Monday, July 14, 2025

ನಿನ್ನ ನೆನೆವೆ ಅನುದಿನ

ಕಾಣದಿರುವ ಕನಸಿಗೆಲ್ಲ
ಬಣ್ಣ ಬಳಿದು ಓಡಿದೆ
ಬಾರದಿರುವ ಮಳೆಗೆ ಮೋಡ
ಕಟ್ಟಿ ಏಕೆ ಕಾಡಿದೆ

ಜೇನು ಇರದ ಗೂಡು ಕಟ್ಟಿ
ಹಾರಿಹೋದೆ ಹೇಳದೆ
ಬೆಟ್ಟದಷ್ಟು ಪ್ರೀತಿ ಇಟ್ಟು
ಸುಟ್ಟು ನಡೆದೆ ಕೇಳದೆ

ಬಾನ ಎದೆಗೆ ಬೆಳ್ಳಿ ಮಿಂಚು
ಬೆಳಕನೆಂದು ನೀಡದು
ಗುಳ್ಳೆ ನರಿಗೆ ಒಲವ ಗಾನ
ಮನದಲೆಂದು ಮೂಡದು

ಅಲೆಯು ದಡವನಪ್ಪಿ ಕಡಲ
ಒಡಲಿನಲ್ಲೆ ಸರಿವುದು
ದೂರ ಸರಿವ ನನ್ನ ಮನವು
ಮತ್ತೆ ನಿನ್ನ ನೆನೆವುದು

ಒಲವು ಎಂಬ ಹೆಸರನಿಟ್ಟು
ಕೊಲುವುದೇನು ಚೆಂದವು
ಸಾಯದಿರುವ ಸವಿಯನಿಟ್ಟು
ಎಲ್ಲ ಜೀವ ತಿಂದವು

ಸಾಯದೇನೆ ಉಳಿಯದೇನೆ
ಬಳಲುತಿರುವೆ ದಿನ ದಿನ
ಎಂದು ನಿನ್ನ ಮರೆವೆ ನಾನು
ಅಂದೆ ನನ್ನ ಕೊನೆ ದಿನ

✍️ನೀ.ಶ್ರೀಶೈಲ ಹುಲ್ಲೂರು

More from the blog

ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ನಿಧನ.. 

'ಅಭಿನಯ ಸರಸ್ವತಿ' ಎಂದೇ ಖ್ಯಾತಿ ಗಳಿಸಿರುವ ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ(87) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಬಿ.ಸರೋಜಾದೇವಿ ಅವರು ದಕ್ಷಿಣ ಭಾರತದ ಧೀಮಂತ ಅಭಿನೇತ್ರಿಯಲ್ಲೋರ್ವರು. ಸುಮಾರು 6 ದಶಕಗಳ ಕಾಲ ಚಿತ್ರರಂಗಕ್ಕೆ...

ಕೇಂದ್ರ ಸರ್ಕಾರದಿಂದ ಮಂಗಳೂರಿಗೆ 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳ ಮಂಜೂರು : ಸಂಸದ ಕ್ಯಾ. ಬ್ರಿಜೇಶ್‌ ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಮಂಗಳೂರಿಗೆ ಒಟ್ಟು 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌...

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ದತ್ತಿ ನಿಧಿ ಪ್ರಶಸ್ತಿ ಪ್ರದಾನ..

ಮಂಗಳೂರು : ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾರ್ಗದರ್ಶನದ ಹುಬ್ಬಳ್ಳಿ ಅವ್ವ ಸೇವಾ...

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...