ವಿಟ್ಲ : ಇತಿಹಾಸ ಪ್ರಸಿದ್ಧ ಪಣೋಲಿಬೈಲು ಕ್ಷೇತ್ರದ ತುಳುಭಕ್ತಿ ಗೀತೆ ‘ಪನೋಲಿಬೈಲ್ದ ಶ್ರೀ ಕಲ್ಲುರ್ಟಿ ‘ ಶನಿವಾರ ಶ್ರೀ ಕ್ಷೇತ್ರದಲ್ಲಿ ಅನಾವರಣ ಗೊಂಡಿತು.



ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅನುವಂಶಿಕ ಅರ್ಚಕ ರಾದ ವಾಸುದೇವ ಮೂಲ್ಯ, ಅರ್ಚಕ ನಾರಾಯಣ ಮೂಲ್ಯ, ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್, ಸಿಬ್ಬಂದಿಗಳಾದ ಮೋನಪ್ಪ ಮೂಲ್ಯ, ದಯಾನಂದ ಶೆಟ್ಟಿ, ದಯಾನಂದ ಕುಲಾಲ್, ರಾಜೇಶ್, ಸುಂದರ, ರವಿಪ್ರಕಾಶ್, ಕೇಶವ ಉಪಸ್ಥಿತರಿದ್ದರು.
ಭಕ್ತಿ ಗೀತೆಗೆ ಸಾಹಿತ್ಯ ಬರೆದ ವಿನಯ ಪೂಜಾರಿ ಕನ್ಯಾನ, ಉದಯೋನ್ಮುಖ ಗಾಯನ ಪ್ರತಿಭೆ ತ್ರುಶ್ವಿ ಕಡಬ, ಯೂಟ್ಯೂಬ್ ಆಲ್ಬಂ ನಿರ್ಮಾಣಕ್ಕೆ ಸಹಕರಿಸಿದ ಸುರೇಶ್ ಕಡಬ, ಗುಲಾಬಿ ಬಿ, ಅಶ್ವಿನ್ ಸಾಲ್ಯಾನ್, ಪತ್ರಕರ್ತ ವಿಷ್ಣುಗುಪ್ತ ಪುಣಚ ಇನ್ನಿತರರು ಇದ್ದರು.












