Wednesday, February 12, 2025

ಪೊಳಲಿಯಲ್ಲಿ ಕೋಳಿ ಗುಂಟ ,ಬೆಳ್ಳಿರಥೋತ್ಸವ..

ಕೈಕಂಬ:ಪೊಳಲಿ ಶ್ರೀರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವವು ಎ.೧ ಸೋಮವಾರ ೧೮ ದಿನದ ಜಾತ್ರೆಯಂದು ಕೋಳಿಕುಂಟ ಬೆಳ್ಳಿರಥೋತ್ಸವ ನಡೆಯಲಿದೆ.

ಪೊಳಲಿ ದೇವಸ್ಥಾನಕ್ಕೆ ಒಳಪಟ್ಟ ಸಾವಿರ ಸೀಮೆಯಲ್ಲಿ ದ್ವಜಾರೋಹಣಗೊಂಡು ಮೀನ ಮಾಸದ ೧೮ರವರೇಗೆ ಮಾಂಸಾಹಾರ ಸೇವನೆ ನಿಷಿದ್ದ.
ದೇವರಲ್ಲಿ ಪ್ರಾರ್ಥಿಸಿ ದೇವಸ್ಥಾನದ ಎಡ ಬದಿಯಲ್ಲಿ ಇದ್ದ ಕೋಳಿ ಗುಂಟದ ಗದ್ದೆಯಲ್ಲಿ [ನಟ್ಟಿಲ್] ಒಂದನೆ ಮತ್ತು ಎರಡನೆ ಮನೆಯವರು ನಾಲ್ಕು ಕೋಳಿಗಳನ್ನು ಗದ್ದೆಯ ನಾಲ್ಕು ಮೂಲೆಯ ಗೂಂಟದಲ್ಲಿ ಕಟ್ಟಿ ಕೋಳಿಗಳನ್ನು ಔಪಚಾರಿಕವಾಗಿ[ಕೋಳಿಅಂಕ] ಸರಿಸಮಾನವಾಗಿ ಹಾರಿಸಿದ ನಂತರ ಸಾವಿರ ಸೀಮೆಯ ಭಕ್ತರು ಮಾಂಸಹಾರ ಸೇವನೆ ಮಾಡುವುದು ಸಾಂಪ್ರ್ರದಯ . ಇದಕ್ಕೆ ಕೋಳಿಕುಂಟ ಎನ್ನುವರು ಅಂದು ರಾತ್ರಿ ಉತ್ಸವ ಬಲಿಯ ನಂತರ ದೇವರ ಬೆಳ್ಳಿರಥೋತ್ಸವ ನಡೆಯಲಿದೆ.

More from the blog

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...