Tuesday, January 27, 2026

ಆಶ್ರಮಗಳು ಅನಿವಾರ್ಯ ವಾಗುತ್ತಿವೆ: ಡಾ.ಗೌರಿ ಪೈ

 

ಪುತ್ತೂರು: ಭಾರತೀಯ ಸಂಸ್ಕೃತಿಯ ಪ್ರಕಾರ ಭಾರತದಲ್ಲಿ ವೃದ್ಧಾಶ್ರಮಕ್ಕೆ ಅವಕಾಶವಿಲ್ಲ, ಆದರೆ ಇಂದು ವೃದ್ಧಾಶ್ರಮಗಳು
, ಅನಾಥಾಶ್ರಮಗಳು
ಅನಿವಾರ್ಯ ಎಂಬ ಸ್ಥಿತಿ ಉಂಟಾಗಿದೆ ಎಂದು ಸಂಪ್ಯ ಆನಂದಾಶ್ರಮದ ಅಧ್ಯಕ್ಷೆ ಡಾ.ಗೌರಿ ಪೈ ಹೇಳಿದರು.

ಪುತ್ತೂರು ದರ್ಬೆ ವಿದ್ಯಾನಗರದ
ಬಹುವಚನಂ ಆಶ್ರಯದಲ್ಲಿ ಭಾನುವಾರ
ನಡೆದ ತಿಂಗಳ ಕಾರ್ಯಕ್ರಮದಲ್ಲಿ ವೃದ್ಧಾಶ್ರಮ-ಅನಾಥಾಶ್ರಮ ಮಾನವೀಯತೆಯ ಮುಖಗಳು ಕುರಿತಾದ ಸಂವಾದದಲ್ಲಿ ಅವರು ಮಾತನಾಡಿದರು.
ಜನರಿಗಾಗಿ ನಾವು ಕಷ್ಟಪಟ್ಟರೆ ನಮಗೆ ನೆರವು ಮಾಡುವವರೂ ಇರುತ್ತಾರೆ ಎನ್ನುವುದಕ್ಕೆ ನಾನೇ ಉದಾಹರಣೆ ಎಂದ ಅವರು, ತನ್ನ ಆನಂದಾಶ್ರಮದ ನಿರ್ವಹಣೆ, ಮಾನಸಿಕ ಆರೋಗ್ಯ,ಕ್ಯಾನ್ಸರ್ ಜಾಗೃತಿ, ಕಣ್ಣು ತಪಾಸಣಾ ಶಿಬಿರದಿಂದ ಆಗಿರುವ ಪರಿಣಾಮಗಳ ಬಗ್ಗೆ ವಿವರಿಸಿದರು. ಸಹಾಯ ಆಶ್ರಯಿಸಿ ಬಂದವರಿಗೆ ಆಶ್ರಯದ ಜೊತೆಗೆ ಬದುಕನ್ನು ಕಟ್ಟಿಕೊಡುವ ಕಾರ್ಯ ನಡೆಯುತ್ತಿದೆ, ಅವರ ಮುಖದ ಸಂತೋಷ ನಮ್ಮಲ್ಲಿ ಜೀವನೋಲ್ಲಾಸ ಹೆಚ್ಚಿಸುತ್ತದೆ ಎಂದರು.
ದೈಗೋಳಿ ಶ್ರೀ ಸಾಯಿ ಸೇವಾ ಪ್ರತಿಷ್ಠಾನ ದ ಮ್ಯಾನೇಜಿಂಗ್ ಟ್ರಸ್ಟಿ ಡಾ.ಉದಯಕುಮಾರ್ ನೂಜಿ ಮಾತನಾಡಿ, ಮನೆಗಳಲ್ಲಿ ಹಿರಿಯರಿಗೆ ಸಿಗಬೇಕಾದ ಪ್ರೀತಿ, ಗೌರವ ಸಿಗದೇ ಇದ್ದಾಗ ಉಂಟಾಗುವ ಅನಾಥ ಪ್ರಜ್ಞೆಯೇ ಸಂಬಂಧ ಗಳ ನಡುವಿನ ಅಂತರವನ್ನು ಹೆಚ್ಚಾಗುವಂತೆ ಮಾಡುತ್ತದೆ, ಈ ಬಗ್ಗೆ ಕಿರಿಯ ಮನಸ್ಸುಗಳು ಜಾಗೃತರಾಗಬೇಕು ಎಂದರು. ಆಶ್ರಮದಲ್ಲಿ ವಿವಿಧ ಘಟನೆಗಳನ್ನು ಕೇಳುಗರ ಮುಂದೆ ತೆರೆದಿಟ್ಟರು.

