ಬಂಟ್ವಾಳ: ಮಡಿಕೇರಿ ತಾಲೂಕಿನ ಮದೆ ಜೋಡುಪಾಲು 2ನೇ ಮೊಣ್ಣoಗಿರಿಯಲ್ಲಿ ತನ್ನ ಪತ್ನಿ ಕರ್ತ್ಯಾಯಿನಿ, 3 ಹೆಣ್ಣು ಮತ್ತು ಒಂದು ಗಂಡು ಮಕ್ಕಳ ಜೊತೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸುಂದರ ತಿಯನ್ ರವರು. ಮೊದಲ ಇಬ್ಬರು ಮಕ್ಕಳು ಅವಳಿ ಜವಳಿ, ರಮ್ಯಾ ಮತ್ತು ರಮ. ನಂತರದ ಕಾವ್ಯ ಮತ್ತು ಸುಕೇಶ್. ರಮ್ಯಾರವರಿಗೆ ಕಳೆದ 2 ವರುಷಗಳ ಹಿಂದೆ ಮದುವೆಯಾಗಿದ್ದು, ಕಾವ್ಯ ಇವಾಗ 10ನೇ ತರಗತಿ ಮತ್ತು ಸುಕೇಶ್ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ. ರಮರವರಿಗೆ ಕಳೆದ ಒಂದೂವರೆ ವರುಷಗಳ ಹಿಂದೆ ಮದುವೆ ಮಾಡಲು ನಿಶ್ಚಯ ಕೂಡ ಆಗಿದ್ದು, ಮಗಳ ಮದುವೆ ಸಂಭ್ರಮಕ್ಕೆ ಕಾಯುತ್ತಿದ್ದ ಸಮಯದಲ್ಲಿ ಯಾರು ಊಹಿಸದ ಮಳೆರಾಯನ ಪ್ರವಾಹವೇ ಕೊಡಗನ್ನು ಬೆಚ್ಚಿ ಬಿಳಿಸಿತ್ತು. ಹಲವು ಕುಟುಂಬಗಳು ತಮ್ಮ ಮನೆ ಮಠಗಳನ್ನು ಕಳೆದುಕೊಂಡರು ಅದರಲ್ಲಿ ಸುಂದರ್ ರವರ ಕುಟುಂಬವು ಒಂದು. ಪ್ರವಾಹದ ಸಮಯದಲ್ಲಿ 1 ತಿಂಗಳು ಸಂಪಾಜೆಯಲ್ಲಿ ಗಂಜಿ ಕೇಂದ್ರದಲ್ಲಿ ಇದ್ದು ತದ ನಂತರ ಸುಳ್ಯ ಆರಂತೋಡುನಲ್ಲಿ ಬಾಡಿಗೆ ಮನೆಯಲ್ಲಿ ಇದ್ದು ಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದರೆ. ಪ್ರವಾಹದ ಹಾನಿ ನಷ್ಟಕ್ಕೆ ಸರಕಾರ ಅಲ್ಪ ಮಟ್ಟಿನ ಪರಿಹಾರ ನೀಡಿದರೂ ಅದರಿಂದಲೇ ಜೀವನ ಸಾಗಿಸಲು ಕಷ್ಟ. ಅಂತೂ ಮದುವೆ ನಿಶ್ಚಿಯವಾಗಿ ಆಗಲೇ ಒಂದೂವರೆ ವರುಷ ಆಯಿತು. ದೇವರು ಇದ್ದರೆ ಅಂತ ಮಗಳ ಮದುವೆಯನ್ನು ಆರಂತೋಡು ತಿಕ್ಕಿಲ್ ಸಭಾ ಭವನದಲ್ಲಿ ಇಂದು ಮಾಡುವುದೆಂದು ನಿರ್ಧರಿಸಿದ್ದರು. ಹಿರಿಮಗಳಿಗೆ ಮದುವೆ ಮಾಡಿ ಇನ್ನೆನೂ ಸಾಲ ಮಾಡಿಯಾದರೂ ಎರಡನೆಯ ಮಗಳ ಮದುವೆ ಮಾಡಬೇಕು ಅಂತ ಸಿದ್ದತೆಯ ಚಿಂತೆಯಲ್ಲಿ ಇರುವಾಗ ಪ್ರಕೃತಿ ವಿಕೋಪಕ್ಕೆ ಕನಸು ಕನಸಾಗಿಯೇ ಉಳಿಯಿತು. ಗಾಯದ ಮೇಲೆ ಬರೆ ಎಳೆದಂತೆ ಒಂದು ಕಡೆ ಮಗಳ ಮದುವೆಯ ಚಿಂತೆ ಇನ್ನೊಂದು ಕಡೆ ಮೊದಲ ಮಗಳ ಮದುವೆಗೆ ಮಾಡಿದ ಸಾಲದ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಸುಂದರ ತಿಯನ್ ರವರ ಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಮದುವೆಯ ಶುಭ ಘಳಿಗೆಯಲ್ಲಿ ರೂ. 15,000 ಚೆಕ್ ಅನ್ನು ಮದು ಮಗಳು ರಮರವರಿಗೆ ಹಸ್ತಾಂತರಿಸಲಾಯಿತು.



ಈ ಸಂದರ್ಭದಲ್ಲಿ ಸಂಸ್ಥೆಯ ಸೇವಾ ಕಾರ್ಯಕರ್ತರು ಉಪಸ್ಥಿತರಿದ್ದರು.