ಭಾರತೀಯ ಜನ ಸಂಘದ ಕಾಲದಲ್ಲಿ ಪಕ್ಷ ಸಂಘಟನೆ ಮಾಡಿದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ, ಪೆರಾಜೆ ಯುವಕ ಮಂಡಲದ ಸ್ಥಾಪನೆಯ ರೂವಾರಿ ದಿವಂಗತ ಚಂದಪ್ಪ ಸಪಲ್ಯ ರ ಮನೆಯಲ್ಲಿ ಯುವ ವೇದಿಕೆ ಪೆರಾಜೆಯ ಸದಸ್ಯರು ದೀಪ ಬೆಳಗಿ ಹಿರಿಯರಿಂದ ಆಶೀರ್ವಾದ ಪಡೆದು, ಸಂಘಟನೆಗೋಸ್ಕರ ತನ್ನೆಲ್ಲವನ್ನು ತ್ಯಾಗ ಮಾಡಿದ ಚಂದಪ್ಪರವರ ಕುಟುಂಬವನ್ನು ಸ್ಮರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಹಿರಿಯರಾದ ಬಿ. ಟಿ. ನಾರಾಯಣ ಭಟ್, ಯುವ ವೇದಿಕೆಯ ಸಂಚಾಲಕರಾದ ರಾಜಾರಾಮ್ ಕಾಡೂರ್, ಕಾರ್ಯದರ್ಶಿ ಪ್ರಶಾಂತ್ ನಡುಗುಡ್ಡೆ, ಉಪಾಧ್ಯಕ್ಷರಾದ ಹರೀಶ್ ರೈ ಪಾನೂರ್, ಭಾರತೀಯ ಜನತಾ ಪಕ್ಷದ ಗ್ರಾಮ ಸಹ ಪ್ರಮುಖ್ ಉಮೇಶ್ ಎಸ್. ಪಿ. ಇನ್ನಿತರ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.


