ಬಂಟ್ವಾಳ: ಪೊಳಲಿ ರಾಜರಾಜೇಶ್ವರಿ ಬ್ರಹ್ಮಕಲಶದ ಪ್ರಚಾರದ ಅಂಗವಾಗಿ ವಾಹನಗಳಿಗೆ ಬ್ರಹ್ಮಕಲಶದ ಬಿತ್ತಿ ಪತ್ರವನ್ನು ದೇವಸ್ಥಾನದ ಮೊಕ್ತೇಸರರಾದ ಉಳಿಪ್ಪಾಡಿಗುತ್ತು ತಾರನಾಥ ಆಳ್ವರವರು ಬಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು.


ನಂತರ ರಿಕ್ಷಾ, ಬಸ್ಸು, ಕಾರುಗಳಿಗೆ ಬ್ರಹ್ಮಕಲಶದ ಬಿತ್ತಿ ಫತ್ರವನ್ನು ಅಂಟಿಸಲಾಯಿತು. ಈ ಸಂಧರ್ಭದಲ್ಲಿ ವಿದ್ಯಾ ಚರಣ್ ಭಂಡಾರಿ, ಪವನ್ ಕುಮಾರ್ ಶೆಟ್ಟಿ ಮುತ್ತೂರು, ರಿತೇಶ್ ಮಾರ್ಲ ಮುತ್ತೂರು, ಕಾರ್ತಿಕ್ ಬಳ್ಳಾಲ್ ಅಮ್ಮುಂಜೆ, ಬಿ.ಬಾಲಕೃಷ್ಣ, ರಿಕ್ಷಾ ಚಾಲಕರು, ವಾಹನ ಮಾಲಕರು ಉಪಸ್ಥಿತರಿದ್ದರು.