Thursday, February 13, 2025

ಕ್ರೀಡೆಯಿಂದ ಯುವಸಂಘಟನೆ ಸಾಧ್ಯ ವಿಜಿಸಿ ಕ್ರೀಡೋತ್ಸವದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅಭಿಪ್ರಾಯ

ಮಂಗಳೂರು: ಕ್ರೀಡೆಯಿಂದ ಮಾತ್ರ ಯುವಜನರನ್ನು ಸೆಳೆಯಲು ಸಾಧ್ಯ. ಯುವಪೀಳಿಗೆಯನ್ನು ಒಗ್ಗೂಡಿಸಿ, ಅವರಲ್ಲಿ ಸೇವಾ ಮನೋಭಾವವನ್ನು ಮೂಡಿಸುತ್ತಿರುವ ವಿಶ್ವ ಗಾಣಿಗರ ಚಾವಡಿ (ರಿ.) ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಶಾಸಕ ವೇದವ್ಯಾಸ್ ಕಾಮತ್ ನುಡಿದರು.

ಅವರು ಮಂಗಳೂರು ನೆಹರೂ ಮೈದಾನದಲ್ಲಿ ಭಾನುವಾರ ನಡೆದ ವಿಜಿಸಿ ಕ್ರೀಡೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಬಡವರಿಗೆ ವಿವಿಧ ಸೇವಾಯೋಜನೆಗಳನ್ನು ನಿರಂತರ ನೀಡುತ್ತಾ ಬರುತ್ತಿರುವ ಈ ಟ್ರಸ್ಟ್ ಅದೇ ಉದ್ದೇಶದಿಂದ ಕ್ರೀಡೋತ್ಸವ ಆಯೋಜಿಸುತ್ತಿದೆ. ಹಾಗಾಗಿ ಎಲ್ಲರೂ ಜಾತಿ-ಭೇದ ಮರೆತು ಯುವಕರ ಕಾರ್ಯಕ್ಕೆ ಕೈಜೋಡಿಸಬೇಕಿದೆ ಎಂದು ಅವರು ತಿಳಿಸಿದರು.

ಸಾಪಲ್ಯ ಸೇವಾ ಸಂಘ(ರಿ.) ಮುಂಬೈ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಟಿ. ಸಪಲಿಗ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಖಿಲ ಕರ್ನಾಟಕ ಗಾಣಿಗರ ಸಂಘ ನಿರ್ದೇಶಕ ಭಾಸ್ಕರ್ ಸಪಲಿಗ ಎಡಪದವು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ.ಬೃಜೇಶ್ ಚೌಟ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉದ್ಯಮಿ ಜನಾರ್ಧನ ಅರ್ಕುಳ, ದ.ಕ. ಜಿಲ್ಲಾ ಪಾಟಾಳಿ ಯಾನೆ ವಾಣೀಯ ಗಾಣಿಗರ ಸಂಘ ಅಧ್ಯಕ್ಷ ಕೆ. ರಾಮ ಮುಗ್ರೋಡಿ, ಮಂಗಳೂರು ಗಾಣಿಗರ ಸಂಘ ಅಧ್ಯಕ್ಷ ನಾರಾಯಣ ಸಪಲ್ಯ ಕಣ್ಣೂರು, ನಿವೃತ್ತ ಯೋಧ ಸುನೀಲ್ ಮಂಜೇಶ್ವರ, ವಿಜಿಸಿ(ರಿ.) ಅಧ್ಯಕ್ಷ ಹರಿಪ್ರಸಾದ್ ಶಕ್ತಿನಗರ, ದಿ ಕರಾವಳಿ ಕ್ರೆಡಿಟ್ ಕೋ.-ಆಪರೇಟಿವ್ ಸೊಸೈಟಿ ನಿರ್ದೇಶಕ ರಮೇಶ್ ಮೆಂಡನ್, ಬಂಟ್ವಾಳ ತಾಲೂಕು ಗಾಣಿಗರ ಯಾನೆ ಸಪಲಿಗರ ಸಂಘ ಪ್ರಧಾನ ಕಾರ್ಯದರ್ಶಿ ದಿನೇಶ್ ಬಂಗೇರ ಪಾಣೆಮಂಗಳೂರು, ಸಫಲ ಸೌಹಾರ್ದ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಸಂಜೀವ ಅಡ್ಯಾರ್, ದ.ಕ. ಜಿಲ್ಲಾ ಗಾಣಿಗರ ಮಹಿಳಾ ಸಂಘ ಪ್ರಧಾನ ಕಾರ್ಯದರ್ಶಿ ಶಾಲಿನಿ ಅತ್ತಾವರ, ಶ್ರೀ ಉಮಾಮಹೇಶ್ವರ ದೇವಸ್ಥಾನ ಅತ್ತಾವರ ಆಡಳಿತ ಮೊಕ್ತೇಸರ ಕೇಶವ ಮಳಲಿ, ಪ್ರಮುಖರಾದ ಪದ್ಮನಾಭ ಅತ್ತಾವರ, ಕಾಂತಪ್ಪ ಸಪಲಿಗ ಮಳಲಿ, ಪ್ರದೀಶ್ ಕುಮಾರ್ ಕೀತೇಶ್ವರ, ವಿಜಯ್ ಕುಮಾರ್ ಶಿವಪಾಲ್, ದಿನೇಶ್ ನೆಟ್ಟಿಬೈಲ್, ಅಶೋಕ್ ಕುಮಾರ್ ಕೀತೇಶ್ವರ, ಅವಿನಾಶ್ ಕೀತೇಶ್ವರ, ಉದಯಕುಮಾರ್, ಪತ್ರಕರ್ತ ದಾಮೋದರ ದೊಂಡೋಲೆ ಮತ್ತಿತರರಿದ್ದರು. ದೀಪಕ್ ಅಡ್ಯಾರ್ ನಿರೂಪಿಸಿದರು. ವಿನಯ್ ಕೀರ್ತೇಶ್ವರ, ದೀಕ್ಷಿತ್ ರೆಂಕೆದಗುತ್ತು ಸಹಕರಿಸಿದರು.

