Saturday, February 8, 2025

ವಾರ್ಷಿಕ ಶಿಬಿರ

ಕಲ್ಲಡ್ಕ : ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಸ.ಹಿ.ಪ್ರಾ. ಶಾಲೆ ಕೊಡ್ಮಣ್ ಇಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಖ್ಯಾತ ವಕೀಲ ಹಾಗೂ ನಮ್ಮ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿ ಪುಳಿಂಚ ಶ್ರೀಧರ ಶೆಟ್ಟಿ ಇವರು ಮಾತನಾಡುತ್ತಾ ಕೇವಲ ಶ್ರಮದಾನವೊಂದೇ ಈ ಶಿಬಿರದ ಉದ್ಧೇಶವಲ್ಲ ಬದಲಾಗಿ ಸಾಮೂಹಿಕ ಸಹಜೀವನ ಮತ್ತು ಪ್ರತಿಭಾನ್ವೇಷಣೆಯೂ ಇದರೊಂದಿಗೆ ಕೂಡಿಕೊಂಡಿದೆ. ಅನೇಕರಿಗೆ ತಮ್ಮ ಒಳಗಿರುವ ನೈಜ ಪ್ರತಿಭೆಯನ್ನು ತೋರ್ಪಡಿಸಲು ಈ ಶಿಬಿರ ಅವಕಾಶ ನೀಡಲಿದೆ. ನಾನು ಕಲಿತ ವಿದ್ಯಾಸಂಸ್ಥೆಯ ಹಿರಿಯರ ಜೊತೆಗೆ ವೇದಿಕೆ ಹಂಚಿಕೊಂಡು ಅದೇ ವಿದ್ಯಾಸಂಸ್ಥೆಯ ಶಿಬಿರದ ಉದ್ಘಾಟನೆ ಮಾಡಲು ಅತೀವ ಸಂತಸ ಮತ್ತು ಗೌರವ ಎಂದೆನಿಸುತ್ತಿದೆ. ಪ್ರಸಿದ್ಧಿ ಹೆಸರು ಹಾಗೂ ಪ್ರಚಾರವೇ ಪ್ರಮುಖವಾಗಿರುವ ಈ ಕಾಲದಲ್ಲಿ ಅವೆಲ್ಲವನ್ನೂ ಬಯಸದೇ ಕೇವಲ ಧ್ಯೇಯವೊಂದೇ ಗುರಿಯಾಗಿರುವ ಈ ಸಂಸ್ಥೆಯ ಹಿರಿಯರನ್ನು ನಾನು ಶಿಕ್ಷಕನಾಗಿ ಪಡೆದುದು ನನ್ನ ಪಾಲಿನ ಪುಣ್ಯವೇ ಸರಿ ಎಂದರು.
ಆಶಯ ಭಾಷಣ ಮಾಡಿದ ಹೊಸದಿಗಂತ ಪತ್ರಿಕೆಯ ಕೀರ್ತಿರಾಜ್ ಇವರು ತಮ್ಮ ಜೀವನದ ಹತ್ತಾರು ಘಟನೆಗಳನ್ನು ಉಲ್ಲೇಖಿಸಿ ಎನ್.ಎಸ್.ಎಸ್. ಮಾಡಿರುವ ಪರಿವರ್ತನೆಯ ಕಾರ್ಯಗಳನ್ನು ತೆರೆದಿಟ್ಟರು. ಅಲ್ಲದೇ ತಮ್ಮದೇ ಶೈಲಿಯಲ್ಲಿ ಶಿಬಿರದಿಂದ ಕಲಿಯಬೇಕಾದ ಅನೇಕ ವಿಚಾರಗಳನ್ನು ಮಂಡಿಸಿದರು.
ವಿದ್ಯಾಸಂಸ್ಥೆಯ ಸಂಚಾಲಕ ವಸಂತ ಮಾಧವ ಅಧ್ಯಕ್ಷೀಯ ನುಡಿಗಳನ್ನಾಡಿ ಸೇವೆಯ ನಿಜವಾದ ಅರ್ಥ ಏನೆಂದು ಅರಿತಾಗಲೇ ಸರಿಯಾದ ದಿಕ್ಕಿಗೆ ನಾವು ಹೋಗಲು ಸಾಧ್ಯ ಇಲ್ಲವಾದಲ್ಲಿ ಕೇವಲ ವರದಿ ಭಾವಚಿತ್ರಗಳಿಗೆ ಈ ಕಾರ್ಯ ಮುಕ್ತಾಯವಾಗುತ್ತದೆ ಎಂದರು. ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ ನಾಯ್ಗ, ಸದಸ್ಯೆ ಜಯಶ್ರೀ ಕರ್ಕೆರ ಶುಭ ಹಾರೈಸಿದರು. ವಿದ್ಯಾಕೇಂದ್ರದ ಅಧ್ಯಕ ನಾರಾಯಣ ಸೋಮಯಾಜಿ ಶ್ರಮದಾನದ ಉದ್ಘಾಟನೆ ಮಾಡಿದರು. ಕೊಡ್ಮಣ್ ಕಾಂತಪ್ಪ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುರೇಶ್, ವಜ್ರನಾಭ ಶೆಟ್ಟಿ ಅರ್ಕುಳ ಬೀಡು, ಪ್ರಾಚಾರ್ಯ ಕೃಷ್ಣಪ್ರಸಾದ್ ಉಪಸ್ಥಿತರಿದ್ದ ಈ ಉದ್ಘಾಟನಾ ಸಮಾರಂಭದಲ್ಲಿ ಎನ್ ಎಸ್ ಎಸ್ ಸಂಯೋಜನಾಧಿಕಾರಿ ಹರೀಶ್ ಸ್ವಾಗತಿಸಿ, ಯತಿರಾಜ್ ವಂದಿಸಿ, ಲತಾಶ್ರೀ ನಿರೂಪಿಸಿದರು. ಶಿಬಿರದಲ್ಲಿ 52 ಶಿಬಿರಾರ್ಥಿಗಳಿದ್ದು 5 ಮಂದಿ ಉಪನ್ಯಾಸಕರು ಹಾಗೂ ಊರಿನ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

