ಬಂಟ್ವಾಳ: ನೆರೆ ಇಳಿದ ಬಳಿಕ ನೇತ್ರಾವತಿ ಶಾಂತವಾಗಿ ಹರಿಯುತ್ತಿದ್ದರೆ , ಬಂಟ್ವಾಳ ದ ಸ್ಥಿತಿ ಹೇಗಿದೆ ಗೊತ್ತಾ…ರಸ್ತೆ ಯೆಲ್ಲಾ ಕೆಸರು ಕೆಸರು, ಮನೆಯೊಳಗೆ ಕೆಸರು, ಕಸದ ರಾಶಿ, ಬಾಟಲಿ ರಾಶಿ, ಹುಲ್ಲುಕಡ್ಡಿ ಹೀಗೆ ಯಾವುದು ಇಲ್ಲ ಯಾವುದು ಇದೆ ಅನ್ನುವುದೇ ಗೊತ್ತಾಗುತ್ತಿಲ್ಲ. ಮನೆಯೊಳಗೆ ತುಂಬಿರುವ ಕೊಳಕನ್ನು ಕ್ಲೀನ್ ಮಾಡುವುದೇ ದೊಡ್ಡ ಸಾಹಸದ ಕೆಲಸ.

ನೆಂಟರ ಮನೆಯಲ್ಲಿ, ಸ್ನೇಹಿತರ ಮನೆಯಲ್ಲಿ ಎರಡು ದಿನಗಳ ಕಾಲ ಕಳೆದ ನೆರೆಸಂತ್ರಸ್ತರು ವಾಪಾಸು ಮನೆಯ ಕಡೆ ಬಂದಿದ್ದಾರೆ.
ಮನೆಯೊಳಗೆ ಅಂಗಡಿಯೊಳಗೆ ಪೇಟೆಗೆ ಕಾಲಿಡುವ ಮುನ್ನ ಹಿಂದೆ ಮುಂದೆ ನೋಡಬೇಕಿದೆ.
ಬೆಳಿಗ್ಗೆ ಯಿಂದಲೇ ಅಂಗಡಿ ಮನೆಗಳನ್ನು ಶುಚಿ ಮಾಡುವ ಕೆಲಸ ಕಂಡುಬಂದರೆ, ರಸ್ತೆಯನ್ನು ಪುರಸಭಾ ಸಿಬ್ಬಂದಿ ಗಳು ಸ್ವಚ್ಚ ಮಾಡುತ್ತಿದ್ದರು.
ಇನ್ನೂ ಕೂಡ ಕರೆಂಟು ಬಂದಿಲ್ಲ, ಮನೆಯೊಳಗೆ ಒಲೆ ಹುರಿದಿಲ್ಲ, ಸಾಮಾಗ್ರಿಗಳನ್ನು ತಂದಿಲ್ಲ. ಅದರೂ ನೆರೆ ಇಳಿದಿರುವ ಬಗ್ಗೆ ಜನರಿಗೆ ತುಸು ನೆಮ್ಮದಿ.
ಅದರೂ ನೆರೆ ಬಂದು ಹೋದ ಬಳಿಕ ಇಲ್ಲಿ ಸಾಂಕ್ರಾಮಿಕ ರೋಗ ಬರುವ ಸಾಧ್ಯತೆ ಗಳು ಹೆಚ್ಚಿವೆ, ಹಾಗಾಗಿ ಸ್ವಚ್ಛತೆಗೆ ಹೆಚ್ಚಿನ ಅಧ್ಯತೆಯ ನೆಲೆಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಸೂಚನೆ ನೀಡಿದ್ದಾರೆ.