ಬಂಟ್ವಾಳ: ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಟಿರಥ ಸಮರ್ಪಣಾ ಸಮಿತಿ ಇದರ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಗೆ ದೇವಾಡಿಗ ಸಮಾಜದ ವತಿಯಿಂದ ನೂತನ ಷಷ್ಟಿರಥ ಸಮರ್ಪಣೆ ಬುಧವಾರ ನಡೆಯಿತು. ನಾಗೇಶ್ ಬಪ್ಪನಾಡು ಮತ್ತು ಬಳಗದವರಿಂದ ಶಾಸ್ತ್ರೀಯ ನಾಗಸ್ವರ ಕಚೇರಿ ನಡೆಯಿತು. ಬಳಿಕ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿ ಪೊಳಲಿ ಹಾಗೂ ಶ್ರೀ ನಿತ್ಯಾನಂದ ಚಾಮುಂಡಿ ಭಜನಾ ಮಂಡಳಿ ಇವರಿಂದ ಭಜನಾ ಸಂಕೀರ್ತನೆ ನಡೆಯಿತು.



ಬೆಳಿಗ್ಗೆ 11 ಗಂಟೆಯ ಶುಭ ಮುಹೂರ್ತದಲ್ಲಿ ದೇವರ ಬಲಿಯೊಂದಿಗೆ ನೂತನ ಷಷ್ಠಿರಥ ಸಮರ್ಪಣೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ದೇವಾಡಿಗ ಸಮಾಜದ ಬಂಧುಗಳು ಹಾಗೂ ಕ್ಷೇತ್ರದ ಭಕ್ತರು ಹಾಜರಿದ್ದರು. ಪಲ್ಲಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭ ಬ್ರಹ್ಮರಥ ಸಮಿತಿಯ ಅಧ್ಯಕ್ಷ ರಾಮದಾಸ ಬಂಟ್ವಾಳ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಮಾಜಿ ಸಚಿವ ನಾಗರಾಜ ಶೆಟ್ಟಿ ಹಾಗೂ ಅನೇಕ ಸಮಾಜದ ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.












