ಬೆಳ್ತಂಗಡಿ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಹರಡದ ಕುರಿತು ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಸಭೆ ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದು, ಬುಧವಾರದಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ನಡೆಸಲಾಗಿದೆ.
ತಾಲೂಕಿನಲ್ಲಿ 48 ಗ್ರಾಮ ಪಂಚಾಯಿತಿಗಳಿದ್ದು, 21 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮಾಜಿ ಕಅಂತರ ಹಾಗೂ ಸರಕಾರದ ಆದೇಶದಂತೆ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಸಭೆ ನಡೆಸಲಾಗಿದೆ.
ಬುಧವಾರದಂದು ಅಳದಂಗಡಿ ಮತ್ತು ಸುಲ್ಕೇರಿ, ನಾರಾವಿ, ಅಂಡಿಂಜೆ, ಮರೋಡಿ, ಕಾಶಿಪಟ್ನ, ಹೊಸಂಗಡಿ, ಆರಂಬೋಡಿ, ವೇಣೂರು, ಕುಕ್ಕೇಡಿ, ಪಡಂಗಡಿ ಸೇರಿದಂತೆ 11 ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಲಾಗಿದೆ.



ಗುರುವಾರದಂದು ಮೇಲಂತಬೆಟ್ಟು, ಶಿರ್ಲಾಲು, ಬಳೆಂಜ, ಕುವೆಟ್ಟು, ಮಾಲಾಡಿ, ಮಡಂತ್ಯಾರು, ಮಚ್ಚಿನ, ತಣ್ಣೀರುಪಂತ, ತೆಕ್ಕಾರು, ಬಾರ್ಯ 10 ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ತಾ.ಪಂ. ಇಒ ಕೆ.ಇ. ಜಯರಾಮ್, ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್ ಪೋರ್ಸ್ನ ಸಮಿತಿಯ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಸದಸ್ಯರುಗಳು, ಪಿಡಿಒಗಳು, ವಿಎಗಳು ಭಾಗವಹಿಸಿದ್ದರು.












