮಾಗ್ರಿಗಳು ನಿಮಗೆ ಬೇಕೆ ಹಾಗಾದರೆ ನೀವು ನಡೆದುಕೊಂಡೆ ಬನ್ನಿ , ಒಂದು ವೇಳೆ ಏನಾಗಲ್ಲ ಅಂದುಕೊಂಡು ವಾಹನದಲ್ಲಿ ಬಿಸಿರೋಡಿಗೆ ಪೇಟೆ ಜನ ಬಂದರೆ ವಾಹನ ಪೋಲೀಸ್ ಠಾಣೆಗೆ ಹೋಗುವುದರಲ್ಲಿ ಎರಡು ಮಾತಿಲ್ಲ.
ಅದಕ್ಕೆ ಸಾಕ್ಷಿಯಾಗಿ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಅವರು ಇಂದು ಹಲವಾರು ವಾಹನಗಳನ್ನು ಜಪ್ತಿ ಮಾಡಿದ್ದಾರೆ.


ಇದು ಗುರುವಾರ ಜಿಲ್ಲಾಡಳಿತ ದ ಆದೇಶದ ಬಳಿಕ ಸಂಗತಿ .
ಕೊರೊನಾ ವೈರಸ್ ತಡೆಗೆ ಕಟ್ಟುನಿಟ್ಟಿನ ಕೆಲವು ನಿಯಮಗಳು ಜಾರಿಯಾದರೂ ಅದು ಸರಿಯಾಗಿ ಪಾಲನೆ ಆಗದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಲಾಕ್ ಡೌನ್ ಅದೇಶವಿದ್ದರೂ ಅಗತ್ಯ ಸಾಮಾಗ್ರಿಗಳಿಗೆ ಜಿಲ್ಲಾಡಳಿತ ನೀಡಿದ ಅವಧಿ ಮತ್ತು ಬಳಿಕವೂ ಅನಗತ್ಯ ವಾಗಿ ವಾಹನದಲ್ಲಿ ತಿರುಗಾಟ ನಡೆಸುವುದು ಕಂಡು ಬಂದಿದೆ.
ಹಾಗಾಗಿ ವಿನಾಕಾರಣ ತಿರುಗಾಟ ನಡೆಸುವವರಿಗೆ ಕಠಿಣ ಕ್ರಮಕ್ಕೆ ಪೋಲೀಸ್ ಇಲಾಖೆ ಮುಂದಾಗಿದ್ದು ಇಂದು ಬೆಳಿಗ್ಗೆ ಯಿಂದಲೆ ಬಂಟ್ವಾಳ ಡಿ.ವೈ.ಎಸ್.ಪಿ.ವೆಲಂಟೈನ್ ಡಿ.ಸೋಜ ಅವರ ಮಾರ್ಗದರ್ಶನ ದಲ್ಲಿ ಮತ್ತು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ಸಲಹೆಯಂತೆ ಬಂಟ್ವಾಳ ನಗರ ಪೋಲೀಸ್ ಠಾಣಾ ಎಸ್.ಐ.ಪ್ರಸನ್ನ ಕಾರ್ಯಚರಣೆ ನಡೆಸುತ್ತಿದ್ದಾರೆ.
ಈಗಾಗಲೇ ಹಲವು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಿಸಿರೋಡು ಪೇಟೆ ಬಂಟ್ವಾಳ ಪೇಟೆಯ ಸಾರ್ವಜನಿಕ ರು ಅಗತ್ಯ ವಸ್ತುಗಳನ್ನು ಪಡೆಯಲು ಅಲ್ಲಿಯೇ ಹತ್ತಿರದ ಅಂಗಡಿಗಳಿಗೆ ನಡೆದುಕೊಂಡು ಹೋಗಿ ಎಂದು ಪೋಲೀಸರು ತಿಳಿಸಿದ್ದಾರೆ.
ಜೊತೆಗೆ ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯ ವಾಗಿ ಮಾತ್ರ ಪೇಟೆಗೆ ಬರಲು ಇದ್ದರೆ ಬೇಕಾದ ದಾಖಲೆಗಳನ್ನು ತೋರಿಸಿದರೆ ಮಾತ್ರ ಅವಕಾಶ ನೀಡುತ್ತೇವೆ ಎಂದು ಅವರು ಸ್ಪಷ್ಟವಾದ ಮಾತುಗಳಲ್ಲಿ ವಾಹನ ಸವಾರರಿಗೆ ಹೇಳಿದ್ದಾರೆ.

