ವಿಟ್ಲ: ಕೇಪು ಮೈರ ಶ್ರೀ ದುರ್ಗಾ ಮಿತ್ರ ವೃಂದದ ಅಂಗ ಸಂಸ್ಥೆಯಾದ ಶ್ರೀ ದುರ್ಗಾ ಕಲಾ ತಂಡದ ಪುಗರ್ತೆ ಕಲಾವಿದರು ಮೈರ ಕೇಪು ಈ ತಂಡದ 9 ನೇ ಕಲಾಕಾಣಿಕೆ ನಿತಿನ್ ಹೊಸಂಗಡಿ ರಚಿಸಿ ರಾಜಶೇಖರ್ ಶೆಟ್ಟಿ ಕುಡ್ತಮುಗೇರ್ ನಿರ್ದೇಶನ ಮಾಡಲಿರುವ ನಾಟಕ ಅರ್ಥ ಆಪುಜಿ (ಏರ್…?ಎಂಚ…..?) ನಾಟಕದ ಮುಹೂರ್ತ ಕೇಪು ಶ್ರೀ ಸುಬ್ರಾಯ ದೇವರ ಸನ್ನಿಧಿಯಲ್ಲಿ ನಡೆಯಿತು. ಶ್ರೀ ಕ್ಷೇತ್ರ ಕುಕ್ಕಾಜೆಯ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ ಶುಭ ಹಾರೈಸಿದರು. ಲಕ್ಷ್ಮಣ್ ಭಟ್ ಪೌರೋಹಿತ್ಯದಲ್ಲಿ ಪೂಜೆ ನಡೆಯಿತು.
ಶ್ರೀ ದುರ್ಗಾ ಮಿತ್ರ ವೃಂದ ಅಧ್ಯಕ್ಷರಾದ ಅಶೋಕ್ ಎ. ಇರಾಮೂಲೆ, ಗೌರವಾಧ್ಯಕ್ಷರಾದ ಜಗಜ್ಜೀವನ್ ರಾಮ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶೀನ ನಾಯ್ಕ ಕಲ್ಲಾಪು, ಕೋಶಾಧಿಕಾರಿ ಪುರುಷೋತ್ತಮ ಮೈರ(ಪುತ್ತೂರು), ಶಿಸ್ತು ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ, ನಾಟಕ ತಂಡದ ಅಧ್ಯಕ್ಷ ಪದ್ಮನಾಭ ಕಲ್ಲಂಗಳ,ಸಂಚಾಲಕರಾದ ರಾಜೇಶ್ ಪುಚ್ಚೆಗುತ್ತು, ವ್ಯವಸ್ಥಾಪಕರಾದ ಶ್ರೇಯಸ್ ಪಾಟಾಳಿ ಕೇಪು, ನಾಟಕ ತಂಡದ ಕಲಾವಿದರು ಕಲಾಭಿಮಾನಿಗಳು ಉಪಸ್ಥಿತರಿದ್ದರು.
