ಬಂಟ್ವಾಳ: ಮಾ.4 ರಿಂದ 13 ರವರೆಗೆ ಪೋಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಕ್ಕೆ ಬಂಟ್ವಾಳ ತಾಲೂಕಿನಿಂದ ಹೊರಕಾಣಿಕೆ ಮೆರವಣಿಗೆ ಯ ಮೂಲಕ ಕ್ಷೇತ್ರ ಕ್ಕೆ ಸಮರ್ಪಿಸಲಾಯಿತು.

ಬಿಸಿರೋಡಿನ ವ್ರತ್ತದ ಬಳಿಯ ಗದ್ದೆಯಿಂದ ಆಕರ್ಷಕ ರೀತಿಯಲ್ಲಿ ಮೆರವಣಿಗೆ ಹೊರಟಿತು. ಶ್ರೀ ದಾಮ ಮಾಣಿಲ ದ ಮೋಹನದಾಸ ಸ್ವಾಮೀಜಿ ಹೊರಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯ ಉದ್ದಕ್ಕೂ ಬಂಟ್ವಾಳ ತಾಲೂಕಿನ ವಿವಿಧ ರೀತಿಯ ಗೊಂಬೆ, ಚೆಂಡೆ , ವಾದ್ಯ ವ್ರಂದದ ಮೂಲಕ ಭಕ್ತರು ಭಜನೆ ಹಾಡುತ್ತಾ ತೆರಳಿದರು.
ಬಿಸಿರೋಡಿನಿಂದ ಕೈಕಂಬದ ವರೆಗೆ ಪಾನೀಯ ವ್ಯವಸ್ಥೆ ಗಳನ್ನು ಮಾಡಲಾಗಿತ್ತು. ಶಾಸಕ ರಾಜೇಶ್ ನಾಯಕ್ ಮಾಜಿ ಸಚಿವ ರಮಾನಾಥ ರೈ, ಜಿ.ಪಂ.ಸದಸ್ಯ ರಾದ ಚಂದ್ರಪಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ ಮತ್ತಿತರ ರು ಹಾಜರಿದ್ದರು.