Friday, June 27, 2025

ಫರಂಗಿಪೇಟೆ ಬಳಿ ಬಂಗ್ಲಗುಡ್ಡೆ ಎಂಬಲ್ಲಿ ಪುರಾತನ ಕಾಲದ ಮಸೀದಿ ಅವಶೇಷಗಳು ಮತ್ತು ಮನುಷ್ಯನ ‌ಪಳೆಯುಳಿಕೆಗಳು ಪತ್ತೆ

ಬಂಟ್ವಾಳ: ಫರಂಗಿಪೇಟೆ ಸಮೀಪದ ಬಂಗ್ಲಗುಡ್ಡೆ ಎಂಬಲ್ಲಿ ಪುರಾತನ ಕಾಲದ ಸುಮಾರು 300 ವರುಷದ ಹಳೆಯ ಎನ್ನಲಾದ ಮಸೀದಿಯ ಅವಶೇಷಗಳು ಹಾಗೂ ಮುಸ್ಲಿಮರು ದಫನ ಮಾಡಿದ ಮನುಷ್ಯನ ಎಲುಬುಗಳು ಮತ್ತು ಗುಹೆಗಳು ಪತ್ತೆಯಾಗಿವೆ.
ಕಳೆದ ಮೂರು ದಿನಗಳ ಹಿಂದೆ ಎರಡು ಪೆರ್ನಾಲ್ ನಮಾಝ್ ಗೆ ಮಾತ್ರ ಅನುಕೂಲವಾಗುವಂತೆ ಆ ಸ್ಥಳದಲ್ಲಿ‌ ಜೆಸಿಬಿ ಮೂಲಕ ಸಮತಟ್ಟು ಮಾಡುವ ಸಂದರ್ಭದಲ್ಲಿ ಜೆಸಿಬಿ ಆಪರೇಟರ್ ನಿಗೆ ಕರ್ಪೂರ ಸುವಾಸನೆಯ ಪರಿಮಳ ಬರಲಾರಂಭಿಸಿದವು, ಗಡಿ ಬಿಡಿಗೊಂಡ ಜೆ.ಸಿ.ಬಿ‌ ಯ ಅಪರೇಟರ್ ಸ್ಥಳೀಯ ಮುಖಂಡರಿಗೆ ಮಾಹಿತಿಯನ್ನು ನೀಡಿದ್ದಾನೆ, ವಿಷಯ ಅರಿತ ಸ್ಥಳೀಯ ಮುಖಂಡರು ಘಟನಾ ಸ್ಥಳದಲ್ಲಿ ಅಚ್ಚರಿಯೊಂದು‌ ಕಾದಿತ್ತು, ಸರಿ ಸುಮಾರು ಮುನ್ನೂರು ವರ್ಷದ ಹಳೆಯದಾದ ಖಬರ್ ಒಂದು ಗೋಚರಗೊಂಡಿತ್ತು, ಖಬರಿನ ಮುಚ್ಚಿದ ಕಲ್ಲುಗೆ ಕಟ್ಟಲಾದ ಅಡ್ಡ ಕಲ್ಲೋಂದು‌‌ ಕಳಚಿ ಬಿದ್ದಿದ್ದರಿಂದ ಖಬರಿನ ಸುತ್ತಲು‌ ಕರ್ಪೂರದ ಸುವಾಸನೆ ಬರಲಾರಂಭಿಸಿತು, ದಫನ್ ಮಾಡಿದ ವ್ಯಕ್ತಿಯ ತಲೆಯ ಭಾಗವೂ ಕಿಬ್ಲಾಕ್ಕ ಮುಖವಾಗಿ ತಿರುಗಿದ್ದನ್ನು ಕಂಡ ಸ್ಥಳೀಯರೇಲ್ಲರೂ ಅಚ್ಚರಿಗೊಂಡರು, ದಪನ್ ಮಾಡಿದ ಜನಾಝದ ಪಳೆಯುಳಿಕೆ ಈಗಲೂ ನಮ್ಮ ಕಣ್ಣ ಮುಂದಿದ್ದು, ಅದಕ್ಕೆ ಮಂಗಳೂರು ‌ಖಾಝಿಯ ಸೂಚನೆಯಂತೆ ಪುನಃ ಕಲ್ಲನ್ನು ಅಡ್ಡಕಟ್ಟಿ ಮುಚ್ಚಿದರು, ಖಬರಿನ ಪಕ್ಕದಲ್ಲಿ ಆಳವಾದ ಗುಹೆಯು ಕೂಡ ಪತ್ತೆಯಾಗಿದೆ. ಸ್ಥಳೀಯ ಮುಸ್ಲಿಮೇತರರನ್ನು ಸಂಪರ್ಕಿಸಿ ವಿಚಾರಿಸಿದಾಗ ಸೂರ್ಯ ಅಸ್ತದ (ಮಗ್ರಿಬ್) ಸಮಯದಲ್ಲಿ ಯಾವಾಲೂ ನಮಗೆ ಸುಗಂಧದ ಸುವಾಸನೆ ಬೀರುತ್ತಿತ್ತು ಎನ್ನುತ್ತಾರೆ,ಇಂದು ಘಟನಾ ಸ್ಥಳಕ್ಕೆ ಖಾಝಿಯವರು ಬೇಟಿ ನೀಡಿ ಸ್ಥಳವನ್ನು ಪರಿಶೀಲಿಸಿ ಯಥಾಸ್ಥಿತಿಯನ್ನು ಕಾಯ್ದಿರಿಸಲು ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ

More from the blog

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...