ಸುರತ್ಕಲ್ ಚಿರಂತನ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಭಾರವಿ ದೇರಾಜೆ ಮಾತನಾಡಿ, ಪ್ರತೀ ಆಶ್ರಮ ಗಳಲ್ಲಿ ನಾಟಕ, ಸಿನಿಮಾ ಮಾಡುವಂತಾ ಕಥೆ, ಪಾತ್ರಗಳು ಸಿಗುತ್ತದೆ, ಆದರೆ , ಆಶ್ರಮದ ನಿರ್ವಹಣೆ ಯ ಹಿಂದಿನ ಕಷ್ಟ ಮಾತ್ರ ಹೇಳುವುದು ಕಷ್ಟ ಎನ್ನುತ್ತಲೇ, ವಿವಿಧ ಘಟನೆಗಳನ್ನು ಬಿಚ್ಚಿಟ್ಟರು. ಪುತ್ತೂರು
ಪ್ರಜ್ಞಾ ವಿಶಿಷ್ಟ ಚೇತನರ ಪುನರ್ವಸತಿ ಕೇಂದ್ರ ದ ಅಣ್ಣಪ್ಪ‌‌ ರವರು ಮಾತನಾಡಿ, ಮಾನಸಿಕವಾಗಿ ಬೆಳವಣಿಗೆಯಾಗದೆ ಇರುವವರನ್ನು ನಮ್ಮ ಆಶ್ರಮದಲ್ಲಿ ನೋಡಿಕೊಳ್ಳಲಾಗುತ್ತಿದೆ. ಅವರಿಗೆ ಬೇಕಾಗಿರುವುದು ಪ್ರೀತಿ ಅದು ಮನೆಗಳಲ್ಲೂ ಸಿಗಬೇಕಿದೆ ಎಂದರು.
ಪ್ರಿಯಂವದ ಪ್ರಾರ್ಥಿಸಿದರು. ಬಹುವಚನಂ ನ ಡಾ.ಶ್ರೀಶ ಕುಮಾರ್ ಎಂ.ಕೆ.ಸ್ವಾಗತಿಸಿ, ವಂದಿಸಿದರು.

More from the blog

Bantwal : ರಥಸಪ್ತಮಿಯ ಪ್ರಯುಕ್ತ 108 ಸೂರ್ಯ ನಮಸ್ಕಾರ ಕಾರ್ಯಕ್ರಮ

ಬಂಟ್ವಾಳ : ಸಂಸ್ಕಾರ ಸಂಘಟನೆ ಸೇವೆಯ ಧ್ಯೇಯ ಉದ್ದೇಶಗಳನ್ನು ಹೊಂದಿರುವ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ( ರಿ) ಕರ್ನಾಟಕ ಕೇಂದ್ರ ಕಚೇರಿ ತುಮಕೂರು ನೇತ್ರಾವತಿ ವಲಯ ಮಂಗಳೂರು, ಬಂಟ್ವಾಳ ತಾಲೂಕು ವತಿಯಿಂದ ಜ....

ಉಸ್ತುವಾರಿ ಸಚಿವರು ಗಣರಾಜ್ಯೋತ್ಸವ ವೇದಿಕೆಯನ್ನು ಸುಳ್ಳು ಹರಡಲು ಬಳಸಿಕೊಂಡಿರುವುದು ಖೇದಕರ : ಸಂಸದ ಕ್ಯಾ.ಚೌಟ

ಮಂಗಳೂರು: ಸಂವಿಧಾನಿಕ ಹುದ್ದೆಯನ್ನು ದುರುಪಯೋಗಪಡಿಸಿ ಸುಳ್ಳಿನ ಕಾರ್ಖಾನೆಯನ್ನೇ ಸೃಷ್ಟಿಸುವ ಕಾಂಗ್ರೆಸ್‌ ಸರ್ಕಾರದ ಪ್ರಯತ್ನ ಸಂಪೂರ್ಣ ವಿಫಲಗೊಂಡಿರುವ ಕಾರಣ ಇದೀಗ ಸಚಿವ ದಿನೇಶ್‌ ಗುಂಡೂರಾವ್‌ ಅವರು ಘನವೆತ್ತ ರಾಜ್ಯಪಾಲರ ನಡೆಯನ್ನು ಟೀಕಿಸುತ್ತಿದ್ದಾರೆ ಎಂದು ದಕ್ಷಿಣ...

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ವೈಭವದಿಂದ ಜರುಗಿದ ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಮಡಂತ್ಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ, ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮವು ಜ. 25 ಭಾನುವಾರದಂದು ಮಡಂತ್ಯಾರಿನಲ್ಲಿ ಅತ್ಯಂತ ವೈಭವ ಮತ್ತು ಶಿಸ್ತಿನೊಂದಿಗೆ ನಡೆಯಿತು. ಸಂಜೆ ನಾಲ್ಕು ಗಂಟೆಗೆ...