ಫಲಿತಾಂಶ: ಕ್ರಿಕೆಟ್: ಕೂಲ್ ಗೈಸ್ ಕೀತೇಶ್ವರ ಪ್ರಥಮ, ಓಂ ಫ್ರೆಂಡ್ಸ್ ಇನೋಳಿ ದ್ವಿತೀಯ, ಕಬಡ್ಡಿ: ಶ್ರೀರಾಮ್ ಶಂಭೂರು ಪ್ರಥಮ, ಗಾಣಿಗ ಸಂಘ ತೊಕ್ಕೊಟ್ಟು ದ್ವಿತೀಯ, ಭದ್ರಕಾಳಿ ನರಿಕೊಂಬು ತೃತೀಯ, ಮಹಾಲಿಂಗೇಶ್ವರ ತಂಡ ಚತುರ್ಥ. ಮಹಿಳೆಯರ ವಿಭಾಗ: ಹಗ್ಗ-ಜಗ್ಗಾಟ: ಮಹಾಲಿಂಗೇಶ್ವರ ಪ್ರಥಮ, ಬೆಳ್ತಂಗಡಿ ರೋಕರ್ಸ್ ದ್ವಿತೀಯ. ಉಳಿದಂತೆ ರಿಲೇ, ಶಾಟ್‌ಪುಟ್, ಮಡಿಕೆ ಒಡೆಯುವ ಸ್ಪರ್ಧೆ, ೧೦೦ ಮೀ ಓಟ, ಲಿಂಬೆ ಚಮಚ, ಪೊಟಾಟೋ ರೇಸ್ ಇನ್ನಿತರ ಸ್ಪರ್ಧೆಗಳು ನಡೆಯಿತು.

ಎಂಎನ್‌ಜಿ ಮಾರ್ಚ್ ೪ ವಿಜಿಸಿ ಕ್ರೀಡೋತ್ಸವ

ಸಾಪಲ್ಯ ಸೇವಾ ಸಂಘ(ರಿ.) ಮುಂಬೈ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಟಿ. ಸಪಲಿಗ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾಸ್ಕರ್ ಸಪಲಿಗ ಎಡಪದವು, ಸಂಜೀವ ಅಡ್ಯಾರ್, ಸುನೀಲ್ ಮಂಜೇಶ್ವರ, ಹರಿಪ್ರಸಾದ್ ಶಕ್ತಿನಗರ ಮತ್ತಿತರರಿದ್ದರು.

More from the blog

ತಾತ್ಕಾಲಿಕ ರಸ್ತೆಯಿಂದ ನದಿಗೆ ಬಿದ್ದ ಟಿಪ್ಪರ್

ಕೈಕಂಬ: ಪೊಳಲಿ-ಅಡ್ಡೂರು ಪಲ್ಗುಣಿ ಸೇತುವೆಯ ದುರಸ್ಥಿ ಕಾಮಗಾರಿಯ ಹಿನ್ನಲೆಯಲ್ಲಿ‌ ನದಿಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಿಂದ ಟಿಪ್ಪರೊಂದು ನೀರಿಗೆ ಬಿದ್ದ ಘಟನೆ ಬುಧವಾರ ಸಂಭವಿಸಿದೆ. ಪೊಳಲಿ-ಅಡ್ಡೂರು ಸೇತುವೆಯ ದುರಸ್ಥಿ ಕಾಮಗಾರಿಯು ಭರದಿಂದ ಸಾಗುತ್ತಿದ್ದು,ಈ ಹಿನ್ನಲೆಯಲ್ಲಿ ಇದಕ್ಕೆ...

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...