ಬಂಟ್ವಾಳ: ಸೆಕೆಯ ಪ್ರಮಾಣ ಹೆಚ್ಚಿದ ಕಾರಣ ಹಾಗೂ ಕುಡಿಯುವ ನೀರಿಗೆ ಕೊರತೆಯಾಗದಂತೆ, ಬೆಳೆಗೆ ಪೂರಕವಾಗುವ ರೀತಿಯಲ್ಲಿ ಶೀಘ್ರವಾಗಿ ಮಳೆರಾಯ ಆಗಮಿಸಲಿ, ಭೂಮಿ ತಂಪಾಗಿಲಿ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಇಂದು ಎ.15. ರಂದು ಪೊಳಲಿಯಲ್ಲಿ ಶ್ರೀ ರಾಜರಾಜೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.


ಅವರು ಇಂದು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ಅಬಳಿಕ ವಿಶೇಷವಾಗಿ ವರುಣ ದೇವನಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಅತೀ ಶೀಘ್ರವಾಗಿ ಮಳೆ ಬರಲಿ ಎಂದು ಇಲ್ಲಿನ ಪ್ರಧಾನ ಅರ್ಚಕರು ದೇವರಲ್ಲಿ ಬೇಡಿದರು.
ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.












