ಮಂಗಳೂರು: ಪಬ್ ಜೀ ಆಟದಲ್ಲಿ ಯಾವಾಗಲೂ ಗೆಲ್ಲುತ್ತಿದ್ದ 12 ಬಾಲಕ ತನ್ನ ಸ್ನೇಹಿತನಿಂದಲೇ ಹತ್ಯೆಯಾದ ಭೀಕರ ಘಟನೆ ಮಂಗಳೂರು ಹೊರವಲದಯ ಉಳ್ಳಾಲದ ಕೆಸಿ. ರಸ್ತೆಯಲ್ಲಿ ನಡೆದಿದೆ.

12 ವರ್ಷದ ಬಾಲಕ ಆಕೀಫ್ ಹತ್ಯೆಯಾಗಿದ್ದು, 17 ವರ್ಷದ ಸ್ನೇಹಿತ ದೀಪಕ್ ಹತ್ಯೆ ಮಾಡಿದ್ದಾನೆ.
ಕೆಲ ತಿಂಗಳುಗಳಿಂದ ಇಬ್ಬರು ಸ್ನೇಹಿತರು ಒಟ್ಟಿಗೆ ಪಬ್ ಜೀ ಆಡುತ್ತಿದ್ದರು.ಆಟದಲ್ಲಿ ಪ್ರತಿಬಾರಿ ಆಕೀಫ್ ಗೆಲ್ಲುತ್ತಿದ್ದ. ಆಟದಲ್ಲಿ ಮೋಸವಾಗುತ್ತಿದೆ ಅಂತ ಇಬ್ಬರ ನಡುವೆ ಗಲಾಟೆಯಾಗುತಿತ್ತು. ಶನಿವಾರ ರಾತ್ರಿ ಇಬ್ಬರು ಮೈದಾನದಲ್ಲಿ ಜೊತೆಯಾಗಿ ಆಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಆಟದಲ್ಲಿ ಮೊದಲ ಬಾರಿ ಸೋತಿದ್ದ ಆಕೀಫ್ ಮತ್ತು ದೀಪಕ್ ನಡುವೆ ಜಗಳ ಆರಂಭವಾಗಿದ್ದು, ಕಲ್ಲಿನಿಂದ ಹೊಡೆದಾಟದವರೆಗೆ ಮುಂದುವರಿಯಿತು. ಈ ವೇಳೆ ಸಿಟ್ಟಿಗೆದ್ದ ದೀಪಕ್ ದೊಡ್ಡ ಕಲ್ಲು ಎತ್ತಿ ಆಕೀಫ್ ಮೇಲೆ ಹಾಕಿದ್ದಾನೆ. ಇದರಿಂದ ಆಕೀಫ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೈದಾನದ ಬದಿಯಲ್ಲಿ ಶವವನ್ನು ಹಾಕಿ ದೀಪಕ್ ಪರಾರಿಯಾಗಿದ್ದ. ಬೆಳಗ್ಗೆ ಆಕೀಫ್ ಶವ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ ದೀಪಕ್ ತಪ್ಪೊಪ್ಪಿಕೊಂಡಿದ್ದಾನೆ.
ದೀಪಕ್ ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

