Friday, June 27, 2025

ಮರೆಯಾಗುವ ತುಳು ಪದಗಳನ್ನು ಉಳಿಸಿ ಕೊಡುವುದರಲ್ಲಿ ‘ಪನಿ ಮುತ್ತು ಮಾಲೆ’ ಪ್ರಮುಖ ಪಾತ್ರ : ಸದಾನಂದ ನಾರಾವಿ

ಮುಂಬಯಿ (ಮಂಗಳೂರು): ಆಕಾಶವಾಣಿ ಮಂಗಳೂರು ಕೇಂದ್ರದ ತುಳು ವಿಭಾಗದ ‘ಸ್ವರಮಂಟಮೆ’ ಕೃತಿ/ ಧ್ವನಿಸುರುಳಿ ಬಿಡುಗಡೆಯ ನೇರ ಪ್ರಸಾರ ಕಾರ್ಯಕ್ರಮದ 28ನೆಯ ಸಂಚಿಕೆಯಲ್ಲಿ ಕುಶಾಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ಅವರ ‘ಪನಿ ಮುತ್ತು ಮಾಲೆ’ ತುಳು ಕವನ ಸಂಕಲನ ಬಿಡುಗಡೆ ಗೊಂಡಿತು.

ಮಂಗಳೂರು ಆಕಾಶವಾಣಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ‘ಸ್ವರಮಂಟಮೆ’ ಕೃತಿ, ಧ್ವನಿಸುರುಳಿ ಬಿಡುಗಡೆಯ 28ನೆಯ ಸಂಚಿಕೆಯಲ್ಲಿ ಕುಶಾಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ಅವರ ‘ಪನಿ ಮುತ್ತು ಮಾಲೆ’ ಕೃತಿಯನ್ನು ತುಳು ಕನ್ನಡ ಸಾಹಿತಿ ಸದಾನಂದ ನಾರಾವಿ ಲೋಕಾರ್ಪಣೆ ಮಾಡಿದರು.

“ಕಥೆ, ಕಾದಂಬರಿಗಳನ್ನು ಬರೆದಷ್ಟು ಸುಲಭವಿಲ್ಲ ಕವನಗಳನ್ನು ಹೆಣೆಯುವುದು, ಕವನ ಕಟ್ಟಲು ಅನುಭವದ ಜೊತೆಗೆ ಚತುರತೆ ಹಾಗೂ ತಾಳ್ಮೆ ಬೇಕು ಅಂತಹ ಎಲ್ಲಾ ಗುಣಗಳು ಪಕ್ವವಾಗಿರುವುದು ಈ ಸಂಕಲನದಲ್ಲಿ ಕಾಣಬಹುದು. ಮರೆಯಾಗುತ್ತಿರುವ ಅದೆಷ್ಟೋ ತುಳು ಪದಗಳನ್ನು ಬಳಸಿರುವುದು ಮುಂದಿನ ಪೀಳಿಗೆಗೆ ಭಾಷೆಯನ್ನು ಉಳಿಸಿಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಕನ್ನಡ ಲಿಪಿಯೊಡನೆ ತುಳು ಲಿಪಿಯಲ್ಲೂ ಕವನಗಳು ಅಚ್ಚಾಗಿರುವುದು ಇನ್ನೊಂದು ವಿಶೇಷ” ಎಂದು ಸದಾನಂದ ನಾರಾವಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

“ಒಂದೊಂದು ಕವನ ಕೂಡಾ ವಿಭಿನ್ನವಾಗಿದ್ದು ತುಳು ಆಚಾರ-ವಿಚಾರಗಳನ್ನು ಎಳೆಎಳೆಯಾಗಿ ಬಿಡಿಸಿಕೊಟ್ಟಿದೆ, ತುಳು ಲಿಪಿಯಲ್ಲಿ ಕವನಗಳನ್ನು ಬರೆದಿರುವುದು ಹೊಸ ಪ್ರಯತ್ನ” ಎಂದು ವಿದ್ಯಾಶ್ರಿ ಎಸ್.ಉಳ್ಳಾಲ ವಿಮರ್ಶಿಸಿದರು.

ಬಬ್ಬುಕಟ್ಟೆ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ಕಟೀಲು, ಕ್ರೀಡೆ ಹಾಗೂ ಸಾಂಸ್ಕೃತಿಕ ಸಂಘಟಕಿ ಸಂಗೀತಾ ಸುರತ್ಕಲ್, ಕನ್ನಡ-ತುಳು ಬರಹಗಾರ್ತಿ ಅಕ್ಷತಾರಾಜ್ ಪೆರ್ಲ, ಗುಲಾಬಿ ಟೀಚರ್ ಬ್ರಹ್ಮರಕೂಟ್ಲು, ವಾಸು ಕುಲಾಲ್ ಮತ್ತು ಜಿ.ವಿ.ಎಸ್ ಉಳ್ಳಾಲ ಮುಖ್ಯ ಅತಿಥಿಗಳಾಗಿ ಶುಭಾಶಯ ಕೋರಿದರು.

ಸಹಾಯಕ ನಿಲಯ ನಿರ್ದೇಶಕರಾದ ಉಷಾಲತಾ ಸರಪಾಡಿ ಸ್ವಾಗತಿಸಿ ‘ಆಕಾಶವಾಣಿ ಕೇಳುಗರ ಸಂಖ್ಯೆ ಹೆಚ್ಚಾಗುವಲ್ಲಿ ತುಳು ವಿಭಾಗದ ಪಾತ್ರ ಕೂಡಾ ಮಹತ್ವದ್ದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ನಮ್ಮ ಮೂಲ ನೆಲಸಂಸ್ಕೃತಿ ಉಳಿಸುವುದು ಜವಾಬ್ದಾರಿ’ ಎಂದ ಮಂಗಳೂರು ಆಕಾಶವಾಣಿ ಕೇಂದ್ರದ ತುಳು ಕಾರ್ಯಕ್ರಮ ವಿಭಾಗ ಮುಖ್ಯಸ್ಥ ಡಾ| ಸದಾನಂದ ಪೆರ್ಲ ಕಾರ್ಯಕ್ರಮವನ್ನು ಸಂಘಟಿಸಿ ನಿರೂಪಿಸಿದರು. ತಾಂತ್ರಿಕ ವಿಭಾಗದ ಚಂದ್ರಶೇಖರ ಶೆಟ್ಟಿ, ಪ್ರಕಾಶ್ ಬಿ.ಸಿ.ರೋಡು, ರಾಧಾ ಪ್ರಭಾಕರನ್, ಮೋಹನದಾಸ ಮರೋಳಿ ಹಾಗೂ ಉದ್ಘೋಷಕರಾದ ರಾಧಾಕೃಷ್ಣ ಶೆಟ್ಟಿ ಬಾಯಾರು ಸಹಕರಿಸಿದರು.

More from the blog

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...