Thursday, February 13, 2025

ಅಪೂರ್ವ ನಿಧಿ

ಭರವಸೆಯ ಬೆಳಕನ್ನು
ಬದುಕಿನಲಿ ತೀಡಿ
ಎಂಟು ವರುಷಗಳ ನಂತರ
ಮಡಿಲಲಿ ಆಡಿ!
ಅಪ್ಪ- ಅಮ್ಮ ಬಿರುದನು
ನಮಗೆ ನೀಡಿ
ನಕ್ಕು ನಲಿದಳು ಮಗಳು
ತೊದಲು ಹಾಡಿ!

ಪುಟ್ಟ ಕಂಗಳ ಚೆಲುವೆ
ಅತ್ತಿತ್ತ ಕಾಲಾಡಿಸಿ
ಕನಸು ತುಂಬಿದ ಕೇಕೆ
ಎಲ್ಲೆಡೆ ಅನುರಣಿಸಿ!
ಎಲ್ಲರನು ನಗೆಮಹಲಿನಲಿ
ಬಿಡದೆ ತೇಲಾಡಿಸಿ
ನಗುಮೊಗದಲಿ ಕನಸು
ವಳು ತಾ ಪವಡಿಸಿ!

ದಿನ ಕಳೆದ ಅರಿವಿಲ್ಲ
ಹಗಲಿರುಳ ಪರವೆಯಿಲ್ಲ
ನಕ್ಕಾಗ ಹಗಲು ಅತ್ತಾಗ
ಇರುಳು ತಾನಾಯಿತಲ್ಲ!
ಅಳು ತಾರಕ ನಗು ಮೋಹಕ
ವೇ ಸ್ವರತಾನವೆಲ್ಲ
ಆಡಲಿಳಿದರೆ ಕೈಲಿರುವುದು
ಓ ಬಾಯಿಗೇ ಎಲ್ಲ!

ತೊಡೆಯನಿಳಿದವಳೆ ನಡೆವಳು
ತಾ ರಾಣಿಯಂತೆ
ಮುಟ್ಟಿದರೆ ಬುಸುಗುಡುವಳು
ನಾಗಿಣಿಯಂತೆ!
ಕುಲುಕುಲು ನಗೆಯ ಚೆಲ್ಲುವಳು
ಅರಗಿಣಿಯಂತೆ
ಹಾಲುಗಲ್ಲದ ತುಂಬ ಖುಷಿ
ನಾದತರಂಗಿಣಿಯಂತೆ!

ಬೆಳೆದ ಮಗಳು ಬೆದರಿಕೆಗೆ
ಹಾಕಬೇಕೇ ಸೊಪ್ಪು?
ಅಡಿಗೆಗೆ ಈಗ ‘ತಾನೆ
ಹಾಕುವಳು’ ಖಾರ ಉಪ್ಪು!
ಬೇಡವೆಂದರೂ ಬಿಡದು
ಈಗ ನಮಗೆ ಮುಪ್ಪು
ನಿಜ,ಅವಳೆ ನಿರ್ಧರಿಸುವಳೀಗ
ಎಲ್ಲ ತಪ್ಪು ಒಪ್ಪು!

ನೀ.ಶ್ರೀಶೈಲ ಹುಲ್ಲೂರು

 

 

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...