Saturday, January 24, 2026

ರಾಷ್ಟ್ರೀಯ ಸೇವಾ ಯೋಜನೆಯ ಹಳೆ ವಿದ್ಯಾರ್ಥಿ ಗಳ ಸ್ವಯಂ ಸೇವಕರ ತಂಡದಿಂದ ವಾರ್ಷಿಕ ವಿಶೇಷ ಶಿಬಿರ

ಸ್ನೇಹ ಸಮ್ಮಿಲನ ತಂಡ ಮಂಗಳೂರು ಎನ್ನುವ ರಾಷ್ಟ್ರೀಯ ಸೇವಾ ಯೋಜನೆಯ ಹಳೆ ವಿದ್ಯಾರ್ಥಿ ಗಳ ಸ್ವಯಂ ಸೇವಕರ ತಂಡದಿಂದ ಎರಡು ದಿನದ ವಾರ್ಷಿಕ ವಿಶೇಷ ಶಿಬಿರ- 2024 ಬಂಟ್ವಾಳ ತಾಲೂಕಿನ ಕುದ್ರಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ಸ್ವಯಂಸೇವಕರಿಂದ ಶಾಲೆಗೆ ವಿಶೇಷ ತರಕಾರಿ ಕೈತೋಟವನ್ನು ರಚಿಸಿಕೊಡಲಾಯಿತು. ಹಾಗೂ ಮಕ್ಕಳಿಗೆ ಶುದ್ಧ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿ ಶಾಲೆಗೆ ಹಸ್ತಾಂತರಿಸಲಾಯಿತು

ಉದ್ಘಾಟನಾ ಕಾರ್ಯಕ್ರಮದ ಲ್ಲಿ ಸಮಾಜ ಸೇವೆಗಾಗಿ ಚಿಂತು ಸುಳ್ಯ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕುದ್ರೆಬೆಟ್ಟು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಿಠಲ, ಮಾಜಿ ಪಂಚಾಯತ್ ಸದಸ್ಯ ಸುಂದರ ಸಾಲಿಯಾನ್, ಮಣಿಕಂಠ ಭಜನಾ ಮಂದಿರದ ಅಧ್ಯಕ್ಷ ಲೋಕನಂದ ಏಳ್ತೀಮಾರ್, ಶಾಲಾ ಮುಖ್ಯ ಶಿಕ್ಷಕಿ ದೇವಿಕಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಾಜ್, ಅಂಗನವಾಡಿ ಶಿಕ್ಷಕಿ ಸುರೇಖ, ಏನೇಪೋಯ ಮಂಗಳೂರಿನ ಗಾರ್ಡನ್ ಪರಿವೀಕ್ಷಕರಾದ ಹಂಸ, ಮೊದಲಾದವರು ಉಪಸ್ಥಿತರಿದ್ದರು.

ಸಮೃದ್ಧ ಪ್ರಾರ್ಥಿಸಿ, ಪ್ರಥಮ್ ಸ್ವಾಗತಿಸಿ, ಸ್ನೇಹ ಸಮ್ಮೇಳನದ ಮುಖ್ಯಸ್ಥರಾದ ನಾಗರಾಜ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತವಿಕ ಮಾತನಾಡಿ, ನಿತಿನ್ ವಂದಿಸಿ, ಸುಶ್ಮಿತಾ ಕೆ ಕಾರ್ಯಕ್ರಮ ನಿರೂಪಿಸಿದರು.

More from the blog

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...

ಕಟೀಲು 7 ಮೇಳಗಳ ಜ.22ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.22ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.22ರ ಸೇವೆಯಾಟಗಳ ವಿವರ : ಅಪ್ಪಿ ಶೆಡ್ತಿ, ಕಲ್ಲಂಜೆ ಬಾಳಿಕೆ, ಸೂರಿಂಜೆ,...

ಶಿಕ್ಷಣ ಸಂಸ್ಥೆಗಳ ಪರಿಸರದ ಅಂಗಡಿಗಳ ತಪಾಸಣೆ ತೀವ್ರಗೊಳಿಸಲು ಜಿಲ್ಲಾಧಿಕಾರಿ ಸೂಚನೆ..

ಮಂಗಳೂರು : ಶಾಲಾ ಕಾಲೇಜುಗಳ ಸುತ್ತಮುತ್ತ ಕಾರ್ಯಾಚರಿಸುವ ಅಂಗಡಿಗಳಲ್ಲಿ ಮಾದಕ ವಸ್ತು ಮತ್ತು ಧೂಮಪಾನ ಮಾರಾಟದ ಬಗ್ಗೆ ನಿರಂತರ ತಪಾಸಣೆ ನಡೆಸುವಂತೆ ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚನೆ ನೀಡಿದ್ದಾರೆ. ನಾರ್ಕೋ ಕೋ ಆರ್ಡಿನೇಶನ್ ಸೆಂಟರ್‌ನ...

ಕಟೀಲು 7 ಮೇಳಗಳ ಜ.21ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.21ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.21ರ ಸೇವೆಯಾಟಗಳ ವಿವರ : ದಿ। ಶೇಖರ ಶೆಟ್ರ ಸ್ಮರಣಾರ್ಥ ರಾಜೀವಿ...