Sunday, July 13, 2025

ನವರಾತ್ರಿಯ ಪೂಜೆಗೆ ಹೂವಿನ ರಾಶಿ. ರಿಕ್ಷಾ ತುಂಬಾ ಹೂವಿನ ಅಲಂಕಾರ ಮಾಡಿ ಗ್ರಾಹಕರ ಸೆಳೆಯುವ ವ್ಯಾಪಾರಿ. ಕುಶಾಲನಗರದಿಂದ ಬಂಟ್ವಾಳಕ್ಕೆ ಹೂ ವ್ಯಾಪಾರಕ್ಕೆ ಬಂದ ಅಭಿಷೇಕ್

ನವರಾತ್ರಿ ಹಬ್ಬ ಎಂದರೆ ಒಂಬತ್ತು ದಿನಗಳಲ್ಲಿ ದೇವಿಯ ವಿಶೇಷ ಪೂಜೆ ಊರಿನಲ್ಲಿ ನಡೆಯುತ್ತದೆ. ನವರಾತ್ರಿಯ ಸಮಯದಲ್ಲಿ ದೇವರಿಗೆ ವಿಶೇಷ ವಿಭಿನ್ನ ರೀತಿಯ ಹೂವಿನ ಅಲಂಕಾರ ಮಾಡುವ ಪದ್ದತಿ ನಡೆದುಕೊಂಡು ಬಂದಿದೆ.
ಹಾಗಾಗಿ ಹೂವಿನ ವ್ಯಾಪಾರ ವೂ ಬಲು ಜೋರಾಗಿ ನಡೆಯುತ್ತದೆ. ದ.ಕ.ಜಿಲ್ಲೆಗೆ ಊರ ಪರ ಊರಿನ ಅದೆಷ್ಟೋ ಹೂವಿನ ವ್ಯಾಪಾರಿಗಳು ಸೀಸನ್ ವೈಸ್ ಬರುವುದು ವಾಡಿಕೆಯಾಗಿ ಬಿಟ್ಟಿದೆ.

ಈ ಬಾರಿ ಯ ನವರಾತ್ರಿ ಹಬ್ಬಕ್ಕೆ ಕುಶಾಲನಗರ ಅಭಿಷೇಕ್ ಎನ್ನುವ ರಿಕ್ಷಾ ಚಾಲಕರು ಬಿಸಿರೋಡಿಗೆ ಹೂವು ವ್ಯಾಪಾರಕ್ಕೆಂದು ಬಂದಿದ್ದಾರೆ.

ಇಲ್ಲೇನು ವಿಶೇಷ ಅಂದರೆ ಇವರು ರಿಕ್ಷಾ ಚಾಲಕರಾಗಿದ್ದು ಸ್ವಂತ ರಿಕ್ಷಾ ಇದೆ.
ಇದೇ ರಿಕ್ಷಾದಲ್ಲಿ ಅಲಂಕಾರದ ರೀತಿಯಲ್ಲಿ ಹೂವನ್ನು ಹಾಕಿಕೊಂಡು ವ್ಯಾಪಾರ ಮಾಡಲು ಬಿಸಿರೋಡಿಗೆ ಬಂದಿದ್ದಾರೆ. ಕಳೆದ ಐದು ವರ್ಷಗಳಿಂದ ವ್ಯಾಪಾರ ತೊಡಗಿರುವ ಇವರು ಇಂತಹ ಹಬ್ಬ ದ ಸಮಯದಲ್ಲಿ ಮಾತ್ರ ಊರಿ ನಿಂದ ಊರಿಗೆ ರಿಕ್ಷಾದಲ್ಲೆ ಪ್ರಯಾಣ ಬೆಳೆಸಿ ವ್ಯಾಪಾರ ಮಾಡುತ್ತಾರೆ. ರೈತನ ಕೈಯಿಂದ ನೇರವಾಗಿ ಅತೀ ಕಡಿಮೆ ದರದಲ್ಲಿ ಗುಣಮಟ್ಟದ ಹೂ ಗ್ರಾಹಕನ ಕೈ ಸೇರಬೇಕು ಎಂಬುದು ಇವರ ಉದ್ದೇಶವಾಗಿದೆ ಎನ್ನುತ್ತಾರೆ.
ಇವರ ರಿಕ್ಷಾ ಸಂಪೂರ್ಣ ಹೂವಿನಿಂದ ಅಲಂಕೃತವಾಗಿದ್ದು ಚಾಲನೆ ಮಾಡಲು ಬೇಕಾದಷ್ಟು ಮಾತ್ರ ಹೂವಿನ ಕುಂಡಗಳನ್ನು ಬದಿಗೆ ಸರಿಸಿ ಚಾಲನೆ ಮಾಡುತ್ತಾರೆ ಎನ್ನುತ್ತಾರೆ ಅಭಿಷೇಕ್.

More from the blog

‘ಭೂಮಿಯಲ್ಲಿ ಜೀವನ’ ಗದ್ದೆಯಲ್ಲಿ ನೇಜಿ‌ ನೆಡುವ ವಿಶೇಷ ಕಾರ್ಯಕ್ರಮ..

ಬಂಟ್ವಾಳ :  ಸಹ್ಯಾದ್ರಿ ಕಾಲೇಜು ಮಂಗಳೂರು ಇಲ್ಲಿನ ಎಂ.ಬಿ.ಎ.ವಿದ್ಯಾರ್ಥಿಗಳ ಕಾರ್ಪೋರೆಟ್ ಸಾಮಾಜಿಕ ಜವಬ್ದಾರಿ ಕ್ಲಬ್ ಆಯೋಜಿಸಿದ "ಭೂಮಿಯಲ್ಲಿ ಜೀವನ" ಗದ್ದೆಯಲ್ಲಿ ನೇಜಿ‌ ನೆಡುವ ವಿಶೇಷ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ನಾವೂರದ ಸಾಮಾಜಿಕ ನೇತಾರ...

ತುಂಬೆಯ ಕಾವ್ಯ ಕೆ. ನಾಯಕ್ ಗೆ ಪಿ.ಎಚ್.ಡಿ ಪದವಿ..

ಬಂಟ್ವಾಳ: ತುಂಬೆಯ ಕಾವ್ಯ. ಕೆ. ನಾಯಕ್ ಇವರು ಐಐಎಸ್‌ಸಿ‌ನ ಅಂತರ್‌ಶಿಸ್ತಿನ ವಿಜ್ಞಾನ ವಿಭಾಗದ ಡೀನ್ ಹಾಗೂ ನ್ಯಾನೋ ಸೈನ್ಸ್ ಮತ್ತು ಇಂಜಿನಿಯರಿಂಗ್ ಕೇಂದ್ರದ ಪ್ರಾಧ್ಯಾಪಕ ಪ್ರೊ. ನವಕಾಂತ್ ಭಟ್ ಅವರ ಮಾರ್ಗದರ್ಶನದಲ್ಲಿ “ಎಲೆಕ್ಟ್ರೋಕೆಮಿಕಲ್...

ಫರಂಗಿಪೇಟೆ: ಸಂಕಲ್ಪ ಸಿದ್ಧಿಗಾಗಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಭೇಟಿ..

ಬಂಟ್ವಾಳ : ಸಂಕಲ್ಪ ಸಿದ್ಧಿಗಾಗಿ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಯವರು ಜು.12ರಂದು ಫರಂಗಿಪೇಟೆಯ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯಿಂದ...

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...