ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ಗುಡ್ಡೆಅಂಗಡಿಯಲ್ಲಿ ನಿರ್ಮಾಣಕ್ಕೆ ಮುಂದಾಗಿರುವ ಗ್ಯಾಸ್ ಪಂಪನ್ನು ವಿರೋಧಿಸಿ ಗುಡ್ಡೆಅಂಗಡಿ ನಾಗರಿಕರಿಂದ ಗ್ಯಾಸ್ ಪಂಪ್ ವಿರೋಧಿಸಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

ಈ ಗ್ಯಾಸ್ ಪಂಪ್ ನಿಂದ ಅದರ ಪಕ್ಕದಲ್ಲಿ ವಾಸವಿರುವ ಜನಸಾಮಾನ್ಯರಿಗೆ ಅಪಾಯಕಾರಿಯಾಗಿದ್ದು, ಇದರ ಬಗ್ಗೆ ಮನೆಯವರಲ್ಲಿ ಕೇಳಿದಾಗ ಎರಡು ಮನೆಯನ್ನು ಬಿಟ್ಟು ಉಳಿದ ಯಾವುದೇ ಮನೆಯವರಿಗೆ ಮಾಹಿತಿ ಇಲ್ಲ, ಜನಸಾಮಾನ್ಯರ ಅಭಿಪ್ರಾಯ ಕೇಳದೇ ಗೌಪ್ಯವಾಗಿ ಈ ಒಂದು ಅನುಮತಿ ಪ್ರಕ್ರಿಯೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಯಲ್ಲಿ ದೂರಲಾಗಿದೆ. ನಿಯೋಗವು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ, (ಪುರಸಭೆ, ತಾಲೂಕು ದಂಡಾದಿಕಾರಿ, ಗ್ರಾಮ ಲೆಕ್ಕಿಗ, ಅಗ್ನಿ ಶಾಮಕ ದಳ, ಪರಿಸರ ಇಲಾಖೆ, ಪೋಲೀಸ್ ಠಾಣೆ ಇತರೇ) ಮನವಿ ಸಲ್ಲಿಸಿ, ಅನುಮತಿ ನೀಡಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಯಿತು.

