Wednesday, February 12, 2025

ಹ್ಯಾಪಿ ಬರ್ತಡೇ ಟು ವ್ಯೂ! ಬಂಟ್ವಾಳ ನಗರ ಠಾಣೆಯಲ್ಲಿ ಅಚರಣೆ

ಬಂಟ್ವಾಳ: ಹ್ಯಾಪಿ ಬರ್ತಡ್ ಟು ವು ಅವಿನಾಶ್

ಹೀಗೆಂದು ಹೇಳಿ ಕೇಕ್ ನೀಡಿದವರು ಯಾರೂ ಗೊತ್ತಾ?
ದಿನದ 24 ಗಂಟೆಯೂ ಬ್ಯೂಸಿಯಾಗಿದ್ದುಕೊಂಡು ಕರ್ತವ್ಯ ವೇ ದೇವರು ಎಂದು ಹೇಳಿಕೊಂಡು , ನೇರ ನಡೆನುಡಿಯ ಯಾರೊಂದಿಗೂ ರಾಜಿ ಮಾಡಿಕೊಳ್ಳುಲು ಬಯಸದ, ಸದ್ಗುಣ ವಂತ ಅಫೀಸರ್ ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್ ಅವರು.

 

ಸಿಬ್ಬಂದಿ ಗಳಿಂದ ಅಂತರ ಕಾಯ್ದುಕೊಂಡು ಖಡಕ್ ಅಫೀಸರ್ ಎಂದೇ ಕರೆಯಲ್ಪಡುವ ಚಂದ್ರಶೇಖರ್ ಅವರು ಮಂಗಳವಾರ ಸಂಜೆ ತನ್ನ ಠಾಣಾ ಸಿಬ್ಬಂದಿ ಅವಿನಾಶ್ ಅವರ ಹುಟ್ಟಿದ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದರು.
ಅದರಲ್ಲಿ ಏನಪ್ಪ ವಿಶೇಷ ಅಂತೀರಾ?
ಯಾವುದೇ ಅಡಂಬರವಿಲ್ಲ, ಒಂದು ಕೇಕ್ ಮಾತ್ರ ಜೊತೆಗೆ ಅವಿನಾಶ್ ಅವರ ವರ್ಷವನ್ನು ಸೂಚಿಸುವ ಕ್ಯಾಂಡಲ್ ನಗರ ಪೋಲೀಸ್ ಠಾಣಾ ಟೇಬಲ್ ಮೇಲೆ ಇಡಲಾಗಿತ್ತು.
ನಗರ ಠಾಣಾ ಪೋಲೀಸ್ ಠಾಣೆ ಯ ಎಲ್ಲಾ ಸಿಬ್ಬಂದಿ ಗಳು ಒಂದೇ ಮನೆಯ ಸದಸ್ಯ ರಂತೆ ಅವಿನಾಶ್ ಅವರ ಬರ್ತಡೇ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಹಾಜರು.
ಜೊತೆಗೆ ಎಸ್.ಐ.ಅವರು ಅವಿನಾಶ್ ಜೊತೆಯಲ್ಲಿ ನಿಂತುಕೊಂಡು ಅವರ ಬಾಯಿಗೆ ಕೇಕ್ ನೀಡಿ ಶುಭಹಾರೈಸಿದರು.
ತನ್ನ ಜೊತೆ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿ ಗಳ ಸಂತೋಷದ ಸಮಯದಲ್ಲಿ ಪಾಲ್ಗೊಂಡು ಅವರಿಗೆ ನೈತಿಕ ಸ್ಥೈರ್ಯ ತುಂಬಿಸುವ ಕೆಲಸ ಎಸ್.ಐ.ಚಂದ್ರಶೇಖರ್ ಅವರು ಮಾಡುತ್ತಾ ಇದ್ದಾರೆ.
ಹೀಗೆ ಪ್ರತಿಯೊಬ್ಬರ ಬರ್ತಡ್ ಠಾಣೆಯಲ್ಲಿ ನಡೆಯುವ ಸಂಪ್ರದಾಯ ಮಾಡಲಾಗುತ್ತಿದೆ.
ಕುಟುಂಬದ ಸದಸ್ಯರ ಜೊತೆ ಯಾವ ರೀತಿಯ ಲ್ಲಿ ಆಚರಣೆ ಮಾಡುತ್ತೇವೆ , ಅದೇ ರೀತಿಯಲ್ಲಿ ನಾವು ಕೆಲಸ ಮಾಡುವ ಕಚೇರಿಯಲ್ಲಿ ಆಚರಣೆಗಳು ನಡೆದಾಗ ಸಿಬ್ಬಂದಿ ಗಳ ಜೊತೆ ಉತ್ತಮ ಬಾಂಧ್ಯವ್ಯ ಇರುತ್ತದೆ. ಸಂಘನಾತ್ಮಕ ಕೆಲಸ ಮಾಡುವುದರಿಂದ ಠಾಣೆಯಲ್ಲಿ ಕೆಲಸದ ಒತ್ತಡವು ಕಡಿಮೆಯಾಗುತ್ತದೆ, ಮತ್ತು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಹಾಯವಾಗುತ್ತದೆ ಎಂಬುದು ಅವರ ಯೋಚನೆ.
ಇವರ ಇಂತಹ ಯೋಚನೆ ಗಳಿಗೆ ಬೆಂಬಲ ಸಿಗಲಿ ಎಂಬುದೇ ಹಾರೈಕೆ.

More from the blog

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...

ಸರಕಾರಿಯೋ, ತಾ.ಪಂ.ಗೆ ಸೇರಿದ ಜಾಗವೋ? ಇದೊಂದು ಬೇಲಿಯ ಕಥೆ!

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಗಳ ಮೂಲಕ ಬೇಲಿ ಹಾಕಿದ್ದು, ಇದಿಗ ಈ ಜಾಗವು ಸರಕಾರಿ ಯೋ, ಅಥವಾ ತಾಲೂಕು ಪಂಚಾಯತ್ ಗೆ ಸೇರಿದ್ದೊ ಎಂಬ ಚರ್ಚೆಗೆ...

ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ್ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿ ಸದಸ್ಯರಾಗಿ...