Saturday, July 12, 2025

ನನ್ನಪ್ಪ

ಅಪ್ಪ ನಿನ್ನ ಕಂದ ನಾನು
ಎತ್ತಿ ಹೊತ್ತೆ ನನ್ನನು
ಬೇಡಿದೊಡನೆ ಕೊಡಿಸಿ ಕುಣಿದೆ
ಬಿಡದೆ ನೆನೆವೆ ನಿನ್ನನು!

ಅಮ್ಮ ಕೋಲು ಎತ್ತಿದೊಡನೆ
ಕೂಗುತಿದ್ದೆ ಅಳುತಲಿ
ಅವಳ ಗದರಿ ನನ್ನನಪ್ಪಿ
ರಮಿಸುತ್ತಿದ್ದೆ ಬಳಿಕಲಿ!

‘ಅವ್ವ’ಎನುತ ಲಲ್ಲೆಗರೆದು
ಸುರಿಯುತಿದ್ಧೆ ಮುತ್ತನು
ಬೇಡವೆಂದರೂನು ನೀನು
ತಿನಿಸುತಿದ್ದೆ ತುತ್ತನು!

ಜಾತ್ರೆಯಲ್ಲಿ ಗೊಂಬೆ ಪೀಪಿ
ಕೊಡಿಸುತಿದ್ಧೆ ಹರುಷದಿ
ನನ್ನ ಜೊತೆಗೆ ಕುಣಿದು ನಲಿದು
ಬೀಗುತಿದ್ದೆ ಸರಸದಿ!

ಕಲಿಯುವಾಸೆ ನನಗೆ ಹಚ್ಚಿ
ಬಾಳ ದಾರಿ ತೋರಿದೆ
ಉಡಿಯ ತುಂಬಿ ಕಳಿಸುವಾಗ
ಅಮ್ಮನೊಲವ ಬೀರಿದೆ!

ತಲೆಯ ಸವರಿ ಕೆನ್ನೆ ತಟ್ಟಿ
ಅತ್ತೆ ನೀನು ಮರೆಯಲಿ
ಈಗ ಹೇಳು ಅಪ್ಪನೆಂದು
ಯಾರ ನಾನು ಕರೆಯಲಿ?

ಹೆಜ್ಜೆ ಹೆಜ್ಜೆಗೆಲ್ಲ ನೀನೆ
ಕಾಣುತಿರುವೆ ದಿನ ದಿನ
ಬದುಕನೆಲ್ಲ ಸವಿಯುವಾಗ
ನಿನ್ನ ನೆನೆವೆ ಅನುದಿನ!

ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – ೫೮೭೩೦೧

More from the blog

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ತೊಂದರೆ : ಸಮಸ್ಯೆ ಬಗೆಹರಿಸಲು ಬಿ.ಎಂ.ಎಸ್ ಮನವಿ 

ಬಂಟ್ವಾಳ: ರಾಜ್ಯ ಸರಕಾರವು ಸ್ಪಷ್ಟ ಕಾನೂನು ರೂಪಿಸದ ಪರಿಣಾಮ ಪ್ರಸ್ತುತ ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ಕುಟುಂಬ ಪೋಷಣೆ ಕಷ್ಟವಾಗಿದೆ. ಸಾಲದ ಕಂತು ಪಾವತಿಸುವುದು ಕೂಡ ಸವಾಲಾಗಿದ್ದು, ಶಾಲಾರಂಭದಲ್ಲೇ ಇಂತಹ ಸಮಸ್ಯೆಯಿಂದ...

Women missing : ವಿವಾಹಿತ ಮಹಿಳೆ ನಾಪತ್ತೆ – ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ: ಬಿಸಿರೋಡಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ ವಸಂತ ನಾಗಣ್ಣ...