Thursday, February 13, 2025

ಪೊಳಲಿ ಕೊಡಿಮರಕ್ಕೆ ಕಂಚಿನಹೊದಿಕೆ ಕೆಲಸ ಪ್ರಾರಂಭ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀನ ದೇವಸ್ಥಾನಕ್ಕೆ ಬಿಲ್ಲವ ಸಮಾಜದವರು ಸೇವಾರೂಪದಲ್ಲಿ ನೀಡುವ ನೂತನ ಧ್ವಜಸ್ಥಂಭದ ಕಂಚಿನ ಕೆಲಸಕಾರ್ಯಗಾರವನ್ನು ಕಾಂಞಗಾಡಿನ ಶಿಲ್ಪಿ ವಿಪಿ ಪ್ರಕಾಶ್ ಅವರ ನೇತೃತ್ವದಲ್ಲಿ ಪಂಚಲೋಹದಿಂದ ಚಿನ್ನದ ಲೇಪನವಿರುವ ನವೀಲು. ಧ್ವಜಸ್ಥಂಭದ ಬುಡದಲ್ಲಿ ಅಷ್ಠದಿಗ್ಪಾಲಕರು ಸೇರಿ 3.500 ಕೆಜಿ ಕಂಚಿನಲ್ಲಿ ಬಹಳ ಸುಂದರವಾದ ಶಿಲಾಕೃತಿಯೊಂದಿಗೆ ತಯಾರಿಸಲ್ಪಟ್ಟ ಕಂಚಿನ ಹೊದಿಕೆಯ ಕೆಲಸವನ್ನು ಕೊಡಿಮರಕ್ಕೆ ಬುಧವಾರ ಪ್ರಾರಂಭಗೊಂಡಿತು.


ಈ ಸಂದರ್ಭದಲ್ಲಿ ಪೊಳಲಿ ದೇವಳದ ಸುಬ್ರಹ್ಮಣ್ಯ ತಂತ್ರಿ ದೇವಳದ ಅರ್ಚಕ ಪರಮೇಶ್ವರಭಟ್, ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಸುಬ್ರಾಯ ಕಾರಂತ,ವೆಂಕಟೇಶ್ ನಾವಡ, ಸಮಿತಿಯ ಗೌರವಾಧ್ಯಕ್ಷ ರಾಮದಾಸ ಕೋಟ್ಯಾನ್,ಭುವನೇಶ್ ಪಚಿನಡ್ಕ ,ಪುರುಷ ಸಾಲ್ಯಾನ್, ಶೇಖರ ಬಳ್ಳಿ, ಚಂದಪ್ಪ ಅಂಚನ್,ಯಶವಂತ ಪೊಳಲಿ, ಗೋಪಾಲಕೃಷ್ಣ ಕೈಕಂಬ ,ನಾರಾಯಣ ಬಡಕಬೈಲ್ , ಉಮೇಶ ಬಾರಿಂಜ,ರಾಮಪ್ಪಪೂಜಾರಿ,ಗಣೇಶ ಪೂಜಾರಿ, ಪ್ರಶಾಂತ್ ವಿಮಲಕೋಡಿ, ಸದಾಶಿವಕರ್ಕೇರಾ ಕಾಜಿಲ,ಲೋಕೇಶ್ ಭರಣಿ ಮತ್ತಿತರರು ಉಪಸ್ಥಿತರಿದ್ದರು.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...