ಜಾತಿಯತೆ ಹೋಗಲಾಡಿಸಬೇಕು. ಎಲ್ಲರನ್ನೂ ಸಮಾನರಾಗಿ ಕಾಣಬೇಕು ಎನ್ನುವ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಗುರು ಬೆಳದಿಂಗಳು ಸೇವಾ ಸಂಸ್ಥೆ ಮೂಲಕ ಅಕ್ಷರಶಃ ಪಾಲನೆಯಾಗುತ್ತದೆ ಎಂದು ಮೂಲ್ಕಿ ಸೀಮೆಯ ದುಗ್ಗಣ್ಣ ಸಾವಂತ ಅರಸರು ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರುವರ್ಯರ 167ನೇ ಜನ್ಮದಿನ ಪ್ರಯುಕ್ತ ಕುದ್ರೋಳಿ ಗುರು ಬೆಳದಿಂಗಳು ಸೇವಾ ಸಂಸ್ಥೆಯಿಂದ ಮೂಲ್ಕಿಯ ಚಂದ್ರನಾಥ ಸ್ವಾಮಿ ಬಸದಿ ವಠಾರದಲ್ಲಿ ಶುಕ್ರವಾರ ಔಷಧೀಯ ಸಸ್ಯಗಳ ನೆಡುವ ಮೂರನೇ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚರ್ಚ್, ಬಸದಿ, ಮಸೀದಿ, ದೇವಸ್ಥಾನದಲ್ಲಿ ಔಷಧೀಯ ಗಿಡಗಳನ್ನು ನೆಡುವ ಮೂಲಕ ಗುರುಗಳ ನಾವೆಲ್ಲರೂ ಒಂದೇ ಎನ್ನುವ ತತ್ವ ಪರಿಪಾಲನೆಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.
ಪಣಂಬೂರು ಎಸಿಪಿ ಮಹೇಶ್ ಕುಮಾರ್, ಗುರುಬೆಳದಿಂಗಳು ಸಂಸ್ಥೆ ಅಧ್ಯಕ್ಷ ಪದ್ಮರಾಜ್ ಆರ್. ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅನಿಲ್ಕುಮಾರ್, ಗುರು ಚಾರಿಟೆಬಲ್ ಟ್ರಸ್ಟ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ಬಹರೆನ್ ಬಿಲ್ಲವಾಸ್ ಸ್ಥಾಪಕಾಧ್ಯಕ್ಷ ರಾಜ್ಕುಮಾರ್, ಉದ್ಯಮಿ ವಿವೇಕ್ರಾಜ್ ಪೂಜಾರಿ, ಏಸ್ ಪ್ರಮೋಟರ್ಸ್ನ ಗುರುಮೂರ್ತಿ ರಾವ್, ಬಿಲ್ಲವ ಮಹಾಮಂಡಲ ಖಜಾಂಚಿ ಯೋಗೀಶ್ ಕೋಟ್ಯಾನ್, ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ಉದಯ ಅಮೀನ್ ಮಟ್ಟು, ಸುವರ್ಣ ಆರ್ಟ್ಸ್ ಚಂದ್ರಶೇಖರ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