More from the blog

ಅನರ್ಹ ಮತದಾರರ ಮತವನ್ನು ಚುನಾವಣಾ ಫಲಿತಾಂಶದ ಮತ ಎಣಿಕೆಗೆ ಪರಿಗಣಿಸಬಾರದು: ಉಚ್ಚ ನ್ಯಾಯಾಲಯದ ತೀರ್ಪು

ಬಂಟ್ವಾಳ: ಮಡಂತ್ಯಾ‌ರ್ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಪಡೆದಿರುವ ವ್ಯಕ್ತಿಗಳ ಮತವನ್ನು ಚುನಾವಣಾ ಫಲಿತಾಂಶದ ಮತ ಎಣಿಕೆಯಲ್ಲಿ ಪರಿಗಣಿಸಬಾರದು ಎಂದು ಕರ್ನಾಟಕ ಉಚ್ಚ ನ್ಯಾಯಲಯವು ಐತಿಹಾಸಿಕ ತೀರ್ಪನ್ನು ಹೊರಡಿಸಿದೆ. ಮಡಂತ್ಯಾ‌ರ್ ಪ್ರಾಥಮಿಕ...

ಬಂಟ್ವಾಳ : ತಾಲೂಕು ಆಸ್ಪತ್ರೆಗೆ ವೈದ್ಯರನ್ನು ನೀಡಿ – ಸಚಿವ ದಿನೇಶ್ ಗುಂಡೂರಾವ್ ಗೆ ಮನವಿ

ಬಂಟ್ವಾಳ: ಸುಸಜ್ಜಿತವಾದ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆಯಾದರೂ ರೋಗಿಗಳಿಗೆ ಚಿಕಿತ್ಸೆ ನೀಡಲು ಸರಿಯಾದ ವಿಭಾಗದಲ್ಲಿ ವೈದ್ಯರುಗಳಿಲ್ಲದೆ, ತಾಲೂಕಿನ ಬಡ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸಲು ಸಾಮಾಜಿಕ ಕಾರ್ಯಕರ್ತ ಸಮಾದ್ ಕೈಕಂಬ ಅವರು...

ಕಣಿಯೂರು: ನುಡಿನಮನ, ಯಕ್ಷಗಾನ ತಾಳಮದ್ದಳೆ

ವಿಟ್ಲ: ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದ, ಉಪನ್ಯಾಸಕ ಪಕಳಕುಂಜ ಶ್ಯಾಮ್ ಭಟ್, ಕೂಡ್ಲು ಗಣಪತಿ ಭಟ್ ಅವರಿಗೆ ನುಡಿ ನಮನ ಹಾಗೂ ಯಕ್ಷಗಾನ ತಾಳಮದ್ದಳೆ...

ಒಡಿಯೂರಿನಲ್ಲಿ 25ನೇ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಒಡಿಯೂರು ರಥೋತ್ಸವ ತುಳುನಾಡ ಜಾತ್ರೆಯ ಅಂಗವಾಗಿ 25 ನೇ ವರ್ಷದ ತುಳು ಸಾಹಿತ್ಯ ಸಮ್ಮೇಳನ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ನಡೆಯಿತು. ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ...