Tuesday, February 11, 2025

ಪುರಸಭೆಯ ಕುಡಿಯುವ ನೀರಿನ ಪೈಪ್ ಹೊಡೆದು ದಿನದ 24 ಗಂಟೆ ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ಮೌನ !

ಬಂಟ್ವಾಳ: ಜಿಲ್ಲೆಯ ಬಹುತೇಕ ಎಲ್ಲಾ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಇತಿ ಮಿತಿಯಿಲ್ಲಿ ನೀರು ಬಳಕೆ ಮಾಡುವಂತೆ ಜಿಲ್ಲಾಡಳಿತ ಆದೇಶ ಮಾಡಿದೆ.


ಸುಡುವ ಬಿಸಿಲಿಗೆ ನೀರು ಆವಿಯಾಗುತ್ತಿದ್ದು ತುಂಬೆ ವೆಂಟೆಡ್ ಡ್ಯಾಂ ನಲ್ಲಿ ದಿನಂಪ್ರತಿ ಸೆ.ಮೀ.ಲೆಕ್ಕಾಚಾರ ದಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ.
ಹಾಗಾಗಿ ಮಂಗಳೂರು ಮಹಾಜನತೆಗೆ ರೇಶನಿಂಗ್ ಮಾದರಿಯಲ್ಲಿ ನೀರು ನೀಡುಲು ಮಂಗಳೂರು ಮಹಾನಗರ ಪಾಲಿಕೆ ಸಿದ್ದವಾಗಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅನೇಕ ಕಡೆಗಳಲ್ಲಿ ನೀರಿನ‌ ಅಭಾವ ಉಂಟಾಗಿದ್ದು ನೀರು ನೀಡಲು ಪುರಸಭೆ ಶಕ್ತವಾಗಿಲ್ಲ ಎಂದು ಸಾರ್ವಜನಿಕ ರ ಆರೋಪವಾಗಿದೆ.
ಒಂದು ಹನಿ ಕುಡಿಯುವ ನೀರಿಗೂ ಹಾಹಾಕಾರ ಪಡುವ ಈ ಮೇ ತಿಂಗಳಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ನೀರು ನಿರಂತರವಾಗಿ 24 ಗಂಟೆಗಳ ಕಾಲ ಪೋಲಾಗುತ್ತಿರುವುದು ಸಾರ್ವಜನಿಕರ ಆಕ್ರೋಶ ಕ್ಕೆ ಗುರಿಯಾಗಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೂಗಳೆತೆಯ ದೂರದಲ್ಲಿ ಬಂಟ್ವಾಳ ಪೇಟೆಯಲ್ಲಿ ಅನೇಕ ತಿಂಗಳಿನಿಂದ ರಸ್ತೆಯಲ್ಲಿ ಪೈಪ್ ಹೊಡೆದು ಹೋಗಿ ನಿರಂತರವಾಗಿ 24 ಗಂಟೆಯೂ ನೀರು ಹೋಗುತ್ತಿದೆ . ಈ ರಸ್ತೆಯಲ್ಲಿ ದಿನಕ್ಕೆ ನಾಲ್ಕಾರು ಬಾರಿ ಪುರಸಭಾ ಇಂಜಿನಿಯರ್ ಸಹಿತ ಅಧಿಕಾರಿಗಳು ಅತ್ತಿಂದಿತ್ತ ಹೋದರೂ ಇದರ ಬಗ್ಗೆ ಗಮನ ಹರಿಸಿಲ್ಲ ಎಂಬುದು ಸ್ಥಳೀಯ ಆಂಗಡಿ ಮಾಲಕರ ದೂರು.
ಇದಲ್ಲದೆ ಬಂಟ್ವಾಳ ಬೈಪಾಸ್, ಬಂಟ್ವಾಳ ದ ಜಕ್ರಿಬೆಟ್ಟು ಹೀಗೆ ಅನೇಕ ಕಡೆಗಳಲ್ಲಿ ಪುರಸಭೆಯ ಕುಡಿಯುವ ನೀರಿನ ಪೈಪ್ ಹೊಡೆದು ಹೋಗಿ ನಿರಂತರವಾಗಿ ಕಳೆದ ಕೆಲವು ತಿಂಗಳಿನಿಂದ ನೀರು ಪೋಲಾಗುತ್ತಿದೆ.
ಈಬಗ್ಗೆ ಸ್ಥಳೀಯ ರು ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಇವರ ದೂರು.
ಕುಡಿಯುವ ನೀರು ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸುವ ಇಂತಹ ಸಂದಿಗ್ಧತೆಯ ಪರಿಸ್ಥಿತಿಯಲ್ಲಿ ಹೊಡೆದು ಹೋಗಿರುವ ಪೈಪ್ ಗಳ ಜೋಡಣೆ ಕೆಲಸ ಯಾಕೆ ಪುರಸಭೆ ಮಾಡುತ್ತಿಲ್ಲ ಎಂದು ಸಾರ್ವಜನಿಕ ರ ಪ್ರಶ್ನೆ ಯಾಗಿದೆ.
ಪೈಪ್ ಹೊಡೆದು ಹೋದ ಪರಿಣಾಮದಿಂದಾಗಿ
ಅನೇಕ ಕಡೆಗಳಲ್ಲಿ ಎತ್ತರ ಪ್ರದೇಶ ಗಳ ಮನೆಗೆ ನೀರಿನ ಪ್ರೆಶರ್ ಕಡಿಮೆಯಾಗಿ ಹೋಗುವುದಿಲ್ಲ ಎಂದು ಮನೆಯವರು ದೂರಿದ್ದಾರೆ.
ನೀರಿನ ಬಳಕೆ ಇತಿಮಿತಿಯಲ್ಲಿ ಮಾಡಿ , ಅತಿಯಾದ ದುರ್ಬಳಕೆ ಮಾಡಬೇಡಿ ಹೀಗೆ ನೀರಿನ ಬಗ್ಗೆ ಪಾಠ ಮಾಡುವ ಇಲಾಖೆಯ ಅಧಿಕಾರಿಗಳಿಗೆ ಕಳೆದ ಕೆಲವು ತಿಂಗಳಿನಿಂದ 24 ಗಂಟೆಯೂ ನೀರು ಹರಿದು ರಸ್ತೆಯಲ್ಲಿ ಚೆಲ್ಲಿ ಹೋಗುವುದು ಕಾಣಲಿಲ್ಲ ವೇ ಎಂದು ಇಲ್ಲಿನ ಜನರು ಪ್ರಶ್ನಿಸಿದ್ದಾರೆ.‌
ಪಂಪ್ ಹೌಸ್ ನಲ್ಲೂ ನೀರು ಪೋಲಾಗಿ ಚರಂಡಿ ಸೇರಿ ಯಾವುದೇ ಪ್ರಯೋಜನ ವಿಲ್ಲದೆ ಚೆಲ್ಲಿ ಹೋಗುತ್ತಿದೆ.
ಜಕ್ರಿಬೆಟ್ಟು ವಿನಲ್ಲಿ ರುವ ಕುಡಿಯುವ ನೀರಿನ ಪಂಪ್ ಹೌಸ್ ನಲ್ಲಿ ಟ್ಯಾಂಕ್ ನಿಂದ ನಿರಂತರವಾಗಿ 24 ಗಂಟೆ ನೀರು ಹೊರಗೆ ಹೋಗುತ್ತಿದೆ.
ಶುದ್ದಿಕರಣಗೊಂಡ ನೀರು ಟ್ಯಾಂಕ್ ನಿಂದ ಹೆಚ್ಚುವರಿ ಯಾಗಿ ಹೊರಕ್ಕೆ ಹೊಗುವಂತದ್ದು.‌ ಈ ನೀರನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ದಿನದ 24 ಗಂಟೆಯೂ ಚೆಲ್ಲಿ ಹೋಗುವ ನೀರನ್ನು ನೂತನ ತಂತ್ರಜ್ಞಾನ ಬಳಸಿ ಕುಡಿಯಲು ಬಳಕೆ ಮಾಡಬಹುಬಹುದಿತ್ತು.
ಇಲ್ಲಿನ ಪುರಸಭಾ ಅಧಿಕಾರಿಗಳಿಗೆ ಜನರ ಹಿತ ಮುಖ್ಯವಲ್ಲ ಎಂಬುದಕ್ಕೆ ಇದೇ ಸಾಕ್ಷಿ ಯಾಗಿದೆ.‌

ಇದು ಪೈಪ್ ಹೊಡೆದು ಹೋಗಿ ನೀರು ಪೋಲಾದರೆ ಇನ್ನು ಪುರಸಭೆಯ ನೀರನ್ನು ಕೃಷಿ ಗೆ ಬಳಸುವರು ಕೂಡಾ ಇದ್ದಾರೆ ಎಂದು ದೂರಲಾಗುತ್ತಿದೆ.

ಅಂತೂ ನೀರಿನ ಅಭಾವದಿಂದ ಕಂಗೆಟ್ಟಿರುವ ಎಷ್ಟೋ ಮನೆಗಳಿಗೆ ಪುರಸಭೆಯ ಪೈಪ್ ಲೈನ್ ಮೂಲಕ ಅನಾವಶ್ಯಕ ವಾಗಿ ಚೆಲ್ಲಿ ಹೋಗುವ ನೀರನ್ನು ನೀಡಬಹುದು ಎಂಬುದು ಕೆಲವರ ವಾದ.

More from the blog

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...

ಸರಕಾರಿಯೋ, ತಾ.ಪಂ.ಗೆ ಸೇರಿದ ಜಾಗವೋ? ಇದೊಂದು ಬೇಲಿಯ ಕಥೆ!

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಗಳ ಮೂಲಕ ಬೇಲಿ ಹಾಕಿದ್ದು, ಇದಿಗ ಈ ಜಾಗವು ಸರಕಾರಿ ಯೋ, ಅಥವಾ ತಾಲೂಕು ಪಂಚಾಯತ್ ಗೆ ಸೇರಿದ್ದೊ ಎಂಬ ಚರ್ಚೆಗೆ...

ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ್ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿ ಸದಸ್ಯರಾಗಿ...