ವಿಟ್ಲ: ಪೆರುವಾಯಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳ ಜಮೀನಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಘಟನೆ ನಡೆದಿದೆ. ಪೆರುವಾಯಿ ಮುಕ್ಡಾಪು ನಿವಾಸಿಗಳಾದ ಕಮಲ ಶೆಟ್ಟಿ ಹಾಗೂ ಆಲ್ಬಾರ್ಟ್ ಡಿಸೋಜ ಎಂಬರಿಗೆ ಸೇರಿದ ಜಾಗಕ್ಕೆ ವಿದ್ಯುತ್ ಕಂಬದ ತಂತಿ ಮುರಿದು ಜಮೀನಿಗೆ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ.
ಬೆಂಕಿ ಕೆನ್ನಾಲಿಗೆ ಜಮೀನು ಸುಟ್ಟು ಕರಕಲಾಗಿದೆ. ಪಕ್ಕದಲ್ಲಿ ದನದ ಕೊಟ್ಟಿಗೆ ಇದ್ದು, ಸ್ವಲ್ಪ ಅಂತರದಲ್ಲಿ ಹಾನಿ ತಪ್ಪಿದೆ. ಬಳಿಕ ಮನೆಯವರು, ನೆರೆಹೊರೆಯವರು ಸೇರಿ ಬೆಂಕಿ ಆರಿಸಿದ್ದಾರೆ.














