Friday, June 27, 2025

ಹ್ಯಾಪಿ ಬರ್ತಡೇ ಟು ವ್ಯೂ! ಬಂಟ್ವಾಳ ನಗರ ಠಾಣೆಯಲ್ಲಿ ಅಚರಣೆ

ಬಂಟ್ವಾಳ: ಹ್ಯಾಪಿ ಬರ್ತಡ್ ಟು ವು ಅವಿನಾಶ್

ಹೀಗೆಂದು ಹೇಳಿ ಕೇಕ್ ನೀಡಿದವರು ಯಾರೂ ಗೊತ್ತಾ?
ದಿನದ 24 ಗಂಟೆಯೂ ಬ್ಯೂಸಿಯಾಗಿದ್ದುಕೊಂಡು ಕರ್ತವ್ಯ ವೇ ದೇವರು ಎಂದು ಹೇಳಿಕೊಂಡು , ನೇರ ನಡೆನುಡಿಯ ಯಾರೊಂದಿಗೂ ರಾಜಿ ಮಾಡಿಕೊಳ್ಳುಲು ಬಯಸದ, ಸದ್ಗುಣ ವಂತ ಅಫೀಸರ್ ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್ ಅವರು.

 

ಸಿಬ್ಬಂದಿ ಗಳಿಂದ ಅಂತರ ಕಾಯ್ದುಕೊಂಡು ಖಡಕ್ ಅಫೀಸರ್ ಎಂದೇ ಕರೆಯಲ್ಪಡುವ ಚಂದ್ರಶೇಖರ್ ಅವರು ಮಂಗಳವಾರ ಸಂಜೆ ತನ್ನ ಠಾಣಾ ಸಿಬ್ಬಂದಿ ಅವಿನಾಶ್ ಅವರ ಹುಟ್ಟಿದ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದರು.
ಅದರಲ್ಲಿ ಏನಪ್ಪ ವಿಶೇಷ ಅಂತೀರಾ?
ಯಾವುದೇ ಅಡಂಬರವಿಲ್ಲ, ಒಂದು ಕೇಕ್ ಮಾತ್ರ ಜೊತೆಗೆ ಅವಿನಾಶ್ ಅವರ ವರ್ಷವನ್ನು ಸೂಚಿಸುವ ಕ್ಯಾಂಡಲ್ ನಗರ ಪೋಲೀಸ್ ಠಾಣಾ ಟೇಬಲ್ ಮೇಲೆ ಇಡಲಾಗಿತ್ತು.
ನಗರ ಠಾಣಾ ಪೋಲೀಸ್ ಠಾಣೆ ಯ ಎಲ್ಲಾ ಸಿಬ್ಬಂದಿ ಗಳು ಒಂದೇ ಮನೆಯ ಸದಸ್ಯ ರಂತೆ ಅವಿನಾಶ್ ಅವರ ಬರ್ತಡೇ ಕೇಕ್ ಕತ್ತರಿಸುವ ಸಂದರ್ಭದಲ್ಲಿ ಹಾಜರು.
ಜೊತೆಗೆ ಎಸ್.ಐ.ಅವರು ಅವಿನಾಶ್ ಜೊತೆಯಲ್ಲಿ ನಿಂತುಕೊಂಡು ಅವರ ಬಾಯಿಗೆ ಕೇಕ್ ನೀಡಿ ಶುಭಹಾರೈಸಿದರು.
ತನ್ನ ಜೊತೆ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿ ಗಳ ಸಂತೋಷದ ಸಮಯದಲ್ಲಿ ಪಾಲ್ಗೊಂಡು ಅವರಿಗೆ ನೈತಿಕ ಸ್ಥೈರ್ಯ ತುಂಬಿಸುವ ಕೆಲಸ ಎಸ್.ಐ.ಚಂದ್ರಶೇಖರ್ ಅವರು ಮಾಡುತ್ತಾ ಇದ್ದಾರೆ.
ಹೀಗೆ ಪ್ರತಿಯೊಬ್ಬರ ಬರ್ತಡ್ ಠಾಣೆಯಲ್ಲಿ ನಡೆಯುವ ಸಂಪ್ರದಾಯ ಮಾಡಲಾಗುತ್ತಿದೆ.
ಕುಟುಂಬದ ಸದಸ್ಯರ ಜೊತೆ ಯಾವ ರೀತಿಯ ಲ್ಲಿ ಆಚರಣೆ ಮಾಡುತ್ತೇವೆ , ಅದೇ ರೀತಿಯಲ್ಲಿ ನಾವು ಕೆಲಸ ಮಾಡುವ ಕಚೇರಿಯಲ್ಲಿ ಆಚರಣೆಗಳು ನಡೆದಾಗ ಸಿಬ್ಬಂದಿ ಗಳ ಜೊತೆ ಉತ್ತಮ ಬಾಂಧ್ಯವ್ಯ ಇರುತ್ತದೆ. ಸಂಘನಾತ್ಮಕ ಕೆಲಸ ಮಾಡುವುದರಿಂದ ಠಾಣೆಯಲ್ಲಿ ಕೆಲಸದ ಒತ್ತಡವು ಕಡಿಮೆಯಾಗುತ್ತದೆ, ಮತ್ತು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಹಾಯವಾಗುತ್ತದೆ ಎಂಬುದು ಅವರ ಯೋಚನೆ.
ಇವರ ಇಂತಹ ಯೋಚನೆ ಗಳಿಗೆ ಬೆಂಬಲ ಸಿಗಲಿ ಎಂಬುದೇ ಹಾರೈಕೆ.

More from the blog

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...