Wednesday, January 28, 2026

ಮಾಡರ್ನ್ ಕವನ: ಕಂಡಿದೆಲ್ಲ ನಿಜವಲ್ಲ

ಈ ಹುಚ್ಚು ಬಯಕೆ
ಹುಟ್ಟಿದ್ದೇ ತಡ
ಆ ಪರಮ ಶಿವನನ್ನು ಕಾಡಿ ಬೇಡಿ
ಕನಸಲ್ಲೇ
ಪಡೆದ ವರ ಇದು..!?
ನಾ ಕಂಡ ಕನಸೆಲ್ಲ
ನಿಜವಾಗುವುದು..!

ನಿನ್ನೆ ಕಂಡ ಕನಸು
ಸೂರ್ಯನನ್ನೇ ಮುಟ್ಟಿ ಬಂದದ್ದು..!
ಇಂದು..
ಹಗ್ಗವನ್ನು ಹಾವೆಂದು
ಬರೆಯುವ ಪೇಪರ್ ನಲ್ಲಿ..,
ಬೆಳಿಗ್ಗೆಯಿಂದ ಸಂಜೆ ತನಕ
ಒಂದನ್ನೇ ರಿಪೀಟ್ ಮಾಡಿ
ತೋರಿಸುವ ನ್ಯೂಸ್ ಚಾನಲ್ ಗಳಲ್ಲಿ..,
ಕಥೆ ಕಟ್ಟಿ, ಬಣ್ಣ ಹಚ್ಚಿ
ಫೇಸ್ ಬುಕ್ ವಾಲ್ ನಲ್ಲಿ
ವಾಟ್ಸ್ ಆಪ್ ಸ್ಟೇಟಸ್ ನಲ್ಲಿ
ಟ್ವಿಟರ್ ಕಾಮೆಂಟ್ ಗಳಲ್ಲಿ
ಎಲ್ಲೆಲ್ಲೂ ಅದೇ ವಿಷಯ…!

ಕೆಲವರು
ನನ್ನ ದೇವರೆಂದು,
ಮಹಾ ವಿಜ್ಞಾನಿ,
ಭಾರತದ ಹೆಮ್ಮೆ..
ಇದೊಂದು ಮಹಾಸಾಧನೆ
ಹೊಸ ಇತಿಹಾಸ
ಎಂದೆಲ್ಲ ಬಣ್ಣಿಸಿದರೆ.,
ಮತ್ತೆ ಕೆಲವರು
ಇದು ಸುಳ್ಳು,
ಮಹಾ ಮೋಸ
ಇದು ಅಸಾಧ್ಯ
ಸತ್ಯ ತಿಳಿಯಲೇ ಬೇಕು..
ಎಂದೆಲ್ಲಾ ವಾದ ಮಂಡಿಸಿದರು..
ನನ್ನ ಪರ ಒಬ್ಬರು,ವಿರೋಧ ಮತ್ತೊಬ್ಬರು..

ಕೊನೆಗೆ ಸತ್ಯ ಅನ್ವೇಷಣೆಗೆ
ನನ್ನೇ ಪ್ರಶ್ನಿಸಲಾಯಿತು..
ಏನು ಉತ್ತರಿಸಲಿ..!
ಬರೀ ಕನಸೆಂದು ಹೇಳಲೇ
ಅಥವಾ ನಾ ಕಂಡ ಕನಸು ನಿಜವಾಗುತ್ತೆಂದು
ಹೇಳಲೇ
ಅಥವಾ
ನೀವು ನೀವು ತರ್ಕಿಸುವುದನ್ನು
ನಿಲ್ಲಿಸಿ ಎನ್ನಲೇ..?

ಅಥವಾ
ನೀವು ಕಂಡದ್ದೆಲ್ಲ ನಿಜವಲ್ಲ
ಎಂದು ಬಿಡಲೇ..!

ಯತೀಶ್ ಕಾಮಾಜೆ

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...