Friday, June 27, 2025

ಕೊರೊನೊ ನಿಯಂತ್ರಣಕ್ಕೆ ಹಗಲಿರುಳು ಜೀವವನ್ನು ಮುಡಿಪಾಗಿಟ್ಟು ಶ್ರಮಿಸುವ ಪೋಲೀಸರಿಗೆ ಚಪ್ಪಾಳೆಯ ಅಭಿನಂದನೆ….

                                  ಪೊಲೀಸರೇ ನಿಮಗಿದೋ ಹ್ಯಾಟ್ಸಾಪ್

ಬಂಟ್ವಾಳ : ಕೊರೋನಾ ವೈರಸ್ ನ ಹರಡುವಿಕೆಯನ್ನು ತಡೆಯಲು ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಅಹೋರಾತ್ರಿ ಶ್ರಮಿಸುತ್ತಿದ್ದರೆ, ಇದಕ್ಕೆ ಬೆಂಬಲವಾಗಿ ನಿಂತಿರುವ ಮತ್ತೊಂದು ಪ್ರಮುಖ ಇಲಾಖೆ ಪೊಲೀಸ್ ಇಲಾಖೆ.


ಕಾನೂನು ಸುವ್ಯವಸ್ಥೆ ಯ ಜೊತೆಗೆ ನಾಗರೀಕರಿಗೆ ರಕ್ಷಣೆ ನೀಡಬೇಕಾದ ಮಹತ್ತರ ಜವಬ್ದಾರಿ ಹೊತ್ತಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಇದೀಗ ತಮ್ಮ ಜೀವವನ್ನೂ ಲೆಕ್ಕಿಸದೇ ನಾಗರೀಕರಿಗೆ ಆರೋಗ್ಯ ದ ಪಾಠ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ 21 ದಿನಗಳ ಕಾಲ ಇಡೀ ಭಾರತಕ್ಕೆ ಲಾಕ್ ಡೌನ್ ಘೋಷಿಸಿದ್ದರೂ, ಅದನ್ನು ಲೆಕ್ಕಿಸದೇ ತನ್ನ ಆರೋಗ್ಯದ ಕಾಪಾಡುವ ಬದಲಾಗಿ ಕಾನೂನು ಉಲ್ಲಂಘಿಸಿ ಜನರು ಮನೆಯಿಂದ ಪೇಟೆ ಗೆ ಬರುವುದು ತಪ್ಪಿಲ್ಲ, ಪೋಲೀಸರ ಜೊತೆ ಒರಟಾಗಿ ನಡವಳಿಕೆ ಮಾಡುವುದು ನಿಂತಿಲ್ಲ.
ಪ್ರಸ್ತುತ ಇಡೀ ರಾಜ್ಯದಲ್ಲಿ ಪೋಲೀಸರ ಪಾತ್ರ ಮಹತ್ತರ ವಾಗಿದೆ.
ತಮ್ಮ ಹಾಗೂ ತಮ್ಮ ಕುಟುಂಬದವರ ಆರೋಗ್ಯ ವನ್ನು ಲೆಕ್ಕಿಸದೆ ಅಹೋರಾತ್ರಿ ಜನರ ಆರೋಗ್ಯಕ್ಕಾಗಿ ಲಾಠಿ ಹಿಡಿದು ರಸ್ತೆಯಲ್ಲಿ ನಿಂತು ಸಾರ್ವಜನಿಕ ರಿಗೆ ನೀತಿ ಪಾಠ ಮಾಡುವ ರೀತಿ ಎಲ್ಲರ ಪ್ರಶಂಸೆ ಗೆ ಪಾತ್ರವಾಗಿದೆ.
ಅವರಿಗಾಗಿ ಅವರು ಇಂತಹ ಕಠಿಣ ಪರಿಸ್ಥಿತಿಯಲ್ಲಿ ಪರಿಶ್ರಮ ಪಡುತ್ತಿಲ್ಲ, ಇಡೀ ಸಮಾಜದ ಆರೋಗ್ಯದ ಉದ್ದೇಶದಿಂದ, ಕೊರೊನೊ ಎಂಬ ಮಾಹಾಮಾರಿಯಿಂದ ದೇಶವನ್ನೇ ಬಚಾವ್ ಮಾಡುವ ಒಂದೇ ಒಂದು‌ ಉದ್ದೇಶದಿಂದ.
ಕೊರೊನೊ ದಿಂದ ಮುಕ್ತಿಗಾಗಿ ಪ್ರಧಾನಿ ಮಂತ್ರಿ ಹೋಂಸ್ಟೇ ಎಂದು ಸಾರಿ ಸಾರಿ ಮನವಿ ಮಾಡಿದರೂ ಯಾರು ಕೇಳಿಸಿಕೊಂಡಿಲ್ಲ ಅಂದರೆ ವಿಪರ್ಯಾಸ.
ಪ್ರತಿ ಜಿಲ್ಲಾಡಳಿತ ಅನಗತ್ಯವಾಗಿ ಮನೆಯಿಂದ ಹೊರಗಡೆ ಬರುವುದು ಬೇಡ ಅಂದರೂ ಪ್ರತಿ ದಿನ ಮಾರುಕಟ್ಟೆಯಲ್ಲಿ ತುಂಬಿ ತುಳುಕುವ ಜನರು.
ಈ ರೀತಿಯಾದರೆ ಪರಿಸ್ಥಿತಿ ಕಂಟ್ರೋಲ್ ಅಗಬಹುದೇ ಕೊರೊನೊ ದಿಂದ ಮುಕ್ತಿ ಸಿಗಬಹುದೆ ಜನ ಅಲೋಚಿಸಬೇಕಾದ ಕಾಲಘಟ್ಟದಲ್ಲಿದ್ದೇವೆ.
ಪೋಲೀಸರು ನಿದ್ದೆ ಬಿಟ್ಟು , ಊಟ ಬಿಟ್ಟು, ಕುಟುಂಬ ಬಿಟ್ಟು, ಕೊನೆಯದಾಗಿ ಅವರ ಜೀವವನ್ನು ಅಪಾಯ ದಲ್ಲಿರಿಸಿ ಜನರಿಗೆ ಸಾಮ ,ದಾನ, ಕೊನೆಗೆ ದಂಡ ಎಂಬುದನ್ನು ತೋರಿಸಬೇಕಾ, ಕರಾವಳಿಯ ಜನರು ಬುದ್ದಿವಂತರು ಎಂಬ ಪಟ್ಟವಿದೆ. ಅದನ್ನು ಉಳಿಸಿ ಈ ಜಿಲ್ಲೆಯ ನ್ನು ಉಳಿಸಲು ಎಲ್ಲಾ ಸಾರ್ವಜನಿಕರು ಇಲಾಖೆಯ ಜೊತೆ ಸಹಕಾರ ನೀಡೋಣ.
ಹಾಗಾಗಿ ಅವರ ನಿಜವಾದ ಕಾಳಜಿ ಗೆ ನಾವು ಕೈಜೋಡಿಸಿ ಹ್ಯಾಟ್ಸ್ ಅಪ್ ಎನ್ನೋಣ .

More from the blog

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...