Wednesday, February 12, 2025

ಪೆರಾಜೆ ಕುಲಾಲ ಗ್ರಾಮ‌ಸಮಿತಿ ಮಹಾಸಭೆ

ಬಂಟ್ವಾಳ: ಪೆರಾಜೆ ಕುಲಾಲ ಗ್ರಾಮ ಸಮಿತಿ ಇದರ ವಾರ್ಷಿಕ ಮಹಾಸಭೆ ಮಿತ್ತಪೆರಾಜೆ , ಬೊಳ್ಳುಕಲ್ಲು ಶ್ರೀ ದೇವಿಭಜನಾ ಮಂದಿರದಲ್ಲಿ ಮಾಣಿ ಕುಲಾಲ ಸಂಘದ ಅಧ್ಯಕ್ಷ ಬೋಜಕುಲಾಲ್ ಅವರ ಆಧ್ಯಕ್ಷತೆಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮ ಗ್ರಾಮಗಳಲ್ಲಿ ಗ್ರಾಮ ಸಮಿತಿ ಗಳ ಮೂಲಕ, ಸಾಮಾಜಿಕ ಕಾರ್ಯಕ್ರಮಗಳನ್ನು , ಚಟುವಟಿಕೆಗಳನ್ನು ಮಾಡಬೇಕು .
ಪ್ರತಿ ಗ್ರಾಮ ಸಮಿತಿಗಳು ಕ್ರೀಯಾಶೀಲವಾಗಿ ಸಮಾಜದ ಸಮಸ್ಯೆ ಗಳಿಗೆ ಸ್ಪಂದನೆ ನೀಡಿದಾಗ ಮಾಣಿ ಕುಲಾಲ ಸಂಘದ ಸಂಘಟನಾತ್ಮಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಪೆರಾಜೆ ಗ್ರಾಮ ಸಮಿತಿ ಅಧ್ಯಕ್ಷ ಬಾಲಕೃಷ್ಣ ಪೆರಾಜೆ ಕಳೆದ ಎರಡು ವರ್ಷಗಳ ಅವಧಿಯ ಅನುಭವ ಹಂಚಿಕೊಂಡರು.

ಯತಿರಾಜ್ ಪೆರಾಜೆ ವಾರ್ಷಿಕ ವರದಿ ಮಂಡಿಸಿದರು.
ಬಳಿಕ ಮುಂದಿನ ಅವಧಿಗೆ ನೂತನ ಸಮಿತಿಯ ರಚನೆ ನಡೆಯಿತು.
ಈ ಸಂದರ್ಭದಲ್ಲಿ ಮಾಣಿ ಕುಲಾಲ ಸಂಘದ ಕಾರ್ಯದರ್ಶಿ ಪದ್ಮನಾಭ ಕೊಮ್ಮಕೋಡಿ,
ಪೆರಾಜೆ ಗ್ರಾಮ ಸಮಿತಿಯ ಪ್ರಮುಖರಾದ ಪುರುಷೋತ್ತಮ ಸಾದಿಕುಕ್ಕು, ಉಮೇಶ್ ಕುಲಾಲ್ ಸಾದಿಕುಕ್ಕು, ಮಾದವ ಪಾಳ್ಯ, ಜಮಾರ್ಧನ ಏಣಾಜೆ, ನಿತೇಶ್ ಮುಲಿತ್ತಪಡ್ಪು, ಚಂದ್ರಹಾಸ ಸಾದಿಕುಕ್ಕು, ಮನೋಜ್ ಮಿತ್ತಪೆರಾಜೆ, ಸುಂದರ ಮಿತ್ತಪೆರಾಜೆ, ಸಂದೀಪ್ ಬರೆ, ನಯನ್ ಮಿತ್ತಪೆರಾಜೆ, ದೀಪಕ್ ಕೊಮ್ಮಕೋಡಿ, ಚೇತನ್ ಬೊಳ್ಳುಕಲ್ಲು, ಶೇಖರ್ ಕೊಮ್ಮಕೋಡಿ ಮತ್ತಿತರರು ಉಪಸ್ಥಿತರಿದ್ದರು.

More from the blog

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...