Friday, January 30, 2026

ಫರಂಗಿಪೇಟೆ ಬಳಿ ಬಂಗ್ಲಗುಡ್ಡೆ ಎಂಬಲ್ಲಿ ಪುರಾತನ ಕಾಲದ ಮಸೀದಿ ಅವಶೇಷಗಳು ಮತ್ತು ಮನುಷ್ಯನ ‌ಪಳೆಯುಳಿಕೆಗಳು ಪತ್ತೆ

ಬಂಟ್ವಾಳ: ಫರಂಗಿಪೇಟೆ ಸಮೀಪದ ಬಂಗ್ಲಗುಡ್ಡೆ ಎಂಬಲ್ಲಿ ಪುರಾತನ ಕಾಲದ ಸುಮಾರು 300 ವರುಷದ ಹಳೆಯ ಎನ್ನಲಾದ ಮಸೀದಿಯ ಅವಶೇಷಗಳು ಹಾಗೂ ಮುಸ್ಲಿಮರು ದಫನ ಮಾಡಿದ ಮನುಷ್ಯನ ಎಲುಬುಗಳು ಮತ್ತು ಗುಹೆಗಳು ಪತ್ತೆಯಾಗಿವೆ.
ಕಳೆದ ಮೂರು ದಿನಗಳ ಹಿಂದೆ ಎರಡು ಪೆರ್ನಾಲ್ ನಮಾಝ್ ಗೆ ಮಾತ್ರ ಅನುಕೂಲವಾಗುವಂತೆ ಆ ಸ್ಥಳದಲ್ಲಿ‌ ಜೆಸಿಬಿ ಮೂಲಕ ಸಮತಟ್ಟು ಮಾಡುವ ಸಂದರ್ಭದಲ್ಲಿ ಜೆಸಿಬಿ ಆಪರೇಟರ್ ನಿಗೆ ಕರ್ಪೂರ ಸುವಾಸನೆಯ ಪರಿಮಳ ಬರಲಾರಂಭಿಸಿದವು, ಗಡಿ ಬಿಡಿಗೊಂಡ ಜೆ.ಸಿ.ಬಿ‌ ಯ ಅಪರೇಟರ್ ಸ್ಥಳೀಯ ಮುಖಂಡರಿಗೆ ಮಾಹಿತಿಯನ್ನು ನೀಡಿದ್ದಾನೆ, ವಿಷಯ ಅರಿತ ಸ್ಥಳೀಯ ಮುಖಂಡರು ಘಟನಾ ಸ್ಥಳದಲ್ಲಿ ಅಚ್ಚರಿಯೊಂದು‌ ಕಾದಿತ್ತು, ಸರಿ ಸುಮಾರು ಮುನ್ನೂರು ವರ್ಷದ ಹಳೆಯದಾದ ಖಬರ್ ಒಂದು ಗೋಚರಗೊಂಡಿತ್ತು, ಖಬರಿನ ಮುಚ್ಚಿದ ಕಲ್ಲುಗೆ ಕಟ್ಟಲಾದ ಅಡ್ಡ ಕಲ್ಲೋಂದು‌‌ ಕಳಚಿ ಬಿದ್ದಿದ್ದರಿಂದ ಖಬರಿನ ಸುತ್ತಲು‌ ಕರ್ಪೂರದ ಸುವಾಸನೆ ಬರಲಾರಂಭಿಸಿತು, ದಫನ್ ಮಾಡಿದ ವ್ಯಕ್ತಿಯ ತಲೆಯ ಭಾಗವೂ ಕಿಬ್ಲಾಕ್ಕ ಮುಖವಾಗಿ ತಿರುಗಿದ್ದನ್ನು ಕಂಡ ಸ್ಥಳೀಯರೇಲ್ಲರೂ ಅಚ್ಚರಿಗೊಂಡರು, ದಪನ್ ಮಾಡಿದ ಜನಾಝದ ಪಳೆಯುಳಿಕೆ ಈಗಲೂ ನಮ್ಮ ಕಣ್ಣ ಮುಂದಿದ್ದು, ಅದಕ್ಕೆ ಮಂಗಳೂರು ‌ಖಾಝಿಯ ಸೂಚನೆಯಂತೆ ಪುನಃ ಕಲ್ಲನ್ನು ಅಡ್ಡಕಟ್ಟಿ ಮುಚ್ಚಿದರು, ಖಬರಿನ ಪಕ್ಕದಲ್ಲಿ ಆಳವಾದ ಗುಹೆಯು ಕೂಡ ಪತ್ತೆಯಾಗಿದೆ. ಸ್ಥಳೀಯ ಮುಸ್ಲಿಮೇತರರನ್ನು ಸಂಪರ್ಕಿಸಿ ವಿಚಾರಿಸಿದಾಗ ಸೂರ್ಯ ಅಸ್ತದ (ಮಗ್ರಿಬ್) ಸಮಯದಲ್ಲಿ ಯಾವಾಲೂ ನಮಗೆ ಸುಗಂಧದ ಸುವಾಸನೆ ಬೀರುತ್ತಿತ್ತು ಎನ್ನುತ್ತಾರೆ,ಇಂದು ಘಟನಾ ಸ್ಥಳಕ್ಕೆ ಖಾಝಿಯವರು ಬೇಟಿ ನೀಡಿ ಸ್ಥಳವನ್ನು ಪರಿಶೀಲಿಸಿ ಯಥಾಸ್ಥಿತಿಯನ್ನು ಕಾಯ್ದಿರಿಸಲು ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ

