Monday, February 10, 2025

ಸರ್ವೀಸ್ ರಸ್ತೆಯಲ್ಲಿ ಕ್ರತಕ ನೆರೆ

ಬಂಟ್ವಾಳ: ಬಿಸಿರೋಡ್ ಸರ್ವೀಸ್ ರಸ್ತೆಯಲ್ಲಿ ಕುಡಿಯುವ ನೀರಿ ಪೈಪ್ ಹೊಡೆದು ಹೋದ ಪರಿಣಾಮ ಕ್ರತಕ ನೆರೆ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿ ಸಾರ್ವಜನಿಕ ರು ಪುರಸಭೆಗೆ ಹಿಡಿಶಾಪ ಹಾಕಿದ್ದಾರೆ.

ಸರ್ವೀಸ್ ರಸ್ತೆಯಲ್ಲಿ ಕಳೆದ ವಾರ ಕುಡಿಯವ ನೀರಿನ ಪೈಪ್ ಲೈನ್ ಕೆಲಸ ವನ್ನು ಪುರಸಭೆ ಯವರು ಕೈಗೊಂಡಿದ್ದರು.


ಅ ಬಳಿಕ ಕಳಪೆ ಕಾಮಗಾರಿಯ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ವೇಳೆ ಕುಡಿಯುವ ನೀರಿನ ಪೈಪ್ ಹೊಡೆದುಹೋಗಿ ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿತ್ತು.
ಒಂದು ಕಡೆಯಿಂದ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಹಲವು ಕಡೆಗಳಲ್ಲಿ ಕುಡಿಯುವ ನೀರಿಗೆ ತೊಂದರೆ.
ಇನ್ನೊಂದು ಕಡೆಯಿಂದ ಪೋಲಾಗುತ್ತಿರುವ ನೀರು ಇದೆಲ್ಲವೂ ಅಧಿಕಾರಿಗಳ ಆಡಳಿತ ಯಂತ್ರದಲ್ಲಿನ‌ ಬಿಕ್ಕಟ್ಟುಗಳು ಎನ್ನಲಾಗುತ್ತದೆ.

ಪೈಪ್ ಲೈನ್ ಹೊಡೆದುಹೋಗಿ ನೀರು ಪೋಲಾಗುತ್ತಿದೆ, ಕೂಡಲೇ ಗೇಟ್ ವಾಲ್ ಬಂದ್ ಮಾಡುವಂತೆ ಮಾಜಿ ಪುರಸಭಾ ಸದಸ್ಯೆ ಯಶೋದ ಅವರು ಪುರಸಭೆಯ ಅಧಿಕಾಗಳಿಗೆ ಮೌಖಿಕವಾಗಿ ತಿಳಿಸಿದರು ಕೂಡಾ ಪುರಸಭೆಯ ಅಧಿಕಾರಿಗಳು ತಾಸುಗಟ್ಟಲೆ ಸ್ಥಳಕ್ಕೆ ಬರಲೇ ಇಲ್ಲ. ಮತ್ತೆ ಕೂಡಾ ನೀರು ಪೋಲಾಗುತ್ತಲೆ ಇತ್ತು.

ಸರ್ವೀಸ್ ರಸ್ತೆಯಲ್ಲಿರುವ ಅಂಗಡಿಗಳಿಗೂ ನೀರು ನುಗ್ಗಿದೆ.

More from the blog

ಬೆಳ್ತಂಗಡಿ : ಗ್ರಾಮ ಆಡಳಿತಾಧಿಕಾರಿಗಳಿಂದ 2 ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ

ಬೆಳ್ತಂಗಡಿ : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಮೇರೆಗೆ ಫೆ. 10 ರಿಂದ ಬೆಳ್ತಂಗಡಿಯಲ್ಲಿ...

ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ನಡೆಯಿತು ಪೂರ್ವಭಾವಿ ಸಭೆ

ಬಂಟ್ವಾಳ:  ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿ ಇಲ್ಲಿ ನಡೆಯುವ ಶತಚಂಡಿಕಯಾಗದ ಹಾಗೂ ಕುಪ್ಪೆಟ್ಟು ಬರ್ಕೆ ಕರ್ಪೆ ಪ್ರತಿಷ್ಠಾ ಮಹೋತ್ಸವದ ಬಗ್ಗೆ ಪೂರ್ವಭಾವಿ ಸಭೆಯು ಕಡೆಗುಂಡ್ಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್...

ಯುವ ಸಂಗೀತೋತ್ಸವಕ್ಕೆ ಚಾಲನೆ

ಮಂಗಳೂರು: ಸಾಮಾಜಿಕ ಸ್ವಾಸ್ಥ್ಯ ಕ್ಕಾಗಿ ಮಾನಸಿಕ ನೆಮ್ಮದಿ ನೀಡುವಂತಹ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯವಿದೆ ಎಂದು ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಅವರು ಮಂಗಳೂರಿನ ಕಲಾ ಸಾಧನ ಸಂಸ್ಥೆ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್...

ದೆಹಲಿಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ…. ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ*

  ದೆಹಲಿ ವಿಧಾನ ಸಭೆಗೆ ನಡೆದ ಚುನಾವಣೆ ಯಲ್ಲಿ ಭಾರತೀಯ ಜನತಾ ಪಕ್ಷ 70 ಸ್ಥಾನ ಗಳಲ್ಲಿ ಬರೋಬ್ಬರಿ 48 ಸ್ಥಾನ ಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯಭೇರಿ ಗಳಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ...