Thursday, February 13, 2025

ಬೆಳ್ತಂಗಡಿ ಪೊಮ್ಮಾಜೆ ರಸ್ತೆ ರಿಪೇರಿ ಮಾಡುವಂತೆ ಗ್ರಾಮಸ್ಥರ ಅಳಲು

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಪಣಕಜೆ ಪೊಮ್ಮಾಜೆ ರಸ್ತೆ ಈ ಮಳೆಗಾಲದಲ್ಲಿ ಮತ್ತೆ ಸುದ್ದಿಯಲ್ಲಿದೆ. ಕಾರಣ ಕೆಲವು ತಿಂಗಳ ಹಿಂದೆ ಈ ರಸ್ತೆಯ ಅವ್ಯವಸ್ಥೆಯ ಬಗೆಗಿನ ದೂರುಗಳು ಪತ್ರಿಕಾ ಮಾಧ್ಯಮಗಳಲ್ಲಿ ಬಂದಿತ್ತು.

ಚರಂಡಿ ವ್ಯವಸ್ಥೆಯಿಲ್ಲದೆ, ದಾರಿ ದೀಪದ ವ್ಯವಸ್ಥೆಯಿಲ್ಲದ ಕೆಸರು ತುಂಬಿದ ರಸ್ತೆಯಾಗಿತ್ತು ಪೊಮ್ಮಾಜೆ ಪಣಕಜೆ ರಸ್ತೆ.

ಬಡ ಕೃಷಿ ಕೂಲಿ ಕಾರ್ಮಿಕರೇ ಈ ರಸ್ತೆಯ ಫಲಾನುಭವಿ ನಾಗರಿಕರು. ಈ ರಸ್ತೆ ಕೆಲವು ತಿಂಗಳ ಹಿಂದೆ ಸಮರ್ಪಕ ಚರಂಡಿಗೆ ವ್ಯವಸ್ಥೆಯಿಲ್ಲದೆ ನೀರು ಕೆಸರು ಕಸಕಡ್ಡಿಗಳು ಸಂಪೂರ್ಣ ರಸ್ತೆಯಲ್ಲೇ ಹರಿದು, ಈ ರಸ್ತೆಯಲ್ಲಿ ಪಾದಚಾರಿಗಳು ಹಾಗು ವಾಹನ ಸವಾರರು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಿರಿಯ ನಾಗರಿಕರು ಹರಸಾಹಸಪಟ್ಟು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಎಷ್ಟೋ ಬಾರಿ ಈ ಕೆಸರು ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದ ಉದಾಹರಣೆಗಳಿವೆ.

ಈ ರಸ್ತೆ ಅವ್ಯವಸ್ಥೆಯ ಬಗ್ಗೆ ಪತ್ರಿಕಾ ಮಾಧ್ಯಮಗಳಲ್ಲಿ ವರದಿ ಬಂದ ತಕ್ಷಣ ಮಾಲಾಡಿ ಪಂಚಾಯತ್ ಆಡಳಿತವು ಪೂರಕವಾಗಿ ಸ್ಪಂದಿಸಿದೆ. ಪಂಚಾಯತ್ ಆಡಳಿತದವರಿಗೆ ಅಭಿನಂದನೆಗಳು ಕೂಡ.

ಈಗ ವಿಷಯವೇನೆಂದರೆ,ಈ ರಸ್ತೆಗೆ ಪಂಚಾಯತ್ ಅನುದಾನದ ಕಾಮಗಾರಿ ಕೂಡಾ ನಡೆದಿದೆ. ಆದರೆ ಅದು ಅದು ಅಸಮರ್ಪಕ ಕಾಮಗಾರಿಯಾಗಿದೆ ಎಂದು ಈ ರಸ್ತೆ ಫಲಾನುಭವಿ ನಾಗರಿಕರ ದೂರು. ಕಾರಣ, ರಸ್ತೆ ಕಾಣದಂತೆ ಕುರುಚಲು ಗಿಡಗಳು ಪೊದೆಗಳಿಂದ ತುಂಬಿದ್ದ ಈ ರಸ್ತೆಯಲ್ಲಿ ಅರ್ದಮ್ ಬರ್ದ ಕಾಮಗಾರಿ ನಡೆದಿದೆ. ಕೆಲವು ಕಡೆ ಮಾತ್ರ ಚರಂಡಿ ಸರಿಪಡಿಸಲಾಗಿದೆ. ಕೆಲವು ಕಡೆ ಪೊದೆಗಳನ್ನು ಹಾಗೆಯೆ ಬಿಡಲಾಗಿದೆ.
ಅದೇ ರೀತಿ ದಾರಿದೀಪ ಹಾಕಿಲ್ಲ ರಾತ್ರಿ ಸಮಯದಲ್ಲಿ ನಾಗರಿಕರಿಗೆ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.

ಗಾಯದ ಮೇಲೆ ಬರೆ ಎಳೆದಂತೆ ಇಲ್ಲಿನ ನಾಗರಿಕರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಮೊದಲೇ ಕೆಸರಿನಿಂದ ತುಂಬಿದ ಈ ರಸ್ತೆಗೆ ಈಗ ಪಂಚಾಯತ್ ಮೂಲಕ ಕೆಸರು ತೆಗೆಯದೆ ಕೆಸರಿನ ಮೇಲೆಯೇ ಕೋರೆಯ ದೂಳು ಹುಡಿಯನ್ನು ಹಾಕಿ ಈಗ ಈ ರಸ್ತೆ ಸಂಪೂರ್ಣ ಸಂಚಾರ ಅಯೋಗ್ಯವಾಗಿ ಕಂಬಳದ ಟ್ರಾಕ್ ಗಳಂತಾಗಿದೆ. ಮೊದಲೇ ಕೆಸರಡೊಂಜಿ ಕೂಟ ಗದ್ದೆಯಂತಿದ್ದ ಈ ರಸ್ತೆ ಈಗ ನಾಗರಿಕರಿಗೆ ನಡೆದಾಡಲು ಅಯೋಗ್ಯವಾಗಿದೆ.

ಆದ್ದರಿಂದ ಮಾಲಾಡಿ ಪಂಚಾಯತ್ ಆಡಳಿತವು ಈ ರಸ್ತೆಯ ಸಮಸ್ಯೆಯನ್ನು ದಾರಿದೀಪದ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಿಕೊಡಬೇಕೆಂದು ಊರ ಸಮಸ್ತ ನಾಗರಿಕರ ಪರವಾಗಿ ಬೇಡಿಕೊಳ್ಳುತ್ತೇವೆ.

– ಊರ ಸಮಸ್ತ ನಾಗರಿಕರ ಪರವಾಗಿ
 ರಿಯಾಜ್ ಮದ್ದಡ್ಕ 

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...