More from the blog

9 &11 ಖಾತೆ ಅರ್ಜಿಗಳನ್ನು ಹಳೆಯ ತಂತ್ರಾಂಶದಲ್ಲಿ ವಿಲೇವಾರಿಗೆ ಪ್ರಭಾಕರ ಪ್ರಭು ಮನವಿ 

ಬಂಟ್ವಾಳ : ನೆನೆಗುದಿಗೆ ಬಿದ್ದಿರುವ 9 &11 ಖಾತೆ ಅರ್ಜಿಗಳನ್ನು ಹಳೆಯ ತಂತ್ರಾಂಶದಲ್ಲಿ ವಿಲೇವಾರಿ ಮಾಡಲು ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್...

ವಿಟ್ಲ ಜಾತ್ರೆ ಅಂಗಡಿ ಏಲಂನಲ್ಲಿ ಭಾರೀ ಅವ್ಯವಹಾರದ ದೂರು..

ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯ ಅಂಗಡಿ ಏಲಂನ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಕುತ್ಯಾಡಿ ನಿವಾಸಿ ಲಕ್ಷ್ಮೀಶ ಕೆ. ಎಂಬವರು ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದಾರೆ. ಜಾತ್ರೆಗೆ ಸಂತೆ...

ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಯಶ್ ಕುಮಾರ್ ಶರ್ಮಾ ನೇಮಕ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಪ ವಿಭಾಗ, ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಯಶ್ ಕುಮಾರ್ ಶರ್ಮಾ, ಐಪಿಎಸ್ (ಕೆಎನ್ 2023) ನೇಮಿಸಲಾಗಿದೆ. ಬಳ್ಳಾರಿ ನಗರ ಉಪ ವಿಭಾಗ, ಬಳ್ಳಾರಿ ಜಿಲ್ಲೆಗೆ ಸಹಾಯಕ ಪೊಲೀಸ್...

B.C. Road : ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ

ಬಂಟ್ವಾಳ: ಅರಣ್ಯ ಇಲಾಖೆ ಮಂಗಳೂರು ವಿಭಾಗದ( ಬಂಟ್ವಾಳ, ಬೆಳ್ತಂಗಡಿ,ಮಂಗಳೂರು) ವತಿಯಿಂದ ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ ಬಿಸಿರೋಡಿನ ರೋಟರಿ ಕ್ಲಬ್ ನ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಅಶೋಕ್...