Friday, June 27, 2025

ಬಿ.ಸಿ.ರೋಡು: ಕೊನೆಗೂ ದರ ಕಡಿತ ಮಾಡಿದ ಪೆಟ್ರೋಲ್ ಬಂಕ್ ಗಳು…

ಬಂಟ್ವಾಳ: ಬಿಸಿರೋಡಿನ ಪೆಟ್ರೋಲ್ ಪಂಪ್ ಗಳಲ್ಲಿ ಅನ್ವಯವಾಗದ ಪೆಟ್ರೋಲ್ ದರ ಎಂಬ ಸುದ್ದಿಯನ್ನು “ನಮ್ಮ ಬಂಟ್ವಾಳ “ ವಾಹಿನಿ ಬಿತ್ತರಿಸಿದ ಬಳಿಕ ಕ್ಷಣ ಮಾತ್ರದಲ್ಲಿ ಎಚ್ಚೆತ್ತುಕೊಂಡ ಪಂಪ್ ಮಾಲೀಕರು ದರ ಕಡಿತ ಮಾಡಿದ ಘಟನೆ ನಡೆದಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರ ನ.3 ರಂದು ಪೆಟ್ರೋಲ್ ಹಾಗೂ ಡೀಸೆಲ್‌ ದರ ಕಡಿತ ಮಾಡಿ ಅದೇಶ ನೀಡಿದ್ದರೂ ಬಿಸಿರೋಡಿನ ಪೆಟ್ರೋಲ್ ಪಂಪ್ ಗಳಲ್ಲಿ ಇಂದು ಸಂಜೆಯೂ ರಾಜ್ಯ ಸರಕಾರದ ದರ ಕಡಿತ ಅನ್ವಯ ವಾಗಿರಲಿಲ್ಲ ಎಂಬಂತೆ ನಡೆದುಕೊಂಡ ಘಟನೆಯಿಂದ ಬೆಸೆತ್ತ ಗ್ರಾಹಕರು ಜಿಲ್ಲಾಧಿಕಾರಿ ಗೆ ದೂರು ನೀಡಿದ್ದರು.

ಮಂಗಳೂರು ಸೇರಿದಂತೆ ಇತರ ಕೆಲವು ಭಾಗಗಳಲ್ಲಿ ಸಂಜೆ 6 ಗಂಟೆಯ ಬಳಿಕವೇ ರಾಜ್ಯ ಸರಕಾರದ 7 ರೂ ಗಳ ದರ ಕಡಿತ ಅನ್ವಯವಾಗಿತ್ತು.

ಅಂದರೆ ಮಂಗಳೂರಿನಲ್ಲಿ ,ಇಂದು ಸಂಜೆ ಲೀಟರ್ ಗೆ 99.76 ರೂ ಧಾರಣೆ ಇತ್ತು.

ಡೀಸೆಲ್ ಗೆ 84.24 ರೂ ಇತ್ತು.

ಆದರೆ ಬಿಸಿರೋಡಿನಲ್ಲಿ ಸಂಜೆ 6. ಗಂಟೆ ಬಳಿಕವೂ ಪೆಟ್ರೋಲ್ ಗೆ 106.92 ಹಾಗೂ ಡಿಸೇಲ್ ಗೆ 91.34 ರೂ ಗೆ ಮಾರಾಟ ವಾಗುತ್ತಿತ್ತು.

ಬಿಸಿರೋಡು ಕರ್ನಾಟಕ ರಾಜ್ಯದಲ್ಲಿ ಇಲ್ಲವೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಪಂಪ್ ಗಳಲ್ಲಿ ಪ್ರಶ್ನಿಸಿದ ಘಟನೆ ಕೂಡ ನಡೆದಿತ್ತು.

 

  *ಪಂಪ್ ಗಳಲ್ಲಿ ಗೊಂದಲ*

ರಾಜ್ಯದಲ್ಲಿ ಪೆಟ್ರೋಲ್ ದರ ಇಳಿಕೆ ಯಾದ ಬಳಿಕ ವೂ ಬಿಸಿರೋಡಿನ ಲ್ಲಿ ದರ ಕಡಿತ ಮಾಡದೇ ಹಗಲು ದರೋಡೆ ಮಾಡುವ ಪಂಪ್ ಗಳ ವಿರುದ್ಧ ಗ್ರಾಹಕರು ಪೆಟ್ರೋಲ್ ಹಾಕುವ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಆದರೆ ರಾಜ್ಯ ಸರಕಾರದ ದರ ಕಡಿತ ಇನ್ನೂ ಕೂಡ ಎಲ್ಲಿಯೂ ಅನ್ನಯವಾಗಿಲ್ಲ ಎಂದು ಇಲ್ಲಿನ ಪೆಟ್ರೋಲ್ ಬಂಕ್ ನವರು ಗ್ರಾಹಕರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದರು‌.

ಈ ಬಗ್ಗೆ ವಾಹಿನಿ ಸುದ್ದಿ ಪ್ರಸಾರ ಮಾಡಿದ ಬಳಿಕ ಎಚ್ಚೆತ್ತುಕೊಂಡ ಪಂಪ್ ಗಳ ಮಾಲಕರು ಕೂಡಲೇ ದರ ಕಡಿತ ಮಾಡಿದ್ದಾರೆ.

More from the blog

ಪಂತಡ್ಕ : ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ..

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ತರ್ಬಿಯತುಲ್ ಇಸ್ಲಾಂ ಮದ್ರಸ ಪಂತಡ್ಕ ಇದರ ವಿದ್ಯಾರ್ಥಿ ಸಂಘಟನೆ ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಮದ್ರಸ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ...

K. Annamalai – ಬಿಜೆಪಿಯ ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಣ್ಣಾಮಲೈ ಆಯ್ಕೆ..

ಅಣ್ಣಾ ಮಲೈಯವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿದೆ. ಬಿಜೆಪಿಯಲ್ಲಿ ಅಣ್ಣಾ ಮಲೈ ಅವರು ಪಾಪ್ಯುಲರ್ ಆಗಿದ್ದು, ಯುವ ಕಾರ್ಯಕರ್ತರ ಮನಸ್ಸು ಗೆದ್ದಿರುವ ನಾಯಕನಾಗಿ ಮಿಂಚುತ್ತಿದ್ದಾರೆ. ತಮಿಳುನಾಡು ರಾಜ್ಯದ ಬಿಜೆಪಿ ಅಧ್ಯಕ್ಷರಾಗಿದ್ದ ಇವರು...

ಬಡ ಮಗುವಿನ ಚಿಕಿತ್ಸೆ ನೆರವಿಗೆ ಮುಂದಾದ ಸಿದ್ದಕಟ್ಟೆ ಪ್ರಾ. ಕೃ. ಪತ್ತಿನ ಸಹಕಾರ ಸಂಘ…

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಇನ್ನೂ ಹೆಚ್ಚಿನ...

ಕರ್ನಾಟಕದ ಕರಾವಳಿ ಸೇರಿ ಹಲವೆಡೆ ಜು. 3ರವರೆಗೆ ಭಾರಿ ಮಳೆ..

ಮಂಗಳೂರು : ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇಂದು (ಜೂನ್ 27) ಸಹ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರೆಡ್...