ಬಂಟ್ವಾಳ: ಗುರುವಿನ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದ ನೂತನ ರಾಜ್ಯಾಧ್ಯಕ್ಷ.
ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಇಂದು ಸಂಜೆ ಸುಮಾರು 8.30. ರ ವೇಳೆ ಹೈಕಮಾಂಡ್ ಕಲ್ಲಡ್ಕ ಡಾ! ಕಲ್ಲಡ್ಕ ಪ್ರಭಾಕರ್ ಭಟ್ ಅವರ ಕಾಲಿಗೆ ಅಡ್ಡಬಿದ್ದು ನಮಸ್ಕಾರ ಮಾಡಿ ಆಶೀರ್ವಾದ ಪಡೆದಿದ್ದಾರೆ.






ಪ್ರಥಮ ಬಾರಿಗೆ ಸಂಸದರಾಗಿ ರಾಜಕೀಯ ಪ್ರವೇಶಕ್ಕೆ ಕಾರಣೀಕರ್ತರಾಗಿರುವ ಡಾ! ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ನಳಿನ್ ಕುಮಾರ್ ಕಟೀಲು ಅವರು ಕಲ್ಲಡ್ಕ ಶ್ರೀ ರಾಮ ಸ್ಕೂಲ್ ನಲ್ಲಿ ಬೇಟಿ ಮಾಡಿದ ಆಶೀರ್ವಾದ ಪಡೆದ ಬಳಿಕ ಕೆಲಹೊತ್ತು ಗೌಪ್ಯವಾಗಿ ಕುಶಲೋಪರಿ ನಡೆಸಿದರು.
ರಾಜ್ಯಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಕಲ್ಲಡ್ಕ ಭಟ್ ಅವರನ್ನು ಬೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಕಲ್ಲಡ್ಕ ಕಮಲಾಪ್ರಭಾಕರ ಭಟ್ , ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಸಂತ ಮಾದವ, ಚೆನ್ನಪ್ಪಕೊಟ್ಯಾನ್ ಅಣ್ಣಿಪೂಜಾರಿ ಮತ್ತು ಕಾರ್ಯಕರ್ತರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

