Sunday, January 25, 2026

ಪಿಂಕ್ ವಾಟ್ಸಾಪ್ ಲಿಂಕ್ ಒತ್ತುವ ಮುನ್ನ ಹುಷಾರ್!

ಬಂಟ್ವಾಳ: ಸಾಮಾಜಿಕ ಜಾಲತಾಣ ವಾಟ್ಸಾಪ್‌ನಲ್ಲಿ ಪಿಂಕ್ ವಾಟ್ಸಾಪ್ ನ್ಯೂ ವರ್ಷನ್ ಹೆಸರಲ್ಲಿ ಲಿಂಕ್ ಹರಿದಾಡಿದ್ದು ಇದನ್ನು ಒತ್ತಿದ್ದವರು ಪೇಚಿಗೆ ಸಿಲುಕಿದ್ದಾರೆ.

ಪಿಂಕ್ ಬಣ್ಣದ ಸಿಂಬಲ್ ನೊಂದಿಗೆ ಪಿಂಕ್ ವಾಟ್ಸಾಪ್ ನ್ಯೂ ವರ್ಷನ್ ಹೆಸರಲ್ಲಿ ಲಿಂಕ್ ಹರಿದಾಡಿದೆ. ಈ ಲಿಂಕ್ ಒತ್ತಿದ ಕೂಡಲೆ ಈಗಾಗಲೇ ಸದಸ್ಯರಾಗಿರುವ ಗ್ರೂಪ್ ಗಳಿಗೆ ಮತ್ತು ವೈಯಕ್ತಿಕವಾಗಿ ಫಾರ್ವರ್ಡ್ ಆಗಿದೆ. ವಾಟ್ಸಾಪ್ ಹೊಸ ವರ್ಷನ್ ಬಂದಿರಬಹುದೆAದು ಈ ಲಿಂಕ್ ಒತ್ತಿದ್ದವರು ಬೇಸ್ತು ಬಿದ್ದಿದ್ದಾರೆ.

ಇದೊಂದು ವೈರಸ್ ಲಿಂಕ್ ಆಗಿದ್ದು ಒಂದು ಸಲ ಒತ್ತಿದರೆ ಸಾವಿರಾರು ಮಂದಿಗೆ ಸೆಂಡ್, ಫಾರ್ವರ್ಡ್ ಆಗಿದೆ. ಬಹುತೇಕ ವಾಟ್ಸಾಪ್ ಗ್ರೂಪ್ ಗಳಲ್ಲಿ ಇಂತಹ ಸಂದೇಶಗಳು ಹರಿದಾಡಿದ್ದು, ಕ್ಲಿಕ್ ಮಾಡಿದವರ ಮೊಬೈಲ್ ನಿಂದ ಫಾರ್ವರ್ಡ್ ಆಗಿದೆ. ಇದರಿಂದಾಗಿ ಹಲವರು ಮುಜುಗರಕ್ಕೆ ಒಳಗಾಗಿದ್ದಾರೆ. ಸಂದೇಶ ಡಿಲಿಟ್ ಮಾಡುವಂತೆ ತಿಳಿಸಿದ್ದು, ಕೆಲವರಿಗೆ ಡಿಲಿಟ್ ಮಾಡಲು ಕೂಡ ಸಾಧ್ಯವಾಗಿಲ್ಲ. ಕೆಲವರು ಗ್ರೂಪ್ ಗಳಿಂದಲೇ ಹೊರ ಬಂದರೆ, ಮತ್ತೆ ಕೆಲವರು ಆಪ್ ಡಿಲಿಟ್ ಮಾಡಿಬಿಟ್ಟಿದ್ದಾರೆ.

ಇನ್ನೊಂದೆಡೆ ಈ ಲಿಂಕ್ ಅನ್ನು ಒತ್ತದಂತೆ ಮನವಿ ಮಾಡಿದ ಸಂದೇಶಗಳು ವಾಟ್ಸಾಪ್‌ನಲ್ಲಿ ನಿನ್ನೆಯಿಂದ ಹರಿದಾಡುತ್ತಿದೆ.

ಲಿಂಕ್ ಓಪನ್ ಮಾಡಿ ಯಾರಿಗಾದರೂ ಸಮಸ್ಯೆ ಆಗುತ್ತಿದ್ದರೆ ಹೀಗೆ ಮಾಡಿ

1.Settings – Apps ಗೆ ಹೋಗಿ ಹೊಸ ಪಿಂಕ್ ಬಣ್ಣದ WhatsApp ಆ್ಯಪ್ download ಆಗಿದ್ದನ್ನು ಹುಡುಕಿ uninstall ಮಾಡಿ.
2. Browser tab ನಲ್ಲಿ ಇರುವುದನ್ನ ರಿಮೂವ್ ಮಾಡಿ.
3. Cache ಮೆಮೊರಿ ಡಿಲೀಟ್ ಮಾಡಿ.
4. ಮೊಬೈಲ್ restart ಮಾಡಿ.

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...