ಪುಂಜಾಲಕಟ್ಟೆ: ಬೆಳ್ತಂಗಡಿ ತಾ.ನ ಸೋಣಂದೂರು ಗ್ರಾಮದ ಕಲ್ಲಟ ಎಂಬಲ್ಲಿರುವ ತಂಗಿ ಮನೆಯಿಂದ ಕ್ಷೌರ ಮಾಡಲೆಂದು ಹೋದಾತ ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಿಲಾತಬೆಟ್ಟು ಗ್ರಾಮದ ನಾಕುನಾಡು ಮನೆಯ ನಿವಾಸಿಅಣ್ಣುಪೂಜಾರಿಯವರ ಮಗ ತಿಮ್ಮಪ್ಪ (36) ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಇವರ ತಮ್ಮ ಕೇಶವ ಪೂಜಾರಿಯವರು ನೀಡೊರುವ